ಕವನ

Must Read

ಯೋಗದಿಂದ ದೂರ ರೋಗ

ದಿನವೂ ಯೋಗ ಮಾಡಬೇಕು
ರೋಗದಿಂದ ದೂರ ಇರಬೇಕು
ಯೋಗ ಧ್ಯಾನದಿಂದ ಮನಸ್ಸು ಹಿಡಿತದಲ್ಲಿರುತ್ತದೆ
ಏಕಾಗ್ರತೆ ಹೆಚ್ಚಿಸುತ್ತದೆ ಶಾಂತಿ ನೆಮ್ಮದಿ ದೊರಕಿಸುತ್ತದೆ.

ಯೋಗ ಮಾಡಿದರೆ ಮನಸ್ಸು ಪ್ರಫುಲ್ಲವಾಗಿರುತ್ತದೆ
ಲವಲವಿಕೆ ಇಂದಿರಲು ಸಹಾಯಮಾಡುತ್ತದೆ
ಹೊಸ ಚೈತನ್ಯ ಉಲ್ಲಾಸದ ಚಿಲುಮೆ ದೊರಕಿಸುತ್ತದೆ
ಸಹನೆ, ತಾಳ್ಮೆ, ಸೌಂದರ್ಯ ಹೆಚ್ಚಿಸುತ್ತದೆ.

ಆತ್ಮಬಲ ವೃದ್ಧಿಸುವ ಶಕ್ತಿಯು ಈ ಯೋಗವು
ಯೋಗದ ಮಹತ್ವ ಅರಿತುಕೊಂಡು ನಡೆಯೋಣ
ನಿತ್ಯ ಯೋಗಸ್ತರಾಗಿ ಧ್ಯಾನಸ್ತರಾಗೋಣ
ಸುಂದರ ಜೀವನವನ್ನು ಅನುಭವಿಸೋಣ.

ಅನಾರೋಗ್ಯಕ್ಕೆ ವಿದಾಯ ಹೇಳಿರಿ
ಆರೋಗ್ಯವೇ ಭಾಗ್ಯ ಎಂದು ತಿಳಿಯಿರಿ
ಯೋಗದಿಂದ ಕ್ರಿಯಾಶೀಲತೆ ಬೆಳೆಸಿಕೊಳ್ಳೋಣ
ರೋಗ ಮುಕ್ತ ಜೀವನ ನಮ್ಮದಾಗಿಸಿಕೊಳ್ಳೋಣ

ಜ್ಯೋತಿ ಸಂಜು ಮುರಾಳೆ

Latest News

ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ – ಶಿವಶರಣಪ್ಪ

ಸಿಂದಗಿ; ನಾಡಗೀತೆಯಲ್ಲಿ ಸರ್ವಜನಾಂಗದ ಶಾಂತಿಯ ತೋಟವಿದೆ. ಭಾವನೆಗಳ ಗ್ರಂಥವಿದೆ. ಸರ್ವ ಹೃದಯದ ಬಂಧವಿದೆ. ಕನ್ನಡ ಭಾಷೆಗೆ ೨ ಸಾವಿರ ವರ್ಷಗಳ ಇತಿಹಾಸವಿದೆ. ಕಾವೇರಿಯಿಂದ ಗೋದಾವರಿಯವರೆಗೆ ಕನ್ನಡ...

More Articles Like This

error: Content is protected !!
Join WhatsApp Group