- Advertisement -
ಬೀದರ – ಸರ್ಕಾರದಲ್ಲಿ ಈಗ ಆಡಳಿತವೇ ಜಾರಿಯಲ್ಲಿ ಇಲ್ಲ. ಜನರು ಕೂಡ ಆಡಳಿತ ಇದ್ದರೆಷ್ಟು ಬಿಟ್ಟರೆಷ್ಟು ಎಂದುಕೊಂಡು ಮುನ್ನಡೆದಿದ್ದಾರೆ. ಬಿಜೆಪಿ ಒಂದು ಆರಿಹೋಗುತ್ತಿರುವ ಪಕ್ಷ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದರು.
ಮಾಧ್ಯಮದವರೊಡನೆ ಮಾತನಾಡಿದ ಅವರು, ಬಿಜೆಪಿಯವರು ತಾವು ಮುಳುಗಿ ಹೋಗುತ್ತಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಳುಗುವ ಹಡಗು ಎನ್ನುತ್ತಾರೆ. ದೀಪ ಯಾವಾಗಲೂ ಆರುವ ಮುಂಚೆ ಜೋರಾಗಿ ಉರಿಯುತ್ತದೆ ಹಾಗೆ ಬಿಜೆಪಿ ಕೂಡ ಮುಂದೆ ಆರಿ ಹೋಗುತ್ತದೆ ಎಂದು ಖಂಡ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪರೀಕ್ಷೆ ನಡೆಸುವ ಕುರಿತಂತೆ, ೧೮ ವರ್ಷ ಮೀರಿದ ಎಲ್ಲರಿಗೂ ಲಸಿಕೆ ನೀಡಿ ನೀವು ಪರೀಕ್ಷೆ ನಡೆಸಬೇಕು ಎಂದ ಅವರು ಮೇಕೆದಾಟು ಯೋಜನೆ ಕರ್ನಾಟಕದ ಹಕ್ಕು. ರಾಜ್ಯ ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು ಎಂದು ಆಗ್ರಹಿಸಿದರು.