ವಿಧಾನಸಭಾ ಚುನಾವಣೆಯಲ್ಲಿ 150 ಸೀಟು – ಅರುಣಸಿಂಗ್ ವಿಶ್ವಾಸ

Must Read

ಬೀದರ: ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 150 ಸೀಟ್ ಗೆದ್ದು ಮತ್ತೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ ಸಿಂಗ್ ಹೇಳಿದರು.

ಗಡಿ ಜಿಲ್ಲೆ ಬೀದರ್ ಪ್ರವಾಸ ಕೈಗೊಂಡಿದ್ದ ಅರುಣ್ ಸಿಂಗ್ ಇಂದು ಬೀದರ್ ನಗರದಲ್ಲಿ ಖಾಸಗಿ ಹೋಟೆಲ್ ನಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷ ಲೀಡರ್ ಲೆಸ್ ಪಾರ್ಟಿ ರಾಹುಲ್ ಗಾಂಧಿ ಲೀಡರ್ಶಿಪ್ ಫೇಲ್ ಆಗಿದೆ. ಕಾಂಗ್ರೆಸ್ ನ ಜನರೆ ಕಾಂಗ್ರೆಸ್ ತೋಡೋ ಮಾಡುತ್ತಾ ಇದ್ದಾರೆ ನಾವು ಏನೂ ಮಾಡುವ ಅವಶ್ಯಕತೆ ಇಲ್ಲ.ಮಾಜಿ ಮುಖ್ಯಮಂತ್ರಿ ಸಿದ್ರಾಮಯ್ಯಾ ಮುಖ್ಯಮಂತ್ರಿ ಇದ್ದಾಗ ಅವರ ಅವಧಿಯಲ್ಲಿ 23 ಹಿಂದುಗಳ ಹತ್ಯೆ ಆಗಿತ್ತು.

ಗೋ ಹತ್ಯೆ ಜಾನುವಾರು ಮಾಂಸದ ಬಗ್ಗೆ ಅವರ ಹೇಳಿಕೆ ಕರ್ನಾಟಕದ ಜನರು ಮರೆತಿಲ್ಲ. ಭಾರತ,ಕರ್ನಾಟಕ ಸಂಸ್ಕೃತಿ ಬಗ್ಗೆ ಸಿದ್ರಾಮಯ್ಯಾ ಅವರಿಗೆ ಮಾಹಿತಿ ಇಲ್ಲ. ಒಂದು ವೇಳೆ ಅವರಿಗೆ ಈ ಬಗ್ಗೆ ಮಾಹಿತಿ ಇದ್ದರೆ ಅವರು ಹೀಗೆ ಹೇಳುತ್ತಾ ಇರಲಿಲ್ಲ. ಅಧಿಕಾರದ ದಾಹದಿಂದ ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಅರುಣಸಿಂಗ್ ಹೇಳಿದರು.

ಸ್ಥಳೀಯ ಬಿಜೆಪಿ ಮುಖಂಡರ ಮಧ್ಯೆ ನಡೆಯುತ್ತಿರುವ ಅಸಮಾಧಾನದ ಬಗ್ಗೆ ಅರುಣ ಸಿಂಗ್ ಯಾವುದೆ ಹೇಳಿಕೆ ನೀಡದೆ ಅಂತರ ಕಾಯ್ದಕೊಂಡರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group