ಗೋಕಾಕ – ಬಸವ ಸಮಿತಿ 2024 ನೇ ಸಾಲಿನ ವಿಶ್ವಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯ ಮಟ್ಟದ ಕವನ ಸ್ಪರ್ದೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ತವಗ ಗ್ರಾಮದ ಸಿದ್ದಲಿಂಗಯ್ಯಾ ಅಪ್ಪಯ್ಯಾ ಹಿರೇಮಠ ಅವರನ್ನು ತವಗ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಸಾಂಸ್ಕೃತಿಕ ರಾಯಬಾರಿ, ಶಿಕ್ಷಕ ರಾಮಸಿದ್ದಪ್ಪ ಗುಡಸಿ ( ಬೆನಚಿನಮರಡಿ), ಉಪ್ಪಾರಟ್ಟಿ ಕನ್ನಡ ಶಾಲೆಯ ಶಿಕ್ಷಕ ಬಾಳೇಶ ಲಟ್ಟಿ ಪತ್ರವನ್ನು ನೀಡಿ ಗೌರವಿಸಿದರು.
ಈ ಕಾರ್ಯಕ್ರಮದಲ್ಲಿ ದಿವ್ಯ ಸಾನ್ನಿಧ್ಯವನ್ನು ಶ್ರೀ ಪತ್ರಯ್ಯಅ. ಹುಲಕಂತಿಮಠ ರವರು ವಹಿಸಿದ್ದರು.
ಅದ್ಯಕ್ಷರಾಗಿ ಶ್ರೀಕಾಂತ ದಂಡು, ಮುಖ್ಯ ಅತಿಥಿಗಳಾಗಿ ಬಸವರಾಜ ಆಶಿ ಮಾಜಿ ಸೈನಿಕರು, ಶಾಂತಯ್ಯಾ ಹಿರೇಮಠ ನಿವೃತ ಪೋಲಿಸರು ಅತಿಥಿಗಳಾಗಿ ಬಾಳೇಶ ಬಡಿಗೇರ, ಕಾಡಪ್ಪ ಮಲಕನ್ನವರ, ಬಾಳಪ್ಪ ಹತ್ತರಕಿ, ಆನಂದ ಆಶಿ, ಮಹಾಂತೇಶ ಪಾಟೀಲ, ಬಸವರಾಜ ಗುಗ್ಗರಿ, ಆನಂದ ನಾವಿ ಸಿದ್ದಪ್ಪ ಹತ್ತರಕಿ, ಗಜೇಂದ್ರ ಪಾಟೀಲ, ಶಿದ್ರಾಯ ಹತ್ತರಕಿ, ಶಂಕರ ಪ್ರಧಾನಿ ಭಾಗವಹಿಸಿದ್ದರು.
ಮುತ್ತೆಪ್ಪ ಶಿ. ಕೋಳಿ ಕಾರ್ಯಕ್ರಮ ನಿರೂಪಣೆ ಮಾಡಿದರು.