ಕವನ: ಅನ್ನದಾತ ರೈತ

Must Read

ಅನ್ನದಾತ ರೈತ

ಹಗಲಿರುಳು ದುಡಿಯತ್ತಾನೆ
ಮಾಡಿಕೂಳ್ಳದೆ ಬೇಸರ
ಇವನ ದುಡಿಮೆಗೆ ಜೊತೆಯಾಗಿರುತ್ತಾನೆ
ನೇಸರ
ಎತ್ತುಗಳ ಜೊತೆಯಾಗಿ ಉಳುತ್ತಾನೆ
ಸರಸರ
ಇವನ ಮನದಲ್ಲಿ ಎಂದು ಸುಳಿಯದು
ಅಹಂಕಾರ‌
ಭೂಮಿತಾಯಿ ಮೇಲೆ ಇದೆ
ಇವನಿಗೆ ಮಮಕಾರ
ಇವನಿಗೆ ಗೊತ್ತು “ಕೈ ಕೆಸರಾದರೆ
ಬಾಯಿ ಮೊಸರ”
ದಬ್ಬಾಳಿಕೆ ನಡೆಯುತ್ತಿದೆ ಇವನ
ಮೇಲೆ ನಿರಂತರ
ಸಮಾಜಕ್ಕೆ ಇಲ್ಲ ಇವನ
ಮೇಲೆ ಕನಿಕರ
ಸಿಗುತ್ತಿಲ್ಲ ಇವನ ಬೆಳೆದ
ಬೆಳೆಗೆ ಪರಿಹಾರ
ಅನ್ನದಾತನ ಬಗ್ಗೆ ಮಾಡಬೇಡಿ
ತಾತ್ಸಾರ
ಇವನು ಬೆಳೆಯದಿದ್ದರೆ ಜಗತ್ತಿಗೆ
ಬರುತ್ತೆ ಸಂಚಕಾರ
ಅನ್ನದಾತರೆ ನಿಮಗೆ ಬರದಿರಲಿ
ಆತ್ಮಹತ್ಯೆ ವಿಚಾರ.
ರೈತರಿಗೆ ಹೇಳಿ ಜೈಕಾರ
ದೇಶ ಬೆಳೆಯುತ್ತದೆ ಉತ್ತರೊತ್ತರ.


ಕಿರಣ.ಯಲಿಗಾರ.

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group