spot_img
spot_img

ಕವನ: ಮೊರೆ ಕೇಳು ಮಹಾದೇವ

Must Read

ಮೊರೆ ಕೇಳು ಮಹಾದೇವ

- Advertisement -

ವರುಷದ ಮೊದಲ ಹಬ್ಬ ಯುಗಾದಿ
ತರಲಿ ನಮಗೆಲ್ಲ ಹರುಷ ಅನುದಿನದಿ
ಕೋಪ ತಾಪ ದ್ವೇಷ ಅಸೂಯೆ
ತನುಮನಗಳಿಂದ ‌ ಮಹಾದೇವ||

ಚಿಗುರೆಲೆಗಳು ಚಿಗುರುವಂತೆ
ತರುಲತೆಗಳು ಬೆಳೆಯುವಂತೆ
ನವ ಯುಗದಿ ನವ ತರುಣರು
ಸತ್ಕಾರ್ಯಗಳಲಿ ತೊಡಗಲಿ ಮಹಾದೇವ||

ಮಾವಿನ ಸಿಹಿ ಬೇವಿನ ಕಹಿ
ಜೀವನದ ಸಮರಸಕೆ ಮಾದರಿ
ಸಿಹಿಕಹಿಯ ಸಮಾನತೆಯಲಿ
ಸ್ವೀಕರಿಸುವಂತೆ ಮಾಡು ಮಹಾದೇವ ||

- Advertisement -

ದುಶ್ಚಟಗಳು ದೂರಾಗಲಿ
ಕಷ್ಟಗಳು ಮಾಯವಾಗಲಿ
ಹೊಸ ವರುಷಕೆ ಹುಮ್ಮಸ್ಸಿನಲಿ
ದುಡಿದುಣ್ಣುವ ಶಕ್ತಿ ನೀಡು ಮಹಾದೇವ||

ಕಾಲ ಸದ್ದಿಲ್ಲದೆ ಸರಿಯುತಿದೆ
ಸಾಧನೆ ಮಾತ್ರ ಶೂನ್ಯವಾಗಿದೆ
ಕಾಯಕ ಮಾಡುವ ಕೈಗಳಿಗೆ
ನವನಾವೀನ್ಯತೆಯ ಕರುಣಿಸು ಮಹಾದೇವ||

ವರುಷವೆಲ್ಲ ಹಬ್ಬಗಳ ಆಚರಣೆ
ಮಾಡುತಿಲ್ಲ ನಿಜವಾದ ಅನುಕರಣೆ
ಆಚರಣೆಗಳ ಹಿಂದಿರುವ ಮರ್ಮವ
ತಿಳಿವಂತೆ ಅರುಹಯ್ಯ ಮಹಾದೇವ||

- Advertisement -

ಕೋಶ ಓದಿದರೂ ದೇಶ ಸುತ್ತಿದರೂ
ಮತಿಯು ಮಿತಿಯಲಿಲ್ಲ ಕೇಳಯ್ಯಾ
ಬುವಿಯಲಿ ಅಲ್ಲೋಲ ಕಲ್ಲೋಲ
ಕಂಡರೂ ಕಾಣದಂತೇಕಿರುವೆ ಮಹಾದೇವ ||

ಹಳೆತನದ ಕೊಳೆ ಕೊಚ್ಚಿ
ಹೊಸತನದ ರೂಪ ಹಚ್ಚಿ
ಭಾರತಾಂಬೆಯ ಸುಸಂಸ್ಕೃತಿಯ
ತಿಳಿದು ಬದುಕುವಂತೆ ದಾರಿ ತೋರು ಮಹಾದೇವ||


ರಚನೆ ಶ್ರೀಮತಿ ಜ್ಯೋತಿ ಕೋಟಗಿ,
ಶಿಕ್ಷಕಿ ಸ.ಮಾ.ಪ್ರಾ ಶಾಲೆ ತಲ್ಲೂರ.
ತಾ ಸವದತ್ತಿ ಜಿ ಬೆಳಗಾವಿ

- Advertisement -
- Advertisement -

Latest News

ಹಾಲವಾಣ(ಹೊಂಗಾರಕ)

ಸಣ್ಣ ವಯಸ್ಸಿನಲ್ಲಿ ಕೈಗೆ ಮದರಂಗಿ ಕಟ್ಟಲು ಬಳಸುತ್ತಿದ್ದ ಎಲೆ ಹಾಲವಣ. ಇದರ ಬಳಕೆ ಒಂದೇ ಎರಡೇ. ರೈತರ ಹೊಲದಲ್ಲಿ ನೆಟ್ಟು ಎಲೆ ಬಳ್ಳಿ ಮೆಣಸಿನ ಬಳ್ಳಿ ಹಬ್ಬಿಸಲು....
- Advertisement -

More Articles Like This

- Advertisement -
close
error: Content is protected !!
Join WhatsApp Group