spot_img
spot_img

ಕವನಗಳು: ಶಿಕ್ಷಕರ ದಿನಾಚರಣೆಯ ಶುಭಾಶಯಗಳು

Must Read

- Advertisement -

ಗುರುವೆ ಶಕ್ತಿ

ಗುರುವೆನ್ನ ಭಕ್ತಿ
ಗುರುವೆನ್ನ ಶಕ್ತಿ
ಗುರುವೇ ಪರಮೋದ್ಧಾರ

ಗುರುತರ ಜವಾಬ್ದಾರಿಯಲಿ
ಕರುಣೆಯ ಕಾರ್ಪಣ್ಯ ಸಿಂಧು
ಸಹಕಾರಕೆ ಮಾದರಿಯು

ಮಕ್ಕಳ ಪ್ರೀತಿಯಲಿ ಪೊರೆದು
ಗುರಿಯೆಡೆಗೆ ಪಯಣಕೆ
ದಾರಿ ತೋರಿಸುವ ದೀಪ

- Advertisement -

ತಪ್ಪಾದರೆ ಶಿಕ್ಷಿಸುವ
ನೋವಿನಲಿ ಸ್ಪಂದಿಸುವ
ಸಾಧನೆಗೆ ಬೆನ್ನು ತಟ್ಟುವ

ಬಾಳ ನೌಕೆಯ ದಿಕ್ಸೂಚಿ
ತಿಳಿವಳಿಕೆಯ ಹರಿಸಿ
ಅರಿವಿನ ಧಾರೆಯಲಿ

ಜೀವಿಸಲು ಕಲಿಸಿ
ಪರಿವರ್ತನೆಯ ತೋರಿ
ಮನದ ಕಲ್ಮಶವ ಕಳೆದು

- Advertisement -

ಕೌಶಲ್ಯ ವೃದ್ಧಿಗೆ
ಸಹನೆಯ ಗುಣದಿ
ವಿಚಾರವಂತಿಕೆಗೆ ಕಾರಣೀಭೂತ

ಸಮಾಜದ ಕೇಂದ್ರ ಬಿಂದು
ನಿರ್ವಹಣೆಗೆ ಹೊಂದಿಸಿ
ಲೆಕ್ಕ ಪಕ್ಕದಿ ಗಮನಿಸಿ

ಸೂಕ್ತ ವ್ಯವಸ್ಥೆ
ಶಕ್ತ ಸಮಾಜ ಕಲ್ಪಿಸಿ
ಸೂಕ್ತ ಪರಿಸರದ ಚಾಲಕ.

ರೇಷ್ಮಾ ಕಂದಕೂರ


ಎಲ್ಲ ಶಿಕ್ಷಕರಿಗು ಕಾವ್ಯನಮನ

ಹಾಯ್ಕು

ಆದರ್ಶ ತೋರಿ.
ಅನಾಚಾರ ಬಿಡಿಸಿ
ಬಾಳ ತೋರಿದ!

ರುಬಾಯಿ

ವಿದ್ಯೆಇಲ್ಲದ ಕಾಡ್ಬಂಡೆಕಲ್ಲು ನಾ.
ಕಲ್ಸಿದನು ಗುರು ಜಾಣಆದೆನಾ.
ಬಾಳಿನ ಗುರಿ ತೋರಿದನು ಗುರು
ಬಾಳುತ್ತಿರುವೆ ಅವ್ರಂತೆಇಂದುನಾ

ಟಂಕಾ

ಪ್ರಕೃತಿ ಗುರು.
ತಾಯಿ ಜೀವದ ಗುರು.
ಅಕ್ಷರ ಗುರು.
ತಿದ್ದಿ ತೀಡಿ ಕಲಿಸಿ
ಸನ್ಮಾರ್ಗ ಹಿಡಿಸಿದ
ಶಿಕ್ಷಕಗೆ ಜೈ !

ಚುಟುಕು

ಗದರಿಸಿ ಬೆತ್ತದ ರುಚಿ ನೀಡಿ.
ವಿದ್ಯೆ-ಬುದ್ದಿ ಕಲಿಸಲು ಒದ್ದಾಡಿ
ತಲೆ-ತಲೆ ಬಡ್ಕೊಂಡ್ರು ಕಲಿಯದ
ನನ್ನ ಅವರಂತೆ ಶಿಕ್ಷಕನಮಾಡಿದ!

ಜನಪದ

ಜನ ಜಂಗುಳಿ ಜಗವೆಲ್ಲ ತುಂಬಿ ಆದ್ರವನೊಬ್ಬ ವಿಶೇಷ |ಜನಕೆ
ಜಗದ ಸನ್ಮಾರ್ಗದರ್ಶಿ ಶಿಕ್ಷಕನುll

ಬಾಲ್ಯದಿ ಹುಡುಗಾಟ ತುಂಟಾಟ
ಮಂಗನ ಬುದ್ದಿl ಚಂಚಲ ಬಿಡಿಸಿ
ಚೆಂದದ ಬಾಳು ಕಲಿಸಿದ ಶಿಕ್ಷಕll

ದಿಕ್ಕು ಕಾಣದ ಜೀವನದ ದಾರಿ
ದಿಕ್ಕು ಹಿಡಿಸಿದ ಗುರುlಧರ್ಮದ
ದಾರಿಲಿ ನಡೆಸಿದ ದೈವಿಕನವನುll

ಶರಣೆಂಬೆ ಗುರುವಿಗೆ ಶರಣೆಂಬೆ
ಶಿಕ್ಷಕರಿಗೆ lಶರಣು ಶರಣೆಂಬೆನು
ದೇವರ ಅವತಾರಿ ಗುರುವಿಂಗೆll

ಬದುಕಲ್ಲಿ ಬಂದೊದಗೊ ಕಷ್ಟವ
ಧೈರ್ಯದಿ ಎದುರಿಸೊlಪಾಠವ
ಕಲಿಸಿ ಬದುಕು ಹಿಡಿಸಿದ ಗುರುll

ಇದೋ..ಇಂದವರೆಲ್ಲರಿಗೂ ನನ್ನ
ಕೃತಜ್ಞತೆಯನಮನl
ನಿನ್ನಪ್ರೇರಣೆ ಹೀಗೆ ನಡೆದಿರಲಿ ನಿರಂತರವು ll

ನಟರಾಜ ದೊಡ್ಡಮನಿ
ಶಿಕ್ಷಕರು,ಕ್ಯಾಸಿನಕೆರೆ.
ಹೊನ್ನಾಳಿ(ತಾ)ದಾವಣಗೆರೆ(ಜಿ)

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group