ಗುರ್ಲಾಪೂರ : ಶವ ಚಿತಾಗಾರಕ್ಕಾಗಿ ಮನವಿ

Must Read
  ಮೂಡಲಗಿ: -ತಾಲೂಕಿನ ಗುರ್ಲಾಪೂರದಲ್ಲಿ ಶವಸಂಸ್ಕಾರಕ್ಕಾಗಿ ಸೂಕ್ತ ಚಿತಾಗಾರ ಇಲ್ಲದೆ ತೊಂದರೆಯಾಗುತ್ತಿದೆ ಎಂದು ಸ್ಥಳೀಯ  ಶಿವಾಜಿ ಗ್ರಾಮೀಣ ಅಭಿವೃದ್ಧಿ ಸೇವಾ ಸಂಘಟನೆಯಿಂದ ಮೂಡಲಗಿ ಪುರಸಭೆ ಮುಖ್ಯಾಧಿಕಾರಿಗಳಾದ ತುಕಾರಾಮ ಮಾದರ ಅವರಿಗೆ ಶವ ಚಿತಗಾರ ನಿರ್ಮಾಣದ ಬಗ್ಗೆ ಮನವಿ ಸಲ್ಲಿಸಲಾಯಿತು.
      ಗುರ್ಲಾಪೂರದಲ್ಲಿ ಸುಮಾರು 300 ಕುಟುಂಬಗಳಿದ್ದು, ಶವ ಚಿತಾಗಾರ ಇಲ್ಲದೆ ಸಮಸ್ಯೆಯಾಗುತ್ತಿರುವುದು. ಹಿಂದೆ ಹಿಂದೂ ರುದ್ರಭೂಮಿಯಲ್ಲಿ ಚಿತಾಗಾರವನ್ನು ನಿರ್ಮಿಸಿದ್ದು,ಅದು ಈಗ ನಾಶವಾಗಿದೆ. ಒಂದೇ ದಿನದಲ್ಲಿ ಇಬ್ಬರು ಮರಣ ಹೊಂದಿದರೆ ಶವ ಸಂಸ್ಕಾರಕ್ಕೆ ತೊಂದರೆಯಾಗುತ್ತದೆ ಅಷ್ಟೇ ಅಲ್ಲದೇ ಮಳೆಗಾಲದಲ್ಲಿಯೂ ಸಹ ಸಮಸ್ಯೆ ಆಗುತ್ತಿರುವುದು.ಆದಷ್ಟು ಬೇಗನೆ ನಮ್ಮ ಸಮಸ್ಯೆಯನ್ನು ಬಗೆ ಹರಿಸಿರಿ ಎಂದು ಮನವಿಯಲ್ಲಿ ತಿಳಿಸಲಾಗಿದೆ.
      ಭೀಮಪ್ಪ ಮರಾಠೆ, ವಿಠ್ಠಲ ಜಾಧವ, ಶಿವಬಸು ಮರಾಠೆ, ಶಿವಾನಂದ ಮರಾಠೆ, ಪ್ರಕಾಶ ಮಂದ್ರೋಳಿ, ಮಾರುತಿ ಮರಾಠೆ, ರಮೇಶ ಮರಾಠೆ  ಮನವಿ ಸಲ್ಲಿಸಲು ಭಾಗಿಯಾಗಿದ್ದರು.
 ಮನವಿ ಸ್ವೀಕರಿಸಿದ  ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ ಅವರು ಸಂಘಟಕರಿಗೆ ಆದಷ್ಟು ಬೇಗನೆ ನಿಮ್ಮ ಸಮಸ್ಯೆ ಬಗೆ ಹರಿಸುತ್ತೇನೆಂದು ಭರವಸೆ ನೀಡಿದರು.
  ಈ ಸಂದರ್ಭದಲ್ಲಿ ಅನ್ವರ ನದಾಫ್ ಅಧ್ಯಕ್ಷರು ಕಾಶಿಂಅಲಿ ಸೊಸಾಯಿಟಿ ಹಾಗೂ ಇನ್ನು ಅನೇಕರು ಉಪಸ್ಥಿತರಿದ್ದರು.
Latest News

ಕವನ : ಬೆಳಕಿನ ಹಬ್ಬ ದೀಪಾವಳಿ

ಬೆಳಕಿನ ಹಬ್ಬ ದೀಪಾವಳಿ ಅಂಧಕಾರದಲಿ ದಿವ್ಯ ಚೇತನದ ಬೆಳಕು ಬೆಳಗಿಸಿ ಮೂಢನಂಬಿಕೆಯಲಿ ಜ್ಞಾನದ ಜ್ಯೋತಿಯ ಹೊತ್ತಿಸಿ ಸುಳ್ಳಿನ ಲೋಕದಲಿ ಸತ್ಯದ ನುಡಿದೀಪ ಹತ್ತಿಸಿ ಬೆಳಕಿನ ಹಬ್ಬ ದೀಪಾವಳಿಯ ಆಚರಿಸಿಸ್ವಾರ್ಥ ಹೃದಯದಿ ನಿಸ್ವಾರ್ಥದ...

More Articles Like This

error: Content is protected !!
Join WhatsApp Group