ಕವನ

Must Read

ಗೆದ್ದು ಬೀಗಿದರು

ಪಕ್ಷ ಸೋತಿತು
ದೇಶ ಗೆದ್ದಿತು
ಇಲ್ಲ ಯಾರಿಗೂ
ಬಹುಮತ
ಇನ್ನು ಮುಂದೆ
ಇಲ್ಲ ಭಯ ಭೀತಿ
ಹಲವು ಜನರು
ಕೂಡಿ ಮಾಡುವ
ಹಂಗಿನಲ್ಲಿನ
ಅರಮನೆ
ಒಂದು ಟಿವಿಗೆ
ಎರಡು ರಿಮೋಟ್
ನೋಡುವ ಹಾಗಿಲ್ಲ
ಬೇಕಾದ ಪ್ರೋಗ್ರಾಮ್
ಒಂದು ತಟ್ಟೆಗೆ
ಎರಡು ಸವಟು
ಬೇಕಾಬಿಟ್ಟಿ
ಉಣ್ಣುವ ಹಾಗಿಲ್ಲ
ಇಂದೋ ನಾಳೆಯೋ
ನಾಯಕನ ಶಪಥ
ನಿಲ್ಲಿಸಬೇಕು ಕೂಡಲೇ
ಅಗ್ನಿಪಥ
ಮೊದಲಿನ ಹಾಗೆ
ವಿರೋಧಿಗಳನ್ನು
ಕುಕ್ಕುವ ಹಾಗಿಲ್ಲ
ಈಡಿ ಐಟಿ ಸಿಬಿಐ
ರೇಡ್ ಮಾಡುವ ಹಾಗಿಲ್ಲ
ಬೇಕಾದಾಗ ಬೇಕಾದವರನ್ನು
ಬಂಧಿಸುವ ಹಾಗಿಲ್ಲ
ಇಬ್ಬರಿಗೆ ಬೇಡಿದ ಖಾತೆ
ಉಳಿದವರೂ ಕೇಳುತ್ತಾರೆ
ಬೆಲೆ ಬಾಳುವ ಮಂತ್ರಿಗಿರಿ
ಪಾಪ ಅಬ್ಬರಿಸಿದ
ದೇವ ಮಾನವ ಮೌನ
ರಾಮನ ಕೃಪೆ ಆಗಲಿಲ್ಲ
ಕಾಶಿ ವಿಶ್ವನಾಥ
ಕೋಪಗೊಂಡ
ಹಿಂಸೆ ದ್ವೇಷ ಕೋಮು ದಳ್ಳುರಿ
ಅಹಂಕಾರದ ಸೋಲು
ಗೆದ್ದು ಬೀಗಿದರು
ಬುದ್ಧ ಬಸವರು

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group