ಅನ್ನದಾತ ರೈತ
ಹಗಲಿರುಳು ದುಡಿಯತ್ತಾನೆ
ಮಾಡಿಕೂಳ್ಳದೆ ಬೇಸರ
ಇವನ ದುಡಿಮೆಗೆ ಜೊತೆಯಾಗಿರುತ್ತಾನೆ
ನೇಸರ
ಎತ್ತುಗಳ ಜೊತೆಯಾಗಿ ಉಳುತ್ತಾನೆ
ಸರಸರ
ಇವನ ಮನದಲ್ಲಿ ಎಂದು ಸುಳಿಯದು
ಅಹಂಕಾರ
ಭೂಮಿತಾಯಿ ಮೇಲೆ ಇದೆ
ಇವನಿಗೆ ಮಮಕಾರ
ಇವನಿಗೆ ಗೊತ್ತು “ಕೈ ಕೆಸರಾದರೆ
ಬಾಯಿ ಮೊಸರ”
ದಬ್ಬಾಳಿಕೆ ನಡೆಯುತ್ತಿದೆ ಇವನ
ಮೇಲೆ ನಿರಂತರ
ಸಮಾಜಕ್ಕೆ ಇಲ್ಲ ಇವನ
ಮೇಲೆ ಕನಿಕರ
ಸಿಗುತ್ತಿಲ್ಲ ಇವನ ಬೆಳೆದ
ಬೆಳೆಗೆ ಪರಿಹಾರ
ಅನ್ನದಾತನ ಬಗ್ಗೆ ಮಾಡಬೇಡಿ
ತಾತ್ಸಾರ
ಇವನು ಬೆಳೆಯದಿದ್ದರೆ ಜಗತ್ತಿಗೆ
ಬರುತ್ತೆ ಸಂಚಕಾರ
ಅನ್ನದಾತರೆ ನಿಮಗೆ ಬರದಿರಲಿ
ಆತ್ಮಹತ್ಯೆ ವಿಚಾರ.
ರೈತರಿಗೆ ಹೇಳಿ ಜೈಕಾರ
ದೇಶ ಬೆಳೆಯುತ್ತದೆ ಉತ್ತರೊತ್ತರ.
ಕಿರಣ.ಯಲಿಗಾರ.