ಕಾರ್ಮಿಕ ದಿನದ ಕವನಗಳು

Must Read

ನಾ ಕಂಡ ಕಾರ್ಮಿಕ

ಅಲೆಮಾರಿ ಬದುಕು ಆನಂದ ಕಡಿಮೆ
ಮಳೆ ಇಲ್ಲ ಊರಿನಲಿ ಬರಗಾಲವು ಬಿದ್ದು
ಬಾಯ ತೆರೆದು ಬಿರುಕು ಬಿಟ್ಟಿವೆ ನೋಡಿ
ಹೊಲ ಗದ್ದೆಗಳು ಗಂಜಿಗೂ ಗತಿ ಇಲ್ಲ

ಹುಟ್ಟಿದ ಊರನು ಬಿಟ್ಟು ಪಟ್ಟಣಕ್ಕೆ
ಅರಿಸಿ ಬಂದಿರುವೆವು ಹೊಟ್ಟೆ ಪಾಡಿಗಾಗಿ
ಬದುಕಿಕೊಂದು ಆಸರೆ ಸಿಕ್ಕಿತೆನ್ನುವದರಲಿ
ವಕ್ಕರಿಸಿತು ನೋಡಿ ಸ್ವಾಮಿ ಕರೋನ

ಎಲ್ಲೆಲ್ಲೂ ನಡೆಸುತ್ತಿದೆ ಅದರ ಕಾರುಬಾರು
ಮತ್ತೆ ಉಳಿಯಿತು ನಮಗೆ ಕಾಲಿ ಜೇಬು
ಕಿಸೆನಲ್ಲಿ ಕಾಸಿಲ್ಲ ಊರಿಗ್ಹೋಗುವ ಮನಸಿಲ್ಲ
ನೆಲೆಯಿಲ್ಲದಂತೆ ಆಗಿದೆ ನಮ್ಮ ಬದುಕು

ಇದು ನಾ ಕಂಡ ಒಬ್ಬ ಕಾರ್ಮಿಕನ ಕಥೆ
ಈ ಕರೋನ ಮತ್ತೆ ಬಂದು ಕಾಡುತ್ತಿದೆ
ನಮ್ಮ ಕಾರ್ಮಿಕರ ಹೊಟ್ಟೆ ಬರಿದಾಗಿದೆ
ಕಾಯಕ ಬಿಟ್ಟು ಅವರಿಗೆ ಬೇರೆ ತಿಳಿಯದು

ಹಗಲಿರುಳು ಕೆಲಸವನು ಮಾಡುವರು
ಕಾಯಕ ನಿಷ್ಠೆಯನು ಮೆರೆಯುವರು
ಕಾಯಲಿ ಆ ಭಗವಂತ ಅವರನು
ಕರೋನ ಬೇಗೊಗಲಿ ಅವರ ಕಷ್ಟ ನೀಗಲಿ

ಬಸವರಾಜ ವೈ ಕೆ
ವಿಜಯಪುರ
8431627740


ಕಾರ್ಮಿಕ

ಕಾಯಕ ನಿರತ ಕಾರ್ಮಿಕನು
ದುಡಿಮೆಯೇ ದೇವರು ಎಂದಿಹನು
ತನ್ನವರಿಗಾಗಿ ಬೆವರು ಸುರಿಸಿ
ತ್ಯಾಗಮಯಿ ತಾ ಎನಿಸಿಹನು.

ಬಡವ ಬಲ್ಲಿದ ರೆಂಬೆ ಭೇದವಿಲ್ಲ
ಕಾರ್ಮಿಕರೆಲ್ಲಾ ಒಂದೇ
ಮೇಲು ಕೀಳು ಕಾಯಕದೊಳಿಲ್ಲ
ಶ್ರದ್ಧೆಯೇ ದೇವರು ಎಂದೇ

ದುಡಿತಕ್ಕೆ ಕೋಟಿ ಬಂದರು
ಅನ್ನವೇ ಬೇಕು ತಿನ್ನಲು
ಹೊಳಪಿದ್ದರು ಕೊಳಕಿದ್ದರು
ನಿಷ್ಠೆಯು ಬೇಕು ದುಡಿಯಲು.

ವಿಶ್ವ ಮಾನವ ತಿಳಿದುಕೊ
ನೀನೊಂದು ದುಡಿಯುವ ವರ್ಗ
ದುಡಿಯುವ ಕೈಗೆ ಸೌಲಭ್ಯಗಳ
ಕೊಟ್ಟು ಕರುಣಿಸಿದೆ ನಿಸರ್ಗ.

ಇಷ್ಟದಿ ಕಾಯಕ ನೀ ಮಾಡು
ಕಷ್ಟವೆ ಬರದು ಎಂದೆಂದು
ಇರುವ ಹುದ್ದೆಗೆ ಗೌರವ ನೀಡು
ಸಂತೃಪ್ತಿಯ ಜೀವನ ನಿನ್ನದು.

ಮಾಲೀಕ ನೀನೇ ಸೇವಕ ನೀನೇ
ಜಗದೊಂದೇ ದುಡಿಯುವ ವರ್ಗ
ದ್ವೇಷ ,ಅಸೂಯೆ, ಅಂತಸ್ತು ತೊರೆದು
ಒಂದಾಗಿದ್ದರೆ ಬಾಳಿದು ಸ್ವರ್ಗ.

ಮಹೇಂದ್ರ ಕುರ್ಡಿ

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group