spot_img
spot_img

ಶ್ರಾವಣ ವಿಶೇಷ ಪ್ರವಚನ

Must Read

spot_img
- Advertisement -

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ಪತ್ರಿಬಸವೇಶ್ವರ ಅನುಭವ ಮಂಟಪದಲ್ಲಿ ಶ್ರಾವಣ ಮಾಸದ ವಿಶೇಷ ಪ್ರವಚನ ನಡೆಯಿತು.

ಪತ್ರಿಬಸವೇಶ್ವರ ಶರಣ ಸಂಸ್ಕೃತಿ ಉತ್ಸವದ ದ್ವಾದಶೋತ್ಸವ ಹಳಕಟ್ಟಿಯವರ  ವಚನ ಸಾಹಿತ್ಯ ಸಂರಕ್ಷಣೆಯ ಶತಮಾನೋತ್ಸವದ ವರ್ಷಾಚರಣೆ 61ನೇಯ ವಚನೋತ್ಸವ ಕಾರ್ಯಕ್ರಮದಲ್ಲಿ ಚನ್ನಬಸವಣ್ಣನವರ ‘ಬಸವ ಬಿಲ್ಲಾಳನಾಗಿ……..’ ವಚನ ಚಿಂತನೆ ಶರಣೆ  ಪ್ರೇಮಕ್ಕ  ಅಂಗಡಿ ನಡಿಸಿಕೊಟ್ಟರು.  

ಶರಣ ಕಾಡಪ್ಪ ರಾಮಗುಂಡಿ ಅವರಿಂದ ಮಹಾತ್ಮರ ಚರಿತಾಮೃತ ಭಾಗವಾದ ಫ ಗು ಹಳಕಟ್ಟಿಯವರ ಕುರಿತು ಪ್ರವಚನ ಜರಗಿತು, ಸೋಮೇಶ್ವರ ಸಕ್ಕರೆ ಕಾರ್ಖಾನೆಗೆ ಆಯ್ಕೆಯಾದ ಶರಣ ಮಹಾಂತೇಶ ಮತ್ತಿಕೊಪ್ಪ ಸನ್ಮಾನ ಸ್ವೀಕರಿಸಿ ಸಮಾಜ ಸೇವೆಗೆ ಆಯ್ಕೆ ಮಾಡಿದ ಮತದಾರರಿಗೆ ಕೃತಜ್ಞತೆ ತಿಳಿಸಿ ಜನಸೇವೆಯೇ ಜನಾರ್ಧನನ ಸೇವೆ ಶ್ರೀ ಪತ್ರಿ ಬಸವೇಶ್ವರ ಅನುಭವ ಮಂಟಪದ ಸೇವಾ ಅಭಿವೃದ್ಧಿಗೆ ಸದಾ ನಿಮ್ಮ ಜೊತೆಗೆ ಇರುವೆ ಎಂದರು.

- Advertisement -

ಶರಣೆ ಪ್ರೇಮಕ್ಕ ಅಂಗಡಿ 17-9-2023ರಂದು ನಡೆಯುವ ಪ್ರವಚನ ಮಂಗಲ ಕಾರ್ಯಕ್ರಮ ವಿವರಿಸಿ ಸರ್ವರಿಗೂ ಸ್ವಾಗತ ಕೋರಿದರು. ಬಸವಣ್ಣ ಸಿಳಿ ದುಂಡಯ್ಯ ಕುಲಕರ್ಣಿ ಗಂಗಯ್ಯ ಮನವಳ್ಳಿ ಮಠ ಪತ್ರಿ ಬಸವ ನಗರ ಅಭಿವೃದ್ದಿ ಸಂಘ ಅಜಗಣ್ಣ ಮುಕ್ತಾಯಕ್ಕ ಬಳಗ ಜಾಗತಿಕ ಲಿಂಗಾಯತ ಮಹಾಸಭಾ ಮಹಿಳಾ ಘಟಕ ನಗರದ ಶರಣ ಶರಣೆಯರು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಯೋಗ ಸ್ಪರ್ಧಾ ವಿಜೇತರಿಗೆ ಕಡಾಡಿ ಸನ್ಮಾನ

ಮೂಡಲಗಿ: ಗ್ರಾಮೀಣ ಪ್ರದೇಶದ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಯೋಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ ಇಂತಹ ಪ್ರತಿಭೆಗಳು ಬೆಳಕಿಗೆ ಬಂದು ನಾಡಿನ...
- Advertisement -

More Articles Like This

- Advertisement -
close
error: Content is protected !!
Join WhatsApp Group