ಗಣಪತಿ ಸಚ್ಚಿದಾನಂದ ಸ್ವಾಮಿಗಳ 82ನೇ ವರ್ಧಂತ್ಯುತ್ಸವ

Must Read

ದತ್ತಸೇನೆ ಮತ್ತು ವಿಪ್ರ ವಕೀಲರ ಪರಿಷತ್ ವತಿಯಿಂದ ಶೋಭಾಯಾತ್ರೆ, ನ್ಯಾಯಾಲಯದಲ್ಲಿ ಲಡ್ಡು ವಿತರಣೆ

ಮೈಸೂರು -ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82ನೇ ವರ್ಧಂತ್ಯುತ್ಸವದ ಅಂಗವಾಗಿ ನಗರದ ದತ್ತಸೇನೆ ಮತ್ತು ವಿಪ್ರ ವಕೀಲರ ಪರಿಷತ್ ವತಿಯಿಂದ ಇತ್ತೀಚೆಗೆ ಚಾಮುಂಡಿಪುರಂ ವೃತ್ತದಿಂದ ಆಶ್ರಮದವರೆಗೆ ಶೋಭಾಯಾತ್ರೆಯನ್ನು ಆಯೋಜಿಸಲಾಗಿತ್ತು.

ಮೆರವಣಿಗೆಯಲ್ಲಿ ಮೇಲುಕೋಟೆ ವೆಂಗಿಪುರ ಮಠದ ಇಳೈ ಆಳ್ವಾರ್ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಎಂ.ಎನ್.ನವೀನ್‍ಕುಮಾರ್, ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ, ಹೆಚ್.ವಿ.ಭಾಸ್ಕರ್, ಸಹಕಾರಿ ಧುರೀಣ ಹೆಚ್.ವಿ.ರಾಜೀವ್, ದತ್ತಸೇನೆ ಅಧ್ಯಕ್ಷ ಆರ್.ಎಸ್.ಸತ್ಯನಾರಾಯಣ, ಎಂ.ಡಿ.ಪಾರ್ಥಸಾರತಿ, ವಿನಯ್‍ಕುಮಾರ್ (ದತ್ತಸೇನೆ) ಹಾಗೂ ಇತರರು ಭಾಗವಹಿಸಿದ್ದರು. ಇದರ ಸಂಪೂರ್ಣ ಜವಾಬ್ದಾರಿಯನ್ನು ದತ್ತಸೇನೆ ಕಾರ್ಯಕಾರಿ ಸಮಿತಿಯವರು ವಹಿಸಿಕೊಂಡಿದ್ದರು.

ಮತ್ತೊಂದು ಕಡೆ ಮೈಸೂರು ನ್ಯಾಯಾಲಯದಲ್ಲಿ ವಕೀಲರು, ನೋಟರಿ ಹಾಗೂ ನ್ಯಾಯಾಧೀಶರಿಗೆ ಲಡ್ಡುವನ್ನು ಉಚಿತವಾಗಿ ಪ್ರಸಾದದ ರೂಪದಲ್ಲಿ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ  ದತ್ತಸೇನೆ ಅಧ್ಯಕ್ಷ ಆರ್.ಎಸ್.ಸತ್ಯನಾರಾಯಣ, ವಿಪ್ರ ವಕೀಲ ಪರಿಷತ್ ಅಧ್ಯಕ್ಷ ರವೀಂದ್ರ, ಜಯನಗರ ಶ್ರೀರಾಮ ಮಂದಿರದ ಸಮಿತಿ ಸದಸ್ಯ ಮುರುಳಿ, ವಕೀಲ ಬಾಲು, ಹೊಯ್ಸಳ ಸಂಘದ ಸುಂದರಮೂರ್ತಿ, ಗಣಪತಿ ಆಶ್ರಮದ ಪ್ರಮುಖರಲ್ಲಿ ಒಬ್ಬರಾದ ಟಿ.ರಮೇಶ್, ವಿನಯ್ ಬಾಬು ಮತ್ತಿತರಿದ್ದರು.

- Advertisement -
- Advertisement -

Latest News

ಪ್ರೊ. ಭೀಮರಾಯ ಬಿರಾದಾರರಿಗೆ ಪಿಎಚ್ ಡಿ

ಸಿಂದಗಿ : ಪಟ್ಟಣದ ಪ್ರೊ. ಭೀಮರಾಯ ರುದ್ರಗೌಡ ಬಿರಾದಾರ ಇವರಿಗೆ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಕರ್ನಾಟಕ ಸುರತ್ಕಲ್ ಮಂಗಳೂರು ವತಿಯಿಂದ ಪಿಎಚ್.ಡಿ ಪದವಿ ನೀಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group