spot_img
spot_img

ಕವನಗಳು

Must Read

spot_img
- Advertisement -

ಸಾಯುವದಿಲ್ಲ

ಭಾವನೆಗಳು
ಸಾಯುವದಿಲ್ಲ
ಕಾರಣ ಹೃದಯ
ನೆನಪುಗಳ ಎರಕದಲ್ಲಿ
ಕನಸುಗಳಿಗೆ
ಜೀವ ನೀಡುತ್ತವೆ
ಕಥೆ ಕಾವ್ಯಕವನ
ಶಬ್ದಗಳ ಜಾತ್ರೆ
ಪ್ರೀತಿ ಇದ್ದಲ್ಲಿ
ಹೃದಯ ಸೋಲುತ್ತಲೆ
ಇರುತ್ತದೆ.
ಸೋತ ನೋವಿಲ್ಲ
ಗೆದ್ದವರ ಮೊಗದಲ್ಲಿನ
ಮುಗುಳು ನಗೆಯ
ನಿರೀಕ್ಷೆಯ ಸಂತಸ
ಸಂಭ್ರಮ ನಿತ್ಯವೆನಗೆ

ಹುಡುಕಿ ಕೊಳ್ಳುವ
_________________

- Advertisement -

ಒಲುಮೆಗಾಗಿ
ನಾವಿಬ್ಬರೂ ಹೀಗೆ
ಸೋಲುತ್ತಲೆ
ಗೆಲುವು ಕಾಣೋಣ

ನೀನು ನಾನು
ಹುಡುಕಿ ಕೊಳ್ಳುವ
ಕಳೆದು ಹೋದ
ಸ್ನೇಹ ಪ್ರೀತಿಯ

ಒಮ್ಮೆ ಸುಖ
ಒಮ್ಮೆ ದುಃಖ
ಸಮರಸ ಭಾವ
ನಮ್ಮ ಜೀವನ

- Advertisement -

ಸಿಹಿ ಕಹಿ
ಒಗರು ಹುಳಿ
ಬಾನ ನಡುವಿನ
ನಗೆ ಚಂದ್ರಮ

ಕಪ್ಪು ನೆಲದಿ
ಬಯಕೆ ಬೀಜ
ಹೊಸ ಫಸಲಿನ
ಗೊನೆ ತೆನೆ

ಬಾಳ ಬೇಕು
ನೂರು ವರುಷ
ಚೆಲುವು ಗೆಲುವಿನ
ಹೃದಯ ಹರುಷ
_____________________
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

- Advertisement -
- Advertisement -

Latest News

ಶ್ರೀನಿವಾಸ ಶಾಲೆಯ ಆಡಳಿತ ಮಂಡಳಿ ಬದಲಾಗುವುದಿಲ್ಲ – ಅಧ್ಯಕ್ಷ ರಂಗಣ್ಣ ಸೋನವಾಲಕರ

ಮೂಡಲಗಿ - ಶ್ರೀನಿವಾಸ ಶಾಲೆಯನ್ನು ಬೇರೆಯವರಿಗೆ ಮಾರುತ್ತಿದ್ದಾರೆ, ಆಡಳಿತ ಮಂಡಳಿ ಬದಲಾಗುತ್ತದೆ ಎಂಬ ವದಂತಿ ಹರಡಿದ್ದು ಅದು ಸಂಪೂರ್ಣ ಸುಳ್ಳು ಎಂದು ಸ್ಥಳೀಯ ಶ್ರೀನಿವಾಸ ಸ್ಕೂಲ್ಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group