ಕವನ: ಹೆಮ್ಮೆಯ ಕರುನಾಡು

Must Read

ಹೆಮ್ಮೆಯ ಕರುನಾಡು

ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//

ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//

ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ ಧೀರರಾಳಿದ ನಾಡು
ಸಂಪದ್ಭರಿತ ಮುತ್ತುರತ್ನ ಅಳೆದ ಸಿರಿನಾಡು
ಯುಗ ಯುಗದಲ್ಲೂ ಮೆರೆದ ಕನ್ನಡ ನಾಡು//

ಶ್ರೀಗಂಧ ತೇಗು ಹೊನ್ನೆ ಬೀಟೆ
ನೀಲಗಿರಿ ಬೆಟ್ಟಗಳ ಪರಿಮಳ ಹರಡುತ
ಎಲ್ಲರ ಕೈಬೀಸಿ ಕರೆಯುವ ಬೆಡಗಿನ ಸೊಬಗಿನ
ಸುಂದರ ಕರುನಾಡಿದು ನಮ್ಮದು ಸಿರಿನಾಡು//

ನುಡಿ ಚೆಂದ ,ನಡೆ ಚಂದ ಮುತ್ತುಮಣಿ
ಹವಳದಂತಾ ಕನ್ನಡ ಅಕ್ಷರಗಳು ಚಂದವಾ,
ಹಾಡಿದರೆ ಸಂಗೀತ ,ಹೇಳಿದರೆ ಆಧ್ಯಾತ್ಮ
ಹರಡುವುದು ಕನ್ನಡದ ಸವಿ ಕಂಪನು ಎಲ್ಲೆಲ್ಲೂ//

ವೀರರಾಣಿ ಚೆನ್ನಮ್ಮ ಶೂರ ರಾಯಣ್ಣ
ಒನಕೆ ಓಬವ್ವ ಕರಾವಳಿ ಕೇಸರಿ ಅಬ್ಬಕ್ಕ
ಶಾಂತಲಾ ಶಕುಂತಲಾ ಗಾನಕೋಗಿಲೆಗಳ
ಹೆತ್ತು ಹೊತ್ತ ಪುಣ್ಯಭೂಮಿಯಿದು ನಮ್ಮ ಕರುನಾಡು//


ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group