ಮುಧೋಳ – ತಾಲೂಕಿನ ಸುಕ್ಷೇತ್ರ ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದಲ್ಲಿ ರವಿವಾರ ದಿ.3 ರಂದು ಮುಂಜಾನೆ 9 ಗಂಟೆಗೆ ರವಿವಾರದ 108 ನೆ ಸತ್ಸಂಗ ಕಾರ್ಯಕ್ರಮವು ಜರುಗಲಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಕುಮಾರ ಗುರುಪ್ರಸಾದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ ಈ ಸಂದರ್ಭದಲ್ಲಿ ಜಾತ್ಯತೀತ ಜಗದ್ಗುರು ಸಿದ್ಧಾರೂಢರ ಪಂಚಾಮೃತ ಅಭಿಷೇಕ, ಓಂಕಾರ.ಭಜನೆ ನಡೆಯುವುದು. ನಂತರ ಪ.ಪೂ.ಶರಣಬಸವ ಶಾಸ್ತ್ರಿಗಳಿಂದ ಪ್ರವಚನ. ಸಿದ್ಧಾರೂಢರ 12ನೇ ಅಧ್ಯಾಯದ ಪಾರಾಯಣ ಜರುಗುವುದು.ನಂತರ ಮಂಗಲ. ಪ್ರಸಾದವು ಜರುಗುವುದು ಎಂದು ತಿಳಿಸಿದ್ದಾರೆ