ಸಿಂದಗಿ; ತಾಲೂಕಿನ ಕಕ್ಕಳಮೇಲಿ ತಾಂಡಾದ ಬಸವನಗರ, ನಾಯಕ, ಕಾರಭಾರಿ ಇವರ ಮಾರ್ಗದರ್ಶನದಲ್ಲಿ ಮೇ. 17 ಮತ್ತು 18 ರಂದು ಶ್ರೀ ಸೇವಾಲಾಲ ಹಾಗೂ ಜಗದಂಬಾ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.
ಮೇ. 17 ಶುಕ್ರವಾರ ಬೆಳಿಗ್ಗೆ 08-00 ಗಂ. ಶ್ರೀ ಸೇವಾಲಾಲ ಪಲ್ಲಕ್ಕಿ ಮೆರವಣಿಗೆ ಮುಂಜಾನೆ 11-30 ಗಂಟೆಗೆ ಶ್ರೀ ಸೇವಾಲಾಲ ಮಹಾರಾಜರ ಮಹಾಭೋಗ ಕಾರ್ಯಕ್ರಮ ಹಾಗೂ 04-30 ಗಂಟೆಗೆ ಧರ್ಮಸಭೆ ಬಲರಾಮ ಮಹಾರಾಜರು ಗಬುರವಾಡಿ ಇವರ ನೇತೃತ್ವದಲ್ಲಿ ರಾತ್ರಿ 10 ಗಂಟೆಗೆ ಭಜನಾ ಕಾರ್ಯಕ್ರಮ ನಡೆಯಲಿದೆ.
18 ರಂದು ಶನಿವಾರ ಸಂಜೆ 06-00 ಗಂಟೆಗೆ ಶ್ರೀ ಜಗದಂಬಾ ದೇವಿ ಹೋಮ ಹವನ, ರಾತ್ರಿ 10-00 ಗಂಟೆಗೆ ಶ್ರೀಮತಿ ಭಾರತಿಬಾಯಿ ಪವಾರ ಸಾ|| ಉಮರಗಾ ಎಲ್.ಐ. ಹಾಗೂ ಶ್ರೀ ರಾಮು ಚವ್ಹಾಣ ಸಾ।। ಜಗಜನ್ನಿ ತಾ|| ಇಂಡಿ ಇವರಿಂದ ಭಜನಾ ಕಾರ್ಯಕ್ರಮ ಸಮಸ್ತ ಶ್ರೀ ಗುರು-ಹಿರಿಯರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಜರುಗುವವು.
ಕಾರಣ ಸುತ್ತಮುತ್ತಲಿನ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸೇವಾಲಾಲ ಹಾಗೂ ಜಗದಂಬಾ ದೇವಿಯ ಕೃಪೆಗೆ ಪಾತ್ರರಾಗುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.