Homeಸುದ್ದಿಗಳುವಾಜಪೇಯಿ ಜೀವನ ನಮಗೆಲ್ಲ ಮಾದರಿಯಾಗಬೇಕು - ಈರಣ್ಣ ಕಡಾಡಿ

ವಾಜಪೇಯಿ ಜೀವನ ನಮಗೆಲ್ಲ ಮಾದರಿಯಾಗಬೇಕು – ಈರಣ್ಣ ಕಡಾಡಿ

ಮಾಜಿ ಪ್ರಧಾನಿ ವಾಜಪೇಯಿ ಸ್ಮರಣೆ

ಮೂಡಲಗಿ: ಸಣ್ಣ ಮನಸ್ಸಿನಿಂದ ಯಾರು ದೊಡ್ಡರಾಗುವುದಿಲ್ಲ. ಒಡೆದ ಮನಸ್ಸುಗಳಿಂದ ಸಂಘಟನೆ ಕಟ್ಟಲು ಆಗೋದಿಲ್ಲ ಇದು ಅಟಲ್ ಬಿಹಾರಿ ವಾಜಪೇಯಿ ಅವರ ಅನುಭವದ ಮಾತು. ಕವಿ, ಪ್ರಚಂಡವಾಗ್ಮಿ, ಶ್ರೇಷ್ಠ ಸಂಸದೀಯ ಪಟು, ದೂರದೃಷ್ಠಿ ಜನನಾಯಕ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ಆದರ್ಶ ಬದುಕು ಬದುಕಿದ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ರಾಜಕೀಯ ಜೀವನ ನಮ್ಮೆಲ್ಲರಿಗೂ ಮಾದರಿಯಾಗಬೇಕೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಗುಣಗಾನ ಮಾಡಿದರು.

ತಾಲೂಕಿನ ಕಲ್ಲೋಳಿ ಪಟ್ಟಣದಲ್ಲಿ ಸೋಮವಾರ ಡಿ-೨೫ ರಂದು ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರ ೯೯ನೇ ಜನ್ಮದಿನ ಹಾಗೂ ಸುಶಾಸನ ದಿನದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು ಮಿತ ಭಾಷಿ, ಕವಿ ಹೃದಯದವರಾದ ವಾಜಪೇಯಿಯವರು ಅಷ್ಟೇ ಕಠಿಣ ನಿರ್ಧಾರ ಕೈಗೊಳ್ಳಲು ಶಕ್ತರಾಗಿದ್ದರು. ಪೋಖ್ರಾನ್ ಅಣುಬಾಂಬ್ ಪರೀಕ್ಷಿಸುವ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ಪರಿಚಯಿಸಿದ ಧೀಮಂತ ನಾಯಕ ಅವರು ಎಂದರು.

ದೇಶದ ಪ್ರಧಾನಿಯಾಗಿದ್ದ ಕಾಲದಲ್ಲಿ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮ ಸಡಕ್ ಯೋಜನೆ, ಗ್ರಾಮೀಣ ಪ್ರದೇಶದ ಶಿಕ್ಷಣಕ್ಕೆ ಆದ್ಯತೆ ನೀಡುವ ಸಮಗ್ರ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಈ ರೀತಿ ತಮ್ಮ ಅದ್ಬುತ ಯೋಜನೆಗಳ ಮೂಲಕ ಜನರಿಗೆ ಹತ್ತಿರವಾಗಿದ್ದರು ಎಂದು ಸ್ಮರಿಸಿದರು.

ಪ್ರಧಾನಿ ಹುದ್ದೆಯಿಂದ ಕೆಳಗಿದ ನಂತರ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವಾಗ “ನಾನು ರಾಷ್ಟ್ರದ ಅಭಿವೃದ್ಧಿಗಾಗಿ ಮತ್ತು ಜನರ ಜೀವನಮಟ್ಟ ಸುಧಾರಿಸಲು ಅನೇಕ ಕಾರ್ಯಗಳನ್ನು ಯೋಜನೆಗಳನ್ನು ಜಾರಿಗೆ ತಂದೆ. ಆದರೆ ಅವುಗಳನ್ನು ಜನರಿಗೆ ತಲುಪಿಸುವಲ್ಲಿ ಆಡಳಿತ ವ್ಯವಸ್ಥೆ ಸೋತಿದೆ ಎಂಬುದು ಅಕ್ಷರಶಃ ನಿಜವಾಗಿದೆ ಎಂದಿದ್ದರು. ಇಂತಹ ದೂರದೃಷ್ಟಿಯ ಚಿಂತಕನ ಜನ್ಮದಿನವನ್ನು ಇಂದಿನ ಆಡಳಿತ ವ್ಯವಸ್ಥೆಯನ್ನು ಎಚ್ಚರಿಸಲು ಸುಶಾಸನ ದಿನ ಎಂದು ನಾವು ಆಚರಿಸುತ್ತಿದ್ದೇವೆ. ಆಡಳಿತಗಾರರು, ನೈತಿಕತೆ, ಸಚ್ಚಾರಿತ್ರ‍್ಯ ಮತ್ತು ಮೌಲ್ಯಾಧಾರಿತ ರಾಜಕಾರಣ ಮಾಡುವ ಮೂಲಕ ಅದನ್ನು ಪಾಲಿಸುವ ಮೇಲ್ಪಂಕ್ತಿ ಹಾಕುವ ಅವಶ್ಯಕತೆ ಇದೆ ಎಂದರು.  

ಪ್ರಮುಖರಾದ ಹಣಮಂತ ಸಂಗಟಿ, ಶಂಕರ ಗೊರೋಶಿ, ಅಡಿವೆಪ್ಪ ಕುರಬೇಟ, ಶ್ರೀಕಾಂತ ಕೌಜಲಗಿ, ಪ್ರಭು ಕಡಾಡಿ, ಶಿವಪ್ಪ ಬಿ.ಪಾಟೀಲ, ಅಜೀತ ಚಿಕ್ಕೋಡಿ, ಪರಪ್ಪ ಮಳವಾಡ, ಸೋಮಲಿಂಗ ಹಡಿಗನಾಳ, ತುಕಾರಾಮ ಪಾಲ್ಕಿ, ಸೇವಾ ಸಂಸ್ಥೆ ಅಧ್ಯಕ್ಷ ಪರಪ್ಪ ಗಿರೆಣ್ಣವರ, ಲಗಮಣ್ಣ ಕುಳ್ಳೂರ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು, ಸಹಕಾರಿ ಸದಸ್ಯರು, ಸಿಬ್ಬಂದಿ ವರ್ಗದವರು, ಕಾರ್ಯಕರ್ತರು ಉಪಸ್ಥಿತರಿದ್ದರು

RELATED ARTICLES

Most Popular

close
error: Content is protected !!
Join WhatsApp Group