- Advertisement -
ಬೀದರ – ಬೀದರ್ ಜಿಲ್ಲೆಯ ಔರಾದ ತಾಲೂಕಿನ ಆಲೂರ ಗ್ರಾಮದ ಬಸವರಾಜ ಯುವಕ ಪಂಜಾಬ್ ಪ್ರಾಂತ್ಯದಲ್ಲಿ ಬಿ ಎಸ್ ಎಫ್ ನಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ವೇಳೆಯಲ್ಲಿ ಉಗ್ರರ ವಿರುದ್ಧ ಹೋರಾಟ ಮಾಡುವಾಗ ಗುಂಡು ತಗುಲಿ ಹುತಾತ್ಮರಾಗಿದ್ದಾರೆ.
ಔರಾದ ತಾಲೂಕಿನ ಸುಪುತ್ರ ಆಲೂರ ಗ್ರಾಮದ ಬಸವರಾಜ ಇವರು ಸೇವೆಗೆ ಸೇರಿ 8 ಎಂಟು ವರ್ಷ ಆಗಿರುವ ಮಾಹಿತಿ ಇದೆ. ಇವರು ತಂದೆ ಗಣಪತಿ, ತಾಯಿ ಕಮಲಾಬಾಯಿ ಹೆಂಡತಿ ಕವಿತಾ ಅವರನ್ನು ಅಗಲಿದ್ದಾರೆ.
ಮನೆ ಮಗನನ್ನು ಕಳೆದುಕೊಂಡ ಕುಟುಂಬ ಸದಸ್ಯರು ಕಣ್ಣೀರಿನಲ್ಲಿ ಮುಳುಗಿದ್ದು, ಬೇಲೂರು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.