ಸಾಂಸ್ಕೃತಿಕ ರಾಯಭಾರಿ
ಬಡವರ ಬಾಳಿನ ವಿದ್ಯಾದಾತರು
ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು
ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು
ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/
ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು
ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು
ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/
ಮನುಕುಲೋದ್ಧಾರಕ ಹಿತಚಿಂತಕರು
ಶರಣರ ಸಂದೇಶ ಪರಿಪಾಲಕರು
ದಯೆ ಮಮತೆ ಕರುಣಾ ಸಾಗರರು
ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/
ಶರಣರ ಸಂದೇಶ ಪರಿಪಾಲಕರು
ದಯೆ ಮಮತೆ ಕರುಣಾ ಸಾಗರರು
ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/
‘ಅರಿವೆ ಗುರು’ ತತ್ವಾದರ್ಶ ಆರಾಧಕರು
ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು
ಸರಳ ಸಾಮಾಜಿಕ ಅಪೂರ್ವ ಸಾಧಕರು
ಕಾಯಕದಲ್ಲಿ ಕೈಲಾಸ ಕಂಡುಂಡವರು/೩/
ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು
ಸರಳ ಸಾಮಾಜಿಕ ಅಪೂರ್ವ ಸಾಧಕರು
ಕಾಯಕದಲ್ಲಿ ಕೈಲಾಸ ಕಂಡುಂಡವರು/೩/
ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರು
ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು
ಮನುಕುಲದ ವೈರತ್ವ ನಿವಾರಿಸಿಹರು
ವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/
ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು
ಮನುಕುಲದ ವೈರತ್ವ ನಿವಾರಿಸಿಹರು
ವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/
ಬಡತನದ ಬವಣೆಯಲಿ ಬೆಂದವರು
ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರು
ಜನ್ಮಶತಮಾನೋತ್ಸವದ ಮಹಾನಾಯಕರು
ಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/
ನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರು
ಜನ್ಮಶತಮಾನೋತ್ಸವದ ಮಹಾನಾಯಕರು
ಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/
ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರು
ಅಂತಾರಾಷ್ಟ್ರೀಯ ಸಂಘಟನಾ ಚತುರರು
ಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರು
ಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/
ಅಂತಾರಾಷ್ಟ್ರೀಯ ಸಂಘಟನಾ ಚತುರರು
ಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರು
ಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/
ಬಹು ಕ್ಷೇತ್ರ ಅನುಪಮ ಸಾಧಕವರೇಣ್ಯರು
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು
ಕನ್ನಡ ನಾಡುನುಡಿಯ ಸೌಭಾಗ್ಯ ದೇವರು
ವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/
ಗೌರವ ಡಾಕ್ಟರೇಟ್ ಪದವಿ ಪುರಸ್ಕೃತರು
ಕನ್ನಡ ನಾಡುನುಡಿಯ ಸೌಭಾಗ್ಯ ದೇವರು
ವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/
********
— ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ.
ವಿಶ್ರಾಂತ ಕನ್ನಡ ಪ್ರಾಧ್ಯಾಪಕರು.ಗದಗ