spot_img
spot_img

ಕವನ : ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ….

Must Read

spot_img
- Advertisement -

ಲೋಕಕ್ಕೆ ಲೋಕವೇ ಹರಿಸಿದೆ ಅವಳತ್ತ ಗಮನ. ನೀವ್ಯಾಕೆ ಇನ್ನೂ ಬರೆಯಲಿಲ್ಲ ಅವಳ ಮೇಲೆ ಕವನ !?

ಎಂದು ಕರೆ ಮಾಡಿ, ಮೆಸೇಜು ಮಾಡಿ ಕೇಳಿದವರಿಗೆಲ್ಲಾ ಅರ್ಪಣೆ ಈ ಸಪ್ತ ಹನಿಗಳು. ರಾತ್ರೋ ರಾತ್ರಿ ಜಗದಗಲ, ಮುಗಿಲಗಲ ವೈರಲ್ ಆದ ಬೆಡಗಿಯ ಚೆಲುವು-ನಿಲುವಿನ ಸುಪ್ತ ಖನಿಗಳು. ವಿಶ್ವವನ್ನೇ ಸೆಳೆದ ಸ್ನಿಗ್ಧ ಸೌಂದರ್ಯದ, ಮುಗ್ಧ ಮಾಧುರ್ಯದ ಕುಂಭಮೇಳದ ಚೆಲುವೆಯ ಕುರಿತಾದ ಕವಿಭಾವ-ಭಾಷ್ಯದ ಆಪ್ತ ದನಿಗಳು. ಒಪ್ಪಿಸಿಕೊಳ್ಳಿ..” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

1. ಮಿಂಚು

- Advertisement -

ರುದ್ರಾಕ್ಷಿಗಿಂತಲೂ
ಹೆಚ್ಚು ಮಿಂಚಿದ್ದು
ಅವಳ ನೀಲಾಕ್ಷಿ.!

***************

2. ಭ್ರಮೆ.!

- Advertisement -

ಸೆಲ್ಫಿ ತೆಗೆದುಕೊಂಡವರೆಲ್ಲ
ಖರೀದಿಸಿದ್ದರೆ ರುದ್ರಾಕ್ಷಿ
ನೀಲಾಕ್ಷಿಯಾಗುತ್ತಿದ್ದಳು..
ನಿಜ ಅಕ್ಷರಶಃ ಸೋನಾಕ್ಷಿ.!

******************

3. ಸಂಚಲನ.!

ಕುಂಭಮೇಳದ ಸ್ನಾನಕ್ಕಿಂತ
ಎಲ್ಲೆಲ್ಲು ಅವಳದೇ ಧ್ಯಾನ
ನೀಲಿಕಂಗಳದ್ದೇ ಗುಣಗಾನ.!

***********************

4. ಭಾವ ಭಾಗೀರತಿ.!

ಕೋಟಿ ಕೋಟಿ ಕವಿತೆಗಳಿಗೆ ಕಾರಣ
ರುದ್ರಾಕ್ಷಿ ಮಾರಲು ನಿಂತ ನೀಲಾಕ್ಷಿ
ಕೋಟಿ ಕೋಟಿ ಕವಿತೆಗಳ ಹೂರಣ
ಅವಳ ಮಿಂಚಿನ ನೀಲಿ ರಂಗಿನ ಅಕ್ಷಿ.!

*********************

5. ಮೊನಲಿಸ.!

ಕಂಗಳಲ್ಲಿ ಪುಟಿವ ಚಿರಜೀವನೋತ್ಸಾಹ ಉಲ್ಲಾಸ
ತುಟಿಗಳಲ್ಲಿ ಹೊಳೆವ ಮುಗ್ಧ-ಸ್ನಿಗ್ಧ ಮಂದಹಾಸ
ಮುಂಗುರುಳ ಲಾಸ್ಯಕೆ ಜಗವೆ ನರ್ತಿಸುವಂತೆ ಭಾಸ
ನೀಲ್ಗಣ್ಣ ಮೊನಲಿಸಾ ಸೃಷ್ಟಿಸಿಹಳು ನವಇತಿಹಾಸ.!

**********************

6. ನಯನ ಮನೋಹರ.!

ಅಪ್ಪಟ ನೈಸರ್ಗಿಕ ಚೆಲುವಿಗೆ ಸಾಕ್ಷಿ
ಕುಂಭಮೇಳದಿ ಸುಂದರಿ ನೀಲಾಕ್ಷಿ
ನೋಡಿ ಹುಬ್ಬೇರಿದೆ ಲೋಕದ ಅಕ್ಷಿ.!

************************

7. ವಿಪರ್ಯಾಸ.!

ಕಂಡು ರುದ್ರಾಕ್ಷಿ ಮಾರುವ
ಸುಂದರಿಯ ಕಂಗಳ ನೀಲಿ
ಬಂದವರೆಲ್ಲ ಅವಳ ಸುತ್ತಲು
ಹೋದರು ನಿತ್ಯ ತೇಲಿ ತೇಲಿ
ಕಡೆಗೆ ಬೇಸತ್ತ ಹುಡುಗಿಯೇ
ಮಾಡಿಹಳು ಜಾಗ ಖಾಲಿ.!

ಎ.ಎನ್.ರಮೇಶ್.ಗುಬ್ಬಿ.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group