ಕನ್ನಡ ಕವನ

Must Read

ಕನ್ನಡ ಕವನ

ಕೈ ಹಿಡಿದ್ ಕರಕೊಂಡ್ ಹೋಗತೈತಿ
ಕನ್ನಡದ ಕವನ |ಎಲ್ಲಿಗಿ ಅಂತೀರಿ |

ವರ್ಣಮಾಲೆ ವ್ಯಾಕರಣ ಪದಸಂಪತ್ತಿನಿಂದ ವೈಭೋವೊಪೇತದೆಡೆಗೆ |
ವೇದಾಂತ ಉಪನಿಷತ್ತಿನ ಹೊಸತನದ ಅರುಣೋದಯದೆಡೆಗೆ

ಕಾಯಕದಿಂದ ಕೈಲಾಸದೆಡೆಗೆ
ಕನವರಿಕೆಯಿಂದ ಕಮಾಯಿವರೆಗೆ |
ಸೃಜನದಿಂದ ಸ್ವೋಪಜ್ಞತೆಯೆಡೆಗೆ
ವಿವೇಕದಿಂದ ವೈಚಾರಿಕತೆಯೆಡೆಗೆ ||

ಕೈಹಿಡಿದ್ ಕರಕೊಂಡ ಹೋಗತೈತಿ
ಕನ್ನಡ ಕವನ ಎಲ್ಲಿಗಿ ಅಂತೀರಿ|

ಕವಿರಾಜಮಾರ್ಗದ ಕಾವೇರಿಯಿಂದ
ಗೋದಾವರಿಯ ವಿಸ್ತಾರದೆಡೆಗೆ
ಶರಣ ಚಳವಳಿಯ ವಚನ ಸಾಹಿತ್ಯದಿಂದ ಮೌಢ್ಯ,ಮೂಢನಂಬಿಕೆಯ ಬದಲಾವಣೆಯದೆಡೆಗೆ ||

ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡ ಕವನ | ಸಾಮಾಜಿಕ
ಕಳಕಳಿಯ ದಾಸಸಾಹಿತ್ಯದಿಂದ
ದ್ವೈತಮತ ಪ್ರತಿಪಾದನೆಯ
ಧರ್ಮತಿರುಳಿನ ಕೀರ್ತನಕಾರರೆಡೆಗೆ | ಕುಮಾರವ್ಯಾಸರಿಂದ ಕವಿ ಸರ್ವಜ್ಞರ ಸುಲಭ ತ್ರಿಪದಿಗಳೆಡೆಗೆ ||

ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡದ ಕವನ ಎಲ್ಲಿಗಿ ಅಂತೀರಿ|

ಪಂಪನಿಂದ ಪುಲಕೇಶಿವರೆಗೆ
ಪೂರ್ವ ಹಳಗನ್ನಡ ಕಾಲದಿಂದ ನವೋದಯದ ಆಧುನಿಕ ನವ್ಯ,ಬಂಡಾಯ,ದಲಿತ ಸಾಹಿತ್ಯದ
ಪ್ರಯತ್ನದೆಡೆಗೆ|
ಜ್ಞಾನದಿಂದ ಜ್ಞಾನಪೀಠ ಪುರಸ್ಕಾರದೆಡೆಗೆ ||


ಭರಮಾ ರಾಜಗೋಳಿ
ಪ್ರಾಥಮಿಕ ಶಾಲಾ ಶಿಕ್ಷಕರು

- Advertisement -
- Advertisement -

Latest News

ಪುಸ್ತಕ ಪರಿಚಯ

ಪುಸ್ತಕದ ಹೆಸರು :- "ಬಸವ ಜನ್ಮಸ್ಥಳ ಬಸವನಬಾಗೇವಾಡಿ ಕ್ಷೇತ್ರ ಚರಿತ್ರೆ"ಲೇಖಕರು :- ಮುರುಗೇಶ ಸಂಗಮ (೯೪೪೯೪೩೭೬೦೪) ಬೆಲೆ :- ೧೧೦ನಮ್ಮ ಜ್ಞಾನ ವಿಸ್ತರವಾಗಬೇಕಾದರೆ ಪುಸ್ತಕ ಓದುವ ಹವ್ಯಾಸ...
- Advertisement -

More Articles Like This

- Advertisement -
close
error: Content is protected !!
Join WhatsApp Group