ಕವನ: ಸುಸಂಸ್ಕೃತಿಯ ದೇಶ ನಮ್ಮ ಭಾರತ

Must Read

ಸುಸಂಸ್ಕೃತಿಯ ದೇಶ ನಮ್ಮ ಭಾರತ

ನಮ್ಮ ಭಾರತದ ಸಂಸ್ಕೃತಿ
ಇತಿಹಾಸ ಪುಟದಲ್ಲಿ ಕೀರ್ತಿ
ಶಿಲಾಶಾಸನಗಳೇ ಸಂಕೇತ.

ಭಾಷೆಗಳು ಅನೇಕಾನೇಕ
ವೇಷಭೂಷಣಗಳು ಆಕರ್ಷಕ
ವಿವಿಧತೆಯಲ್ಲಿ ಏಕತೆ ಮನಮೋಹಕ

ಸಾಹಿತ್ಯ ಲೋಕದ ಸಾಗರ
ವಚನಗಳೇ ಸುವರ್ಣಭಂಡಾರ
ಕನ್ನಡ ಜ್ಞಾನಪೀಠವು ಭರಪೂರ

ಕ್ರೀಡಾಂಗಣದೊಳು ಸಾಧನೆ
ಭಾರತ ಪಡೆದಿದೆ ಮುಂಚೂಣಿ
ಕನಕ,ಕಂಚು ರಜತ ಪದಕವನ್ನೇ

ವಿಜ್ಞಾನಿ ಡಾ. ಅಬ್ದುಲ್ ಕಲಾಂ
ಜ್ಞಾನಿ ಸುಧಾಮೂರ್ತಿ ಮೇಡಂ
ವಿದ್ವತ್,ದೇಶ ಒಂದೇ ಮಾತರಂ

ದೇಶದ ಬೆನ್ನೆಲುಬು ರೈತ
ಸೈನಿಕ ದೇಶದ ಕಣ್ ಆತ
ವೀರ,ಧೀರರ ದೇಶ ಭಾರತ

ನಿಸರ್ಗ ಸಂಪನ್ಮೂಲದ ಗುಡಿ
ಹೊನ್ನು ರತ್ನ,ಶ್ರೀಗಂಧದ ಗುಡಿ
ಮತಬೇಡ, ಇರಿ ಒಂದುಗೂಡಿ

ಎಲ್ಲರಿಗಿರಲಿ ಹೆಮ್ಮೆಅಭಿಮಾನ
ಎಲ್ಲರಿಗಿರಲಿ ಭಾಷಾಭಿಮಾನ
ಎಲ್ಲರಿಗಿರಲಿ ರಾಷ್ಟ್ರಾಭಿಮಾನ


ಶ್ರೀಮತಿ ಪಾರ್ವತಿ ದೇವಿ. ಎಂ.ತುಪ್ಪದ ಬೆಳಗಾವಿ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group