spot_img
spot_img

ಹಿರಿಯ ಶೈಕ್ಷಣಿಕ ಚಿಂತಕ, ಸಂಘಟಕ, ಬಿ ಎಫ್ ವಿಜಾಪುರ ನಿಧನ

Must Read

- Advertisement -

ಹುಬ್ಬಳ್ಳಿ – ಅಖಿಲ ಭಾರತ ಶಿಕ್ಷಕರ ಮಹಾಮಂಡಳದ ಮಾಜಿ ಉಪಾಧ್ಯಕ್ಷರು, ಅಖಿಲ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿಗಳಾಗಿ ದೀರ್ಘ ಅವಧಿಯಲ್ಲಿ ಕಾರ್ಯನಿರ್ವಹಿಸಿದ್ದ ಬಿ ಎಫ್ ವಿಜಾಪುರ (ಬಸವಂತಪ್ಪ ಫಕೀರಪ್ಪ ವಿಜಾಪುರ)ರವರು ರಾತ್ರಿ ಹುಬ್ಬಳ್ಳಿಯ ವಿಶ್ವೇಶ್ವರ ನಗರದ ಸ್ವಗೃಹದಲ್ಲಿ ಅಲ್ಪ ಕಾಲೀನ ಅನಾರೋಗ್ಯದಿಂದ ನಿಧನ ರಾದರು. ಅಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿತು.

ರಾಜಕೀಯ, ಸಾಮಾಜಿಕ, ಶೈಕ್ಷಣಿಕ ವಲಯದ ಗಣ್ಯರು ಅಂತಿಮ ನಮನ ಸಲ್ಲಿಸಿದರು.

- Advertisement -

ಅವರಿಗೆ ಇಬ್ಬರು ಸುಪುತ್ರರು ಸುಪುತ್ರಿಯರು ಸೇರಿದಂತೆ ನಾಡಿನಾದ್ಯoತ ಅಪಾರ ಶಿಷ್ಯ ವರ್ಗ, ಶಿಕ್ಷಕರ ಸಂಘದ ಒಡನಾಡಿ ಗಳನ್ನು ಅಗಲಿರುವರು, 1960ರ ದಶಕದಲ್ಲಿ ಶಿಕ್ಷಕರ ಹಿತರಕ್ಷಣೆ ಗಾಗಿ ಹಾಗೂ ಶೈಕ್ಷಣಿಕ ರಂಗದ ಸುಧಾರಣೆಗಾಗಿ ಶ್ರಮಿಸಿದ್ದರು, ಶಿಕ್ಷಕರ ಪರ ಕಾಳಜಿಯಿಂದ ಹೆಸರು ಗಳಿಸಿದ್ದರು,ಅಖಿಲ ಭಾರತ ಶಿಕ್ಷಕ ಮಹಾಮಂಡಳ ಹಾಗೂ ಎಜ್ಯುಕೇಶನ್ ಇoಟರ್ ನ್ಯಾಷನಲ್ ವತಿಯಿಂದ ಜರುಗಿದ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಸಭೆ, ಸಮಾರಂಭಗಳಲ್ಲಿ, ಕಾರ್ಯಾಗಾರ ಗಳಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಭಾಗವಹಿಸಿದ್ದರು,30ಕ್ಕೂ ಹೆಚ್ಚು ವರ್ಷಗಳ ಕಾಲ ಅಖಿಲ ಭಾರತ ಶಿಕ್ಷಕರ ಮಹಾಮಂಡಳದ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದರು.

2013ರಲ್ಲಿ ಅವರ 81 ನೆಯ ಹುಟ್ಟುಹಬ್ಬದ ಸಮಯದಲ್ಲಿ ನಾಡಿನ ಖ್ಯಾತ ಕಾರ್ಮಿಕ ನಾಯಕರಾದ ಡಾ, ಕೆ ಎಸ್ ಶರ್ಮಾ ರವರ ಪ್ರಧಾನ ಸಂಪಾದಕತ್ವದಲ್ಲಿ *ಬಸವಂತ ಸೌಜನ್ಯ ಸೌರಭ* ಎಂಬ ಅಭಿನಂದನಾ ಗ್ರಂಥ ಅರ್ಪಿಸಿ ಗೌರವಿಸಲಾಗಿತ್ತು,ಅದರಲ್ಲಿ ಬಸವರಾಜ ಸುಣಗಾರ ಸೇರಿದಂತೆ ಹಲವಾರು ಗಣ್ಯರು ವಡನಾಟದ ಅನುಭವ ಬರೆದು ಅಭಿನಂದನೆ ಸಲ್ಲಿಸಿದರು,

ಸಂತಾಪ:

ತಮಗೆ ಮಾರ್ಗದರ್ಶನ ಮಾಡಿ ಶಿಕ್ಷಕರ ಸಂಘಟನೆ ಯಲ್ಲಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಟ್ಟಿದ್ದ ಹಿರಿಯರಾದ ಬಿ ಎಫ್ ವಿಜಾಪುರ ರವರ ನಿಧನಕ್ಕೆ ಅಖಿಲ ಕರ್ನಾಟಕ ಪ್ರಾಥಮಿಕಶಿಕ್ಷಕರ ಸಂಘದ ಮಾಜಿ ರಾಜ್ಯ ಘಟಕದ ಅಧ್ಯಕ್ಷರಾದ ಬಸವರಾಜ ಸುಣಗಾರ, ಮಾಜಿ ಪ್ರಧಾನ ಕಾರ್ಯದರ್ಶಿ ಕೆ ಎ ಕೃಷ್ಣಪ್ಪ, ಮಾಜಿ ಸಂಘಟನಾ ಕಾರ್ಯದರ್ಶಿ ಜಿ ಸುರೇಶ ರವರು ಸೇರಿದಂತೆ ಹಲವು ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಭಿಮಾನಿಗಳು, ನಾಡಿನ ಶಿಕ್ಷಕರು ತೀವ್ರ ಶೋಕ ವ್ಯಕ್ತ ಅವರ ಆತ್ಮಕ್ಕೆ ಚಿರಶಾಂತಿ ಬಯಸಿದ್ದಾರೆ.

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group