ಕವನ: ಮೊರೆ ಕೇಳು ಮಹಾದೇವ

Must Read

ಮೊರೆ ಕೇಳು ಮಹಾದೇವ

ವರುಷದ ಮೊದಲ ಹಬ್ಬ ಯುಗಾದಿ
ತರಲಿ ನಮಗೆಲ್ಲ ಹರುಷ ಅನುದಿನದಿ
ಕೋಪ ತಾಪ ದ್ವೇಷ ಅಸೂಯೆ
ತನುಮನಗಳಿಂದ ‌ ಮಹಾದೇವ||

ಚಿಗುರೆಲೆಗಳು ಚಿಗುರುವಂತೆ
ತರುಲತೆಗಳು ಬೆಳೆಯುವಂತೆ
ನವ ಯುಗದಿ ನವ ತರುಣರು
ಸತ್ಕಾರ್ಯಗಳಲಿ ತೊಡಗಲಿ ಮಹಾದೇವ||

ಮಾವಿನ ಸಿಹಿ ಬೇವಿನ ಕಹಿ
ಜೀವನದ ಸಮರಸಕೆ ಮಾದರಿ
ಸಿಹಿಕಹಿಯ ಸಮಾನತೆಯಲಿ
ಸ್ವೀಕರಿಸುವಂತೆ ಮಾಡು ಮಹಾದೇವ ||

ದುಶ್ಚಟಗಳು ದೂರಾಗಲಿ
ಕಷ್ಟಗಳು ಮಾಯವಾಗಲಿ
ಹೊಸ ವರುಷಕೆ ಹುಮ್ಮಸ್ಸಿನಲಿ
ದುಡಿದುಣ್ಣುವ ಶಕ್ತಿ ನೀಡು ಮಹಾದೇವ||

ಕಾಲ ಸದ್ದಿಲ್ಲದೆ ಸರಿಯುತಿದೆ
ಸಾಧನೆ ಮಾತ್ರ ಶೂನ್ಯವಾಗಿದೆ
ಕಾಯಕ ಮಾಡುವ ಕೈಗಳಿಗೆ
ನವನಾವೀನ್ಯತೆಯ ಕರುಣಿಸು ಮಹಾದೇವ||

ವರುಷವೆಲ್ಲ ಹಬ್ಬಗಳ ಆಚರಣೆ
ಮಾಡುತಿಲ್ಲ ನಿಜವಾದ ಅನುಕರಣೆ
ಆಚರಣೆಗಳ ಹಿಂದಿರುವ ಮರ್ಮವ
ತಿಳಿವಂತೆ ಅರುಹಯ್ಯ ಮಹಾದೇವ||

ಕೋಶ ಓದಿದರೂ ದೇಶ ಸುತ್ತಿದರೂ
ಮತಿಯು ಮಿತಿಯಲಿಲ್ಲ ಕೇಳಯ್ಯಾ
ಬುವಿಯಲಿ ಅಲ್ಲೋಲ ಕಲ್ಲೋಲ
ಕಂಡರೂ ಕಾಣದಂತೇಕಿರುವೆ ಮಹಾದೇವ ||

ಹಳೆತನದ ಕೊಳೆ ಕೊಚ್ಚಿ
ಹೊಸತನದ ರೂಪ ಹಚ್ಚಿ
ಭಾರತಾಂಬೆಯ ಸುಸಂಸ್ಕೃತಿಯ
ತಿಳಿದು ಬದುಕುವಂತೆ ದಾರಿ ತೋರು ಮಹಾದೇವ||


ರಚನೆ ಶ್ರೀಮತಿ ಜ್ಯೋತಿ ಕೋಟಗಿ,
ಶಿಕ್ಷಕಿ ಸ.ಮಾ.ಪ್ರಾ ಶಾಲೆ ತಲ್ಲೂರ.
ತಾ ಸವದತ್ತಿ ಜಿ ಬೆಳಗಾವಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group