spot_img
spot_img

ಬಸವಲಿಂಗಯ್ಯ ಹಿರೇಮಠ ಮತ್ತು ಚಂಪಾ ಅವರ ಶೃದ್ಧಾಂಜಲಿ ಕಾರ್ಯಕ್ರಮ

Must Read

- Advertisement -

ಬೆಳಗಾವಿ: ಹಿರಿಯ ರಂಗಕಲಾವಿದ ಬಸವಲಿಂಗಯ್ಯ ಹಿರೇಮಠ ಮತ್ತು ಸಾಹಿತಿ ಚಂದ್ರಶೇಖರ ಪಾಟೀಲರಿಗೆ ಶೃದ್ಧಾಂಜಲಿ ಕಾರ್ಯಕ್ರಮವನ್ನು ಇಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಡಾ.ಗಜಾನನ ನಾಯ್ಕ ಅವರು ಅಗಲಿದ ಸಾಹಿತಿಗಳ ಕುರಿತು ಮಾತನಾಡಿದರು.ರಂಗ ಕಲಾವಿದರಾದ ಬಸವಲಿಂಗಯ್ಯನವರು ರಂಗ ಶಿಕ್ಷಣವನ್ನು ನಿನಾಸಂನಲ್ಲಿ ಪಡೆದು, ಉತ್ತರಕರ್ನಾಟಕದ ಗಮನಾರ್ಹ ಜಾನಪದ ರಂಗ ಕಲಾವಿದರಾಗಿದ್ದರು. ಸುಗಮ ಸಂಗೀತ, ರಂಗಗೀತೆಗಳನ್ನು ಮತ್ತು ಕುಲಗೋಡದ ಅಪರಾಳ ತಮ್ಮಣ್ಣ, ಶ್ರೀಕೃಷ್ಣ ಪಾರಿಜಾತ, ಹನ್ನೆರಡು ತಾಸಿನ ನಾಟಕವನ್ನು ಮೂರು ತಾಸಿಗೆ ತಂದು ಜನ ಮನ್ನಣೆಯನ್ನು ಪಡೆದ ಇವರು ಕಂಚಿನ ಕಂಠದ ಕಲಾವಿದರಾಗಿದ್ದರು. ಹಲವಾರು ಪ್ರಶಸ್ತಿಯನ್ನು ಪಡೆದಿದ್ದ ಶ್ರೀಯುತರ ಅಗಲಿಕೆಯಿಂದ ಜನಪದ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ.

ಚಂದ್ರಶೇಖರ ಪಾಟೀಲ ಅವರು ಹಿರಿಯ ಬಂಡಾಯ ಸಾಹಿತಿಗಳು, ಕವಿ, ನಾಟಕಕಾರರು ಇವರು ಕನ್ನಡ ನಾಡು, ನುಡಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು.ಗೋಕಾಕ ಚಳವಳಿ, ತುರ್ತುಪರಿಸ್ಥಿಯ ಸಂದರ್ಭದಲ್ಲಿ ೨೬ ರಾತ್ರಿ ೨೫ ದಿನ ಜೈಲಿನಲ್ಲಿದ್ದರು.ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಲವಾರು ಕಾರ್ಯಕ್ರಮವನ್ನು ನಿಯೋಜಿಸಿದರು.ಇವರ ಸೇವೆ ಅನುಪಮವಾಗಿದೆ, ವಿದ್ಯಾರ್ಥಿಗಳು ಇವರ ಸಾಹಿತ್ಯ ಕೃತಿಗಳನ್ನು ಓದುವುದೇ ನಿಜವಾದ ಶೃದ್ಧಾಂಜಲಿ ಎಂದರು.

- Advertisement -

ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರೊ.ಎಸ್. ಎಂ. ಗಂಗಾಧರಯ್ಯ ಅವರು ಈ ಇಬ್ಬರು ಅತ್ಯಂತ ಬಡ ಕುಟುಂಬದಿಂದ ಬಂದವರು ಜನಪದ ಸಾಂಸ್ಕೃತಿಕ ಲೋಕ ಇನ್ನೂ ಇವರಿಂದ ಜನಪದ ರಂಗಗೀತೆಗಳು ಮತ್ತು ಜನಪದ ರಾಗಗಳ ಬಗ್ಗೆ ರಿಕಾರ್ಡ ಆಗಬೇಕಾಗಿತ್ತು, ಚಂಪಾ ಅವರು ಇಂಗ್ಲೀಷ ಪ್ರಾಧ್ಯಾಪಕರಾಗಿ ವಿಭಾಗದ ಮುಖ್ಯಸ್ಥರಾಗಿ ಇಂಗ್ಲೀಷನಿಂದ ಹಲವಾರು ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದರು.ಭಾಷಾ ವಿಜ್ಞಾನದ ಕುರಿತಾಗಿ ಅಧ್ಯಯನಗಳನ್ನು ಮಾಡಿದರು.ಸಂಕ್ರಮಣ ಪತ್ರಿಕೆಯನ್ನು ಕೊನೆಯವೆರಗೂ ಮುಂದುವರಿಸಿಕೊಂಡು ಬಂದರು ಎಂದು ಈರ್ವರೂ ಮಹನೀಯರ ಕುರಿತು ಮಾತನಾಡಿದರು.

ಈ ಕಾರ್ಯಕ್ರಮದಲ್ಲಿ ಡಾ.ಮಹೇಶ ಗಾಜಪ್ಪನವರ, ಡಾ.ಶೋಭಾ ನಾಯಕ ಹಾಗೂ ಡಾ.ಅಶೋಕ ಮುಧೋಳ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ವಿಠ್ಠಲ ಹರಿಜನ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು, ಸಂಶೋಧನಾರ್ಥಿಗಳು ಹಾಜರಿದ್ದರು.

- Advertisement -
- Advertisement -

Latest News

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ನಿರ್ದೇಶಕರಾಗಿ ಶ್ರೀಮತಿ ದಯಾಶೀಲ 

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಧಾರವಾಡ ಪ್ರಾದೇಶಿಕ ವಿಭಾಗಕ್ಕೆ ಬೆಳ್ತಂಗಡಿ ಮೂಲದ ಶ್ರೀಮತಿ ದಯಾಶೀಲರವರು ಧರ್ಮಸ್ಥಳದ ಪೂಜ್ಯ ವೀರೇಂದ್ರ ಹೆಗಡೆಯವರ ಆಶೀರ್ವಾದದೊಂದಿಗೆ ಯೋಜನೆಯ ಮುಖ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group