spot_img
spot_img

Sindagi: ಸ್ವಹಿತಾಸಕ್ತಿಗಾಗಿ ಮಹಾ ಘಟಬಂಧನ – ಈರಣ್ಣ ರಾವೂರ

Must Read

- Advertisement -

ಸಿಂದಗಿ: ದೇಶದ ಹಿತವನ್ನು ಬಯಸದೇ ಭ್ರಷ್ಟಾಚಾರ, ಕುಟುಂಬ ರಾಜಕಾರಣ, ವೈಯಕ್ತಿಕ ಹಿತಾಸಕ್ತಿ ಇಟ್ಟುಕೊಂಡು ಒಬ್ಬ ದೇಶಭಕ್ತ ಪ್ರಧಾನಿ ನರೇಂದ್ರ ಮೋದಿಯವರನ್ನು ಸೋಲಿಸಲು ವಿರೋಧಿಗಳು ಮಹಾಘಟಬಂಧನ್ ರಚಿಸಿಕೊಂಡಿದ್ದಾರೆ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಈರಣ್ಣ ರಾವುರ ಕಿಡಿಕಾರಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,  ನಿಮ್ಮಲ್ಲಿ ಪ್ರಧಾನಿ ಅಭ್ಯರ್ಥಿ ಯಾರೆಂದು ಮೊದಲು ಜನತೆಗೆ ತಿಳಿಸಿ, ಅವರೆಲ್ಲ ಕೇವಲ ಫೊಟೋ ಶೂಟ್‌ಗಾಗಿ ಒಂದೆಡೆ ಸೇರಿ ಎರಡು ದಿನದ ಟ್ರಿಪ್‌ಗಾಗಿ ಬೆಂಗಳೂರಿಗೆ ಬಂದಿದ್ದಾರೆ. ಇವರಿಗೆ ಯಾವುದೇ ಸಿದ್ಧಾಂತಗಳಿಲ್ಲ ಕೇವಲ, ಮೋದಿ ವಿರೋಧಿಸುವುದೆ ಇವರ ಸಿದ್ಧಾಂತ ಎಂದು ಮಹಾಘಟಬಂಧನವನ್ನು ಟೀಕಿಸಿದರು.

ಮೋದಿಯವರು 3 ನೇ ಬಾರಿಗೆ ಪ್ರಧಾನಿಯಾಗುವದು ಶತಸಿದ್ಧ ಏಕೆಂದರೆ ಇಡಿ ಜಗತ್ತಿನ ಎಲ್ಲ ದೇಶಗಳು ಮೋದಿಯೇ ವಿಶ್ವನಾಯಕನೇಂದು ಹೇಳುತ್ತಿವೆ. ಭಾರತವನ್ನು ವಿಶ್ವಗುರುವಾಗಿಸಲು ದೇಶದ ಜನತೆ ಈಗಾಗಲೆ ತೀರ್ಮಾನಿಸಿದ್ದಾರೆ. 2024 ಕ್ಕೆ ಮಗದೊಮ್ಮೆ ಮೋದಿಜಿಯೇ ದೇಶದ ಪ್ರಧಾನಿ ಇದನ್ನು ಯಾರಿಂದಲೂ

- Advertisement -

ತಪ್ಪಿಸಲು ಸಾಧ್ಯವಿಲ್ಲ. ಕೇವಲ ಅಧಿಕಾರದ ಆಸೆಗಾಗಿ ತಮ್ಮ ಸಿದ್ಧಾಂತಗಳನ್ನು ಗಾಳಿಗೆ ತೂರಿ ಒಂದಾಗುವುದನ್ನು ನೋಡಿದರೆ ಇವರಿಗೆ ದೇಶಕ್ಕಿಂತ ಅಧಿಕಾರ ಮುಖ್ಯ ಎನಿಸುತ್ತದೆ ಎಂದು ರಾವೂರ ಹರಿ ಹಾಯ್ದಿದಿದ್ದಾರೆ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group