spot_img
spot_img

ಕವನ

Must Read

- Advertisement -

ಸಜ್ಜಾಗಬೇಕು

ಮುಗಿದು ಹೋಯಿತು
ಐವತ್ತು ದಿನಗಳ
ಪ್ರಜಾಪ್ರಭುತ್ವದ ದೀರ್ಘ
ಪ್ರಹಸನ
ಎಲ್ಲರ ಭವಿಷ್ಯದ ಕನಸು
ಲೆಕ್ಕಾಚಾರ ಎಕ್ಸಿಟ್ ಪೋಲ್
ಟಿವಿ ಕಿರುಚಾಟ ಎಲ್ಲವೂ ಹುಸಿಯಾಯಿತು
ನಿನ್ನೆ ಚುನಾವಣೆ ಫಲಿತಾಂಶ
ಯಾರಿಗೂ ಸಿಗಲಿಲ್ಲ ಬಹುಮತ
ಮಾಧ್ಯಮಗಳ ಅಬ್ಬರ ಮೌನ
ಯಾರಿಗೂ ಖುಷಿ ಇಲ್ಲ
ದುಃಖವೂ ಇಲ್ಲ
ಮಿತ್ರ ಪಕ್ಷಗಳಿಗೆ ಶರಣು
ಅವರದ್ದೆ ಆಟ ವ್ಯವಹಾರ
ಭಾರಿ ಆದಾಯ ಖಾತೆಗಳ ಬೇಡಿಕೆ
ಆಡಳಿತ ಪಕ್ಷ ಮಗ್ಗರಿಸಿದೆ
ವಿರೋಧ ಪಕ್ಷಗಳ ಸ್ಥಾನ ಹೆಚ್ಚಳ
ಈಗ ಯಾರಿಗೂ ಇಲ್ಲ
ಇ ವಿ ಎಂ ಮೇಲೆ ಅನುಮಾನ
ಚುನಾವಣೆ ಗೆದ್ದು ಬಿಗುವುದಲ್ಲ
ಬಿದ್ದು ಬಾಗುವುದೂ ಅಲ್ಲ
ಗೆದ್ದದ್ದು ಸತ್ಯ ಸೇವೆ ನಿಷ್ಠೆ
ಸೋತದ್ದು ವ್ಯಕ್ತಿಯ ಅಹಂಕಾರ
ಆಯೋಧ್ಯೆ ರಾಮ ಹರಿಸಲಿಲ್ಲ
ಸೋಲಲಿಲ್ಲ ಬುದ್ಧ ಬಸವ ಬಾಪು
ಬದಲಾಗುವದಿಲ್ಲ ಸಂವಿಧಾನ
ಆದರೂ ಖುಷಿ ಪಡಬೇಕಿಲ್ಲ
ಕೂಗು ಕುಣಿತ ವಾದ್ಯವಿಲ್ಲ
ಕೊನೆಗೊಳ್ಳಬೇಕಿದೆ
ಹಸಿವು ಶೋಷಣೆ ಬಡತನ
ನಾವು ಮತ್ತೆ ಸಜ್ಜಾಗಬೇಕು
ಶಾಂತಿ ಸಮತೆ ಸಮರಕೆ
ಕೋಟೆ ಕಟ್ಟಲು ಕಹಳೆ ಊದಲು

ಡಾ ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group