spot_img
spot_img

ಬಿಜೆಪಿಯಲ್ಲಿ ಬಂಡಾಯ; ಶರಣು ಸಲಗರಗೆ ಕಂಟಕ

Must Read

- Advertisement -

ಬೀದರ: ಮೂಲ ಬಿಜೆಪಿಯವರಿಗಷ್ಟೇ ಟಿಕೆಟ್ ಕೊಡಬೇಕು ಶರಣು ಸಲಗರ ಗೆ ಟಿಕೆಟ್ ಕೊಡಬಾರದು ಎಂದು ಜಿಲ್ಲೆಯ ಬಸವಕಲ್ಯಾಣದಲ್ಲಿ ಬಂಡಾಯವೊಂದು ತಲೆಯೆತ್ತಿದ್ದು ಶಾಸಕ ಸಲಗರ ಅವರಿಗೆ ಕಂಟಕ ಪ್ರಾಯವಾಗಲಿದೆ.

ಇದರಿಂದ ಬಸವಣ್ಣನ ನಾಡಿನಲ್ಲಿ ಬಿಜೆಪಿ ಬಚಾವೊ ಆಂದೋಲನ ಶುರುವಾದಂತಾಗಿದೆ. ಕ್ಷೇತ್ರದಲ್ಲಿ ಒಳಗಿನವರು ಹೊರಗಿನವರು ಎಂಬ ಕೂಗು ಕೇಳಿಬರುತ್ತಿದ್ದು ಬಸವಕಲ್ಯಾಣ ಶಾಸಕ ಶರಣು ಸಲಗರ ವಿರುದ್ಧ  ಬಿಜೆಪಿ ಮೂಲ ಕಾರ್ಯಕರ್ತರಿಂದ ಹೋರಾಟ ಆರಂಭವಾಗಿದೆ. 

ಈ ಮುಂಚೆ ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರು ಶರಣು ಅವರಿಗೇ ಟಿಕೆಟ್ ಘೋಷಣೆ ಮಾಡುತ್ತಿದ್ಧಂತೆಯೇ ಭುಗಿಲೆದ್ದ ಬಂಡಾಯ ಬಸವಕಲ್ಯಾಣದ ಮಹಾ ಮನೆ ಕಲ್ಯಾಣ ಮಂಟಪದಲ್ಲಿ ಬೃಹತ್ ಆಂದೋಲನ ಶುರುವಾಗಿದೆ.

- Advertisement -

ಶರಣು ಸಲಗರಗೆ ಟಿಕೆಟ್ ನೀಡಬಾರದೆಂದು ಕಾರ್ಯಕರ್ತರು ಹೋರಾಟ ಮಾಡಿ ಶರಣು ಸಲಗರ ಬದಲು ಸ್ಥಳೀಯ ನಾಯಕರಿಗೆ ಟಿಕೆಟ್ ನೀಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಮೂಲ ಬಿಜೆಪಿ ನಾಯಕರನ್ನು ಶರಣು ಸಲಗರ ಅವರು  ಕಡೆಗಣಿಸುತ್ತಿದ್ದಾರೆಂದು ಆರೋಪವಿದೆ. ಇದು ಕೇಂದ್ರದ ನಾಯಕರಲ್ಲಿ ಕಸಿವಿಸಿ ಉಂಟುಮಾಡಿದ್ದು ಮುಂದೆ ಅವರು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆಂಬುದು ಕುತೂಹಲಕಾರಿಯಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group