spot_img
spot_img

ಇಂದಿನ ವಿಶೇಷ: ಜಾಗತಿಕ ಮಾತೃ ಭಾಷಾ ದಿನ

Must Read

- Advertisement -

ವಿಶ್ವ ಮಾತೃ ಭಾಷಾ ದಿನದಲ್ಲಿ ಅವರವರು ಹುಟ್ಟಿದ ದೇಶ,ರಾಜ್ಯ, ಮನೆಯ ಮೂಲದ ಭಾಷೆಯನ್ನು ಅಲ್ಲಿದ್ದೇ ತಿಳಿದು,ಬೆಳೆಸಿ,ಕಲಿಸಿ ನಡೆಸುವಂತಾಗಿದ್ದರೆ ಎಷ್ಟೋ ಶಾಂತಿ ಜ್ಞಾನ, ಸಮೃದ್ದಿ, ಸಮಾಧಾನ, ನೆಮ್ಮದಿ ಸಿಗುತ್ತಿತ್ತು.

ಆದರೆ, ಹುಟ್ಟಿದ್ದು ಒಂದೆಡೆ,ಬೆಳೆದದ್ದು ಒಂದೆಡೆ, ಕಲಿತದ್ದು ಮತ್ತೊಂದು ಕಡೆ,ದುಡಿಯಲು ಹೋಗಿದ್ದೇ ಬೇರೆ ಕಡೆ ಹೀಗೇ ನಡೆಯುತ್ತಾ ಭಾಷೆಗಳು ಬೆಳೆದವು.ಮೂಲ ಭಾಷೆ ಮರೆತು ನಡೆದವರಿಗೆ ಅದು ಹಿಂದುಳಿದದ್ದೇ ಕಾಣಲಿಲ್ಲ.ಎಲ್ಲೋ ದೂರವಿದ್ದು ಭಾಷೆ ಹಾಳಾಯಿತು ಎನ್ನುವ ಬದಲಾಗಿ ಹತ್ತಿರ ಬಂದು ಬೆಳೆಸುವ ಕೆಲಸ ಮಾಡಿದ್ದರೆ ಋಣ ಸಂದಾಯವಾಗುತ್ತದೆ ಎನಿಸುತ್ತದೆ.ಮೂರನೆಯವರಿಗೆ ಕಲಿಸೋ ಮೊದಲು ನಮ್ಮವರಿಗೆ ಕಲಿಸುವ ಕೆಲಸ ಭಾಷಾ ರಕ್ಷಕರು ಮಾಡಬಹುದು.ಶಾಲಾ ಕಾಲೇಜ್ಗಳಲ್ಲಿಯೇ ಮರೆಯಾಗುತ್ತಿರುವಾಗ ಹೊರಗಿನ ಹೋರಾಟ,ಹಾರಾಟ,ಮಾರಾಟದ ರಾಜಕೀಯದಿಂದ ಯಾವ ಭಾಷೆ ಧರ್ಮ ಉಳಿಸಲಾಗುವುದಿಲ್ಲ. ಒಟ್ಟಿನಲ್ಲಿ ಯಾವುದೇ ಆಗಲಿ ವ್ಯವಹಾರಕ್ಕೆ ರಾಜಕೀಯಕ್ಕೆ ಇಳಿದ ಮೇಲೆ ಹಣ,ಅಧಿಕಾರ, ಸ್ಥಾನಮಾನವಷ್ಟೆ ಮುಖ್ಯವಾಗುತ್ತದೆ.

ಇದು ತಾತ್ಕಾಲಿಕವೆಂದು ಅರಿತವರಷ್ಟೆ ಮೂಲವನ್ನರಿತು ನಡೆಯುತ್ತಾರೆನ್ನಬಹುದು. ವಿಶ್ವಶಕ್ತಿಯ ಒಂದು ಮುಖ್ಯ ಶಕ್ತಿಯಾಗಿರುವ ಭಾರತಮಾತೆ,ಅವಳೊಳಗಿರುವ ಕನ್ನಡಮ್ಮ ಇಂದು ಪರಕೀಯ,ಪರದೇಶ,ಪರರಾಜ್ಯದವರ ಕೈಯಲ್ಲಿ ಸಿಲುಕಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ನಾಟಕವಾಡುವವರ ಹತ್ತಿರವಿದ್ದರೂ ದೂರವಾಗಿರೋದಾಗಿದೆ. ಅದಕ್ಕೆ ಸಹಕಾರ ನೀಡಿದವರೂ ನಾವೇ ಆಗಿರೋದು ದೊಡ್ಡ ದುರಂತ. ನೆಲ ಜಲ ಬೇಕು,ಸರ್ಕಾರದ ಸಾಲ,ಸೌಲಭ್ಯ ಬೇಕು ಭಾಷೆ,ಧರ್ಮ,ಸಂಸ್ಕೃತಿ ಬೇಡವೆಂದರೆ ಹೇಗಿದೆ.

- Advertisement -

ಆತ್ಮಾವಲೋಕನ ಅಗತ್ಯವಿದೆ. ಆತ್ಮಾವಲೋಕನದಿಂದ ಆತ್ಮನಿರ್ಭರ ಭಾರತ.

ನುಡಿ ಮುತ್ತುಗಳು/ THOUGHTS OF THE DAY

ನೀವು ಯಾರಿಗಾದರೂ ನೀಡಬಹುದಾದ ಅತ್ಯುತ್ತಮ ಉಡುಗೊರೆ ನಿಮ್ಮ ಅಮೂಲ್ಯವಾದ ಸಮಯ. ಏಕೆಂದರೆ ನೀವು ನಿಮ್ಮ ಸ್ವಂತ ಸಮಯವನ್ನು ನೀಡಿದಾಗ, ನೀವು ನಿಮ್ಮ ಜೀವನದ ಒಂದು ಭಾಗವನ್ನು ಅವರಿಗೆ ನೀಡುತ್ತೀರಿ. ಅದು ನಿಮಗೆ ಎಂದಿಗೂ ವಾಪಸ್ಸು ಬರುವುದಿಲ್ಲ .

ನೀವು ಎಲ್ಲಾ ಸಮಯದಲ್ಲೂ ಸರಿ ಎಂದು ನೀವೇ ಭಾವಿಸಿದರೆ, ನೀವು ಏನನ್ನೂ ಜೀವನದಲ್ಲಿ ಕಲಿಯುವುದಿಲ್ಲ.

- Advertisement -

ಸುಂದರವಾದ ಮುಖವನ್ನ ಜನರು ಕ್ಷಣಿಕ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಆದರೆ ಸುಂದರವಾದ ನಡವಳಿಕೆಯನ್ನು ಜೀವನ ಪರ್ಯಂತ ಕಾಪಾಡಿಕೊಂಡಿರುತ್ತಾರೆ.
ಏನು ಬೇಕೆಂಬುದನ್ನು ನೀವೇ ಆಯ್ಕೆ ಮಾಡಿಕೊಳ್ಳಿ. ನಮ್ಮ ಜೀವನದಲ್ಲಿ ನಾವು ತೂರಿಸುವ ಅಕ್ಕರೆ ಪ್ರೀತಿ ವಾತ್ಸಲ್ಯ ಮಮತೆ ಕರುಣೆ ನಮ್ಮ ಬಾಂಧವ್ಯವನ್ನು ಗಟ್ಟಿಗೊಳಿಸುತ್ತದೆ.
ನಿಮ್ಮ ಸಮಸ್ಯೆಗಳನ್ನು ಜನರಿಗೆ ಎಂದಿಗೂ ಹೇಳಬೇಡಿ. ಏಕೆಂದರೆ ಬಹುಪಾಲು ಜನರು ಸಮಸ್ಯೆಬಗ್ಗೆ ಸುಮ್ಮನೆ ತಲೆಕೆಡಿಸಿಕೊಳ್ಳುವುದಿಲ್ಲ ಮತ್ತು ಇನ್ನು ಕೆಲವರು ನಿಮಗೆ ಸಮಸ್ಯೆಗಳಿವೆ ಎಂದು ಸಂತೋಷಪಡುತ್ತಾರೆ.

ಗಳಿಸಿದ ಧನ ಚಿರವಲ್ಲ, ಪಡೆದ ಅಧಿಕಾರ ಸ್ಥಿರವಲ್ಲ, ಏರಿದ ಅಂತಸ್ತು ಶಾಶ್ವತವಲ್ಲ, ಸಂತಸ ಸಂಭ್ರಮಗಳೂ, ಸಕಲವೂ ನಶ್ವರ.ಮಾಡಿದ ಸತ್ಕಾರ್ಯ, ಮೆರೆದ ಔದಾರ್ಯ, ಆನಂದಿಸಿ, ಅನುಭವಿಸಿದ ನೆನಪುಗಳ ಮಾಧುರ್ಯ ಎಂದಿಗೂ ಅಜರಾಮರ.

ಸ್ವಯಂ ನಿಯಂತ್ರಣವೇ ಶಕ್ತಿ. ಸರಿಯಾದ ಆಲೋಚನೆಯೇ ಪಾಂಡಿತ್ಯ, ಶಾಂತತೆಯು ಶಕ್ತಿ.

The Future belongs to those Who Believe in the BEAUTY of their DREAMS.

LIFE is So much Simpler When you Stop Explaining Yourself to PEOPLE and Just do What Works for YOU.

Push Yourself because no one else is going to do it for you. It’s your life and yours alone. Others may walk it with you but no one can walk it for you.

Life has no remote, get up and change it yourself.

The crux of life should be :
Learn what you don’t know.
Polish what you know.
Debate what you believe in.
Share all back to society which made you what you are today.

Expose Yourself to aloneness. When a Person is Left alone, he Starts thinking of Higher Reality – about Death, Life, soul, God and the Mystery of all.

– Swami Chinmayananda Saraswati-

Pure Heart is the Greatest Temple in the World. Do not Believe the Smiling face, but Believe the Smiling Heart, they are very rare in this World.

Life is really Simple but Feelings and Thinking makes it Complicated.

Social inter- dependence is not an Accident, but the Law of Our Nature.
– Mahadev Govind Ranade-

ನಮ್ಮ ಕನ್ನಡ ಭಾಷೆ , ನಮ್ಮೆಲ್ಲರ ಹೆಮ್ಮೆಯ ಭಾಷೆ. ಕನ್ನಡದ ಸುಗಂಧವನ್ನು ಎಲ್ಲೆಡೆ ಹರಡಿ. ಕನ್ನಡ ಬೆಳೆಸಿ, ಉಳಿಸಿ ಮತ್ತು ಎಲ್ಲೆಡೆ ಕನ್ನಡದ ವಾತಾವರಣವನ್ನು ಉಂಟುಮಾಡಿ. ಸಿರಿಗನ್ನಡಂ ಗೆಲ್ಗೆ ಮತ್ತು ಸಿರಿಗನ್ನಡಂ ಬಾಳ್ಗೆ.


 

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಉಚಿತ ಕಣ್ಣು ತಪಾಸನೆ ಹಾಗೂ ಶಸ್ತ್ರಚಿಕಿತ್ಸೆ ಶಿಬಿರ

ಸಿಂದಗಿ; ಪೂಜ್ಯ ಶ್ರೀ ಚೆನ್ನವೀರಸ್ವಾಮೀಜಿ ಪ್ರತಿಷ್ಠಾನ, ಸಿಂದಗಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ವಿಜಯಪುರ ಹಾಗೂ ಅನುಗ್ರಹ ವಿಜನ್ ಫೌಂಡೇಶನ್ ಟ್ರಸ್ಟ್, ವಿಜಯಪುರ, ಜಿ.ಪಿ. ಪೋರವಾಲ...
- Advertisement -

More Articles Like This

- Advertisement -
close
error: Content is protected !!
Join WhatsApp Group