spot_img
spot_img

ಕವನ: ಹೆಮ್ಮೆಯ ಕರುನಾಡು

Must Read

- Advertisement -

ಹೆಮ್ಮೆಯ ಕರುನಾಡು

ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//

ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//

ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ ಧೀರರಾಳಿದ ನಾಡು
ಸಂಪದ್ಭರಿತ ಮುತ್ತುರತ್ನ ಅಳೆದ ಸಿರಿನಾಡು
ಯುಗ ಯುಗದಲ್ಲೂ ಮೆರೆದ ಕನ್ನಡ ನಾಡು//

- Advertisement -

ಶ್ರೀಗಂಧ ತೇಗು ಹೊನ್ನೆ ಬೀಟೆ
ನೀಲಗಿರಿ ಬೆಟ್ಟಗಳ ಪರಿಮಳ ಹರಡುತ
ಎಲ್ಲರ ಕೈಬೀಸಿ ಕರೆಯುವ ಬೆಡಗಿನ ಸೊಬಗಿನ
ಸುಂದರ ಕರುನಾಡಿದು ನಮ್ಮದು ಸಿರಿನಾಡು//

ನುಡಿ ಚೆಂದ ,ನಡೆ ಚಂದ ಮುತ್ತುಮಣಿ
ಹವಳದಂತಾ ಕನ್ನಡ ಅಕ್ಷರಗಳು ಚಂದವಾ,
ಹಾಡಿದರೆ ಸಂಗೀತ ,ಹೇಳಿದರೆ ಆಧ್ಯಾತ್ಮ
ಹರಡುವುದು ಕನ್ನಡದ ಸವಿ ಕಂಪನು ಎಲ್ಲೆಲ್ಲೂ//

ವೀರರಾಣಿ ಚೆನ್ನಮ್ಮ ಶೂರ ರಾಯಣ್ಣ
ಒನಕೆ ಓಬವ್ವ ಕರಾವಳಿ ಕೇಸರಿ ಅಬ್ಬಕ್ಕ
ಶಾಂತಲಾ ಶಕುಂತಲಾ ಗಾನಕೋಗಿಲೆಗಳ
ಹೆತ್ತು ಹೊತ್ತ ಪುಣ್ಯಭೂಮಿಯಿದು ನಮ್ಮ ಕರುನಾಡು//

- Advertisement -

ಡಾ ಅನ್ನಪೂರ್ಣ ಹಿರೇಮಠ ಶಿಕ್ಷಕಿ ಬೆಳಗಾವಿ

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group