ಮಕ್ಕಳ ಕವಿತೆ : ಗಣಪನ ಹಾಡು

Must Read

ಗಣಪನ ಹಾಡು

ಚಿಕ್ಕ ಕಣ್ಣು ದೊಡ್ಡ ಕಿವಿಯ
ಏಕದಂತನೆ
ಡೊಳ್ಳು ಹೊಟ್ಟೆ ಆನೆ ಮುಖದ
ಅಭಯ ಹಸ್ತನೆ

ವಿದ್ಯೆ ಬುಧ್ಧಿ ನೀಡಿ ಪೊರೆವ
ವಿಶ್ವವಂದ್ಯನೆ
ವಿಘ್ನಹರನೆ ಶಾಂತಿದೂತನೆ
ನಮಿಪೆ ಗಣಪನೆ

ಭಾದ್ರಪದ ಚೌತಿದಿನ
ಮನೆಗೆ ನಿನ್ನ ತರುವರು
ಸಿಂಗರಿಸಿದ ಮಂಟಪದಲಿ
ಇಟ್ಟು ಸಂತಸ ಪಡುವರು

ಕೆಲವು ದಿನ ಭಕ್ತಿಯಿಂದ
ನಿನ್ನ ಪೂಜೆಗೖವರು
ವಿಘ್ನಗಳನು ದೂರ ಮಾಡು
ಎಂದು ಬೇಡಿಕೊಂಬರು

ಸಿಹಿ ತಿನಿಸಿ ಪಟಾಕಿ ಸಿಡಿಸಿ
ಹರುಷದಿಂದ ನಲಿವರು
ಕೊನೆಗೆ ನಿನ್ನನು ಬಾವಿಗೆಸೆದು
ಕೇಕೆ ಹಾಕಿ ಕುಣಿವರು

ಆರ್. ಎಸ್. ಚಾಪಗಾವಿ
ವಾಣಿ… 8317404648…

Latest News

ಪ್ರಗತಿಪರ ಕೃಷಿಕರು ನಟರು ಪುಟ್ಟಸ್ವಾಮಿಗೌಡ ಆರ್.ಕೆ.

ಪುಟ್ಟಸ್ವಾಮಿಗೌಡ ಆರ್. ಕೆ. ರಂಗಭೂಮಿ ನಟ ಪ್ರಗತಿ ಪರ ಕೃಷಿಕರು. ಮೊನ್ನೆ ಮೈಸೂರಿನಲ್ಲಿ ಚೆನ್ನರಾಯಪಟ್ಟಣದ ಡಾ.ಚಂದ್ರ ಕಾಳೇನಹಳ್ಳಿ ರಚನೆ ನಿರ್ವಹಣೆಯಲ್ಲಿ ದಸರಾ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ...

More Articles Like This

error: Content is protected !!
Join WhatsApp Group