spot_img
spot_img

ಪಾಲಣ್ಣನ ಹೊಟೇಲಿನಲ್ಲಿ ತಿಂಡಿ ಸವಿದ ಶಿಕ್ಷಣ ಮಂತ್ರಿ

Must Read

- Advertisement -

ತಿಪಟೂರು: ತಿಪಟೂರಿನಿಂದ ಕೇವಲ 9 ಕಿಲೋಮೀಟರ್ ದೂರವಿರುವ ಪಾಲಣ್ಣನ ಹೋಟೆಲಿನಲ್ಲಿ ಇತ್ತೀಚೆಗೆ ಸರಳ ಸಜ್ಜನಿಕೆಯ ವಿದ್ಯಾಮಂತ್ರಿ ಬಿಸಿ ನಾಗೇಶ್ ರವರು ತಿಂಡಿ ಸವಿದರು.

ಗ್ಯಾಸ್ ಸಿಲಿಂಡರ್ ಬೆಲೆ ದುಬಾರಿಯಾಗಿರುವುದರಿಂದ ಹಳ್ಳಿಯ ರೀತಿಯಲ್ಲಿ ತೆಂಗಿನ ಮಟ್ಟೆ ಕಾಯಿಯನ್ನು ಉಪಯೋಗಿಸಿ ಹಳೆಯ ಪದ್ಧತಿಯಂತೆ ರುಚಿಕರವಾದ ತಟ್ಟೆ ಇಡ್ಲಿ ತಯಾರಿಸುತ್ತಾರೆ. ಹೋಟೆಲ್ ನ ಸಮಯ ಬೆಳಗ್ಗೆ 8 ರಿಂದ10 ರವರೆಗೆ ಮಾತ್ರ ಇದ್ದು ಇಲ್ಲಿನ ತಟ್ಟೆ ಇಡ್ಲಿ ಪ್ರಸಿದ್ಧ ವಾಗಿದೆ

ಹೋಟೆಲ್ ನ ವಿಶೇಷ ತಟ್ಟೆ ಇಡ್ಲಿಯ ಜೊತೆ ಖಾರದ ಚಟ್ನಿ, ವಡೆ, ಎಳ್ಳಿಕಾಯಿ ಚಿತ್ರಾನ್ನ, ಗಂಡ-ಹೆಂಡತಿ ಇಬ್ಬರೇ (ಮಾಲೀಕರು ಹಾಗೂ ತಯಾರಕರು) ಈ ಹೋಟೆಲ್ ನಡೆಸುತ್ತಾರೆ. ಇಂಥ ಹೋಟೆಲ್ನಲ್ಲಿ ವಿದ್ಯಾಮಂತ್ರಿ ಸರಳವಾಗಿ ಒಬ್ಬರೇ ಹೋಗಿ ರಸ್ತೆ ಬದಿಯ ಬೆಂಚ್ ಕಲ್ ನಲ್ಲಿ ಕುಳಿತು ಸಾಮಾನ್ಯರಲ್ಲಿ ಸಾಮಾನ್ಯರಂತೆ ತಿಂಡಿ ಸವೆ ದಿರುವುದು ವಿಶೇಷ. ಈ ಹೋಟೆಲ್ ದುಬಾರಿ ಅಲ್ಲ. ರಸ್ತೆಬದಿಯಲ್ಲಿ ಇರುವ ಹೋಟೆಲ್ ಗೆ ಎಲ್ಲ ಸಾರ್ವಜನಿಕರು ನಿಗದಿಯಾದ ವೇಳೆಯಲ್ಲಿ ಹೋಗಿ ತಿಂಡಿ ತಿಂದು ಬರುತ್ತಾರೆ.

- Advertisement -

ದುಬಾರಿ ಹಣ ಖರ್ಚುಮಾಡಿ ಊಟ ತಿಂಡಿ ಮಾಡುವ ಮಂತ್ರಿ ಗಳಿದ್ದು ಇಂತಹ ಕಾಲದಲ್ಲಿ ನಾಗೇಶ್ ಅವರು ಸಾಮಾನ್ಯ ಜನರಂತೆ ಸರಳವಾಗಿ ತಿಂಡಿ ಸವಿದಿದ್ದು ಇತರ ಮಂತ್ರಿಗಳಿಗೆ ಮಾದರಿ ಎನ್ನಬಹುದು.

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group