ಕವನ: ಸುಸಂಸ್ಕೃತಿಯ ದೇಶ ನಮ್ಮ ಭಾರತ

Must Read

ಸುಸಂಸ್ಕೃತಿಯ ದೇಶ ನಮ್ಮ ಭಾರತ

ನಮ್ಮ ಭಾರತದ ಸಂಸ್ಕೃತಿ
ಇತಿಹಾಸ ಪುಟದಲ್ಲಿ ಕೀರ್ತಿ
ಶಿಲಾಶಾಸನಗಳೇ ಸಂಕೇತ.

ಭಾಷೆಗಳು ಅನೇಕಾನೇಕ
ವೇಷಭೂಷಣಗಳು ಆಕರ್ಷಕ
ವಿವಿಧತೆಯಲ್ಲಿ ಏಕತೆ ಮನಮೋಹಕ

ಸಾಹಿತ್ಯ ಲೋಕದ ಸಾಗರ
ವಚನಗಳೇ ಸುವರ್ಣಭಂಡಾರ
ಕನ್ನಡ ಜ್ಞಾನಪೀಠವು ಭರಪೂರ

ಕ್ರೀಡಾಂಗಣದೊಳು ಸಾಧನೆ
ಭಾರತ ಪಡೆದಿದೆ ಮುಂಚೂಣಿ
ಕನಕ,ಕಂಚು ರಜತ ಪದಕವನ್ನೇ

ವಿಜ್ಞಾನಿ ಡಾ. ಅಬ್ದುಲ್ ಕಲಾಂ
ಜ್ಞಾನಿ ಸುಧಾಮೂರ್ತಿ ಮೇಡಂ
ವಿದ್ವತ್,ದೇಶ ಒಂದೇ ಮಾತರಂ

ದೇಶದ ಬೆನ್ನೆಲುಬು ರೈತ
ಸೈನಿಕ ದೇಶದ ಕಣ್ ಆತ
ವೀರ,ಧೀರರ ದೇಶ ಭಾರತ

ನಿಸರ್ಗ ಸಂಪನ್ಮೂಲದ ಗುಡಿ
ಹೊನ್ನು ರತ್ನ,ಶ್ರೀಗಂಧದ ಗುಡಿ
ಮತಬೇಡ, ಇರಿ ಒಂದುಗೂಡಿ

ಎಲ್ಲರಿಗಿರಲಿ ಹೆಮ್ಮೆಅಭಿಮಾನ
ಎಲ್ಲರಿಗಿರಲಿ ಭಾಷಾಭಿಮಾನ
ಎಲ್ಲರಿಗಿರಲಿ ರಾಷ್ಟ್ರಾಭಿಮಾನ


ಶ್ರೀಮತಿ ಪಾರ್ವತಿ ದೇವಿ. ಎಂ.ತುಪ್ಪದ ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group