Monthly Archives: July, 2020

ಡಾ.ಭೇರ್ಯ ರಾಮಕುಮಾರ್ ಚುಟುಕ ಮತ್ತು ಕವನಗಳು

....ಇತಿಹಾಸ..... ಸ್ಥಳ ಇತಿಹಾಸ ಬರೆಯಲು ಆ ಹಳ್ಳಿಗೆ ಬಂದ ಯುವಕ ಸುಂದರ ಯುವತಿಯೊಡನೆ ಪರಾರಿಯಾಗಿ, ಜನರ ನಾಲಿಗೆ ಮೇಲೆ ಇತಿಹಾಸ ಬರೆದೇ ಬಿಟ್ಟ !!!! ....ವೈಚಿತ್ರ್ಯ..... ಆಕೆ ಬೊಜ್ಜು ಕರಗಿಸಲು ಚಪಾತಿ ತಿಂದಳು , ಈತ ಹೊಟ್ಟೆ ಬೆಳೆಸಲು ಪಕ್ವಾನ್ನ ತಿಂದ ಗಾಳಿ ತುಂಬಿದ ಬಲೂನಾಗಿ ಅವಳಿನ್ನೂ ಹಿಗ್ಗಿ ದಳು, ಅಜೀರ್ಣವಾಗಿ ಇವನು ಸಿಳ್ಳೆಕ್ಯಾತನಾದ !!!! ..........ಜ್ವರ..ಜ್ವರ...... ಯಾವ ಕ್ಯಾಪ್ಸೂಲ್ ಗೂ ವಾಸಿಯಾಗದ ಅವಳ ಪ್ರೇಮಜ್ವರ ಬಾಯ್ ಫ್ರೆಂಡ್ ನ ಕಣ್ಣೋಟಕ್ಕೆ ಬಿಟ್ಟು, ಆತ ಕೈಕೊಟ್ಟಾಗ...

ರಾಧಾ ಶಾಮರಾವ ಕವನ

ವೀರ ಮರಣ ಕಾಗಿ೯ಲ್ ಯುದ್ಧ ಸನ್ನಧ್ಧ ಸೈನಿಕ ಗಮನಿಸಲಿಲ್ಲ ಹೊಸ ಸಂಸಾರ ಪುಟ್ಟ ಹಸುಳೆ ಎಲ್ಲಕ್ಕಿಂತ ಮಿಗಿಲು ಭಾರತಾಂಬೆಯ ಸೇವೆ ಸದೆಬಡಿದ ಶತ್ರುಗಳ ಹಿಂದಿನಿಂದ ಬಡಿಯಿತು ಗುಂಡು ತಿರುಗಿದ ಗುಂಡಿನ ಮಳೆಗರೆದ ಜಯ ಭಾರತ ಮಾತೆಎನುತ ವೀರಮರಣವನಪ್ಪಿದ ನಮನ ಒಂದೇ ಸಾಕೇ? ಪ್ರಾಥಿ೯ಸೋಣ ; ಅವನ ಚಿತೆಯ ಭಸ್ಮದ ಕಣಕಣದಿ ಹುಟ್ಟಿ ಬರಬೇಕು ತೋರಿ ವಿರಾಟ್ ರೂಪ ಮತ್ತೆ ಓಟ ಕಾಗಿ೯ಲ್ ಕಡೆಗೆ ಶತ್ರುಗಳ ಮಾರಣ ಹೋಮಕೆ. ಜಯಹಿಂದ ಜೈಭಾರತಾಂಬೆ. ರಾಧಾಶಾಮರಾವ

ವಿಕ್ರಂ ಶ್ರೀನಿವಾಸ್ ರ ಕವನಗಳು

"ಅಂಜಿಕೆ ಏಕೆ" ಮಲ್ಲಿಗೆ ಮುಡಿಯಲು ಅಂಜುವೆ ಏಕೆ ಕೊರೋನ ನನಗಿಲ್ಲ ಬಿಡುನೀ ಶಂಕೆ ಸರ್ವಸ್ವ ನೀನೆ ಎಂದೆ ಅಂದು ಸನಿಹವೆ ಬೇಡ ಎನುತಿಹೆ ಇಂದು ಬಿಟ್ಟಿರಲಾರೆ ಎನುತಿದ್ದೆ ಅಂದು ಬಿಟ್ಟರೆ ಸಾಕು ಎನುತಿಹೆ ಇಂದು ಕೇಳದೆ ಕೊಡುತ್ತಿದ್ದೆ ಎಲ್ಲವ ಅಂದು ಕೇಳಲೆಬೇಡ ಎನುತಿಹೆ ಇಂದು ಪಾಸಿಟೀವ್ ಬಂದಿಲ್ಲ ನನಗೆ ಅಂತರವೇಕೆ ನಮಗೆ ಪ್ರೀತಿಯ ಕೊಲ್ಲೊದು ಸರೀನಾ ದಯವಿಟ್ಟು ತೊಲಗು ಕೊರೋನಾ. ಒಳ್ಳೆಯ ಕೊರೋನಾ! ಕಣ್ಣಿಗೆ ಕಾಣದ ಕ್ರಿಮಿ ಕೊರೋನ ವಿಶ್ವದೆಲ್ಲೆಡೆ ಮಾಡಿತು ಯಮನ ಮಿಮಿಕ್ರೀನ, ಮಾರಣಹೋಮವನ್ನ...

ರವಿವಾರದ ಕವನಗಳು

ಅತಿಥಿಗಳು ನಾವು ಜಗತ್ತಿಗೆ ಬಂದ ಅತಿಥಿಗಳು ಮಾಲಿಕರೆಂಬ ಗತ್ತು ಬಂದು ಹೋಗುವ ಮಧ್ಯ ಭಿನ್ನತೆಯ ಠಾವು ಆಮಿಷಗಳ ಬಲಿಯಾಗಿ ಅಧಿಕಾರದ ಮದವೇರಿ ಸಂಪತ್ತು ಗಳಿಕೆಯ ಹುನ್ನಾರದಿ ಹೊಸಗಿ ಹಾಕುತಿರುವೆವು ನನ್ನವರೆಂಬ ಹೂ ಬಳ್ಳಿ ನಾನಷ್ಟೆ ಎಂಬ ಭ್ರಮೆ ಕಳಚುವ ಪರಿ ಬಂದೆ ಬರುವುದು ನಶ್ವರದ ಬದುಕು ಅರ್ಥ ಮಾಡಿಕೊಳ್ಳದ ಮೂಢತೆ ಆವರಿಸಿ ಕೃತಕಗಳ ಮರ್ಮ ಸ್ವೇಚ್ಛಾಚಾರದ ನಡವಳಿಕೆ ಕಡಿವಾಣ ವಿಲ್ಲದ ಬಂಡಿ ಎತ್ತೆಂದರೆತ್ತ ಸಾಗಿ ಮಧುರ ಮನಗಳಿಗೆ ಹಾಕಿದೆ ಬೀಗ ತಕ್ಕಡಿಯ ಹಾಗೆ ಹೋರಳುತ ಸಕ್ಕರೆಯ ಬಯಸುತ ಅಕ್ಕರೆಯ ಮಾತನಾಡುವ ನಟನ ಬದುಕು ಪರದೆ ಮುಗಿಯುವ ಮುನ್ನ ಎಚ್ಚರಿಕೆ ಇರಲಿ ಕ್ಷಣ ಹೊತ್ತು ಅಣಿ ಮುತ್ತು ಇರಲಿ...

ಚುಟುಕಗಳು…

ಅಂದು-ಇಂದು ಹಿಂದೆ ಗುರುವಿದ್ದ,ಮುಂದೆ ಗುರಿ ಇತ್ತು ,ಎಲ್ಲೆಲ್ಲೂ ಆದರ್ಶ ವ್ಯಕ್ತಿಗಳ ಜನನ, ಇಂದು ಎಲ್ಲೆಲ್ಲೂ ಬಾರ್ ಗಳು,ಪಬ್ ಗಳ ಹಾವಳಿ, ಎಲ್ಲೆಲ್ಲೂ ಕುಡುಕರದೇ ಜತನ.. ಕರೋನಾ ಐಶ್ವರ್ಯದ ಮದದಿ ಮೆರೆಯುತ್ತಿದ್ದ ಮನುಜನಿಗೆ, ಕರೋನಾ ಹಾಕಿತು ಮಾಯಲಾರದ ಬರೆ, ಬಡವರು,ಅಶಕ್ತರು,ವೃಧ್ಧರು,ಮಕ್ಕಳಿಗೆ ದಯೆತೋರು, ಓ ಕರೋನಾ... ರಾಷ್ಟ್ರದ ಇತಿಹಾಸ ನಿರ್ಮಿಸಿದವರ, ರಾಷ್ಟ್ರದ ಭವಿಷ್ಯ ನಿರ್ಮಿಸುವವರ ಉಳಿಸು ಕರೋನಾ... ಯಾರದೋ ತಪ್ಪಿಗೆ ಯಾರಿಗೋ ಬರೆ ಯಾಕೆ ??? ದೇವನಿಗೆ ಲಕ್ಷಾಂತರ ಭಕ್ತರ ಲಕ್ಷ-ಲಕ್ಷ ಕೋರಿಕೆಗಳ ಈಡೇರಿಸಲು ನಿನಗೆಷ್ಟು ಶ್ರಮ ? ಅದಕಾಗಿ ನಿನ್ನ ಕರ್ತವ್ಯಕೆ ರಜಾ...

ಗುರ್ಚಿ ಹಾಡು

ಇದೊಂದು ಜಾನಪದ ಹಾಡು.ಮಳೆ ಬಾರದೇ ಇದ್ದಾಗ ತಲೆ ಮೇಲೆ ಗುರ್ಚಿಯನ್ನಿಟ್ಟುಕೊಂಡು ಮನೆ ಮನೆ ಅಡ್ಡಾಡಿ ನೀರು ಹುಯ್ದುಕೊಂಡು ಮಳೆಗಾಗಿ ಬೇಡುವ ಹಾಡು. ಸಣ್ಷವರಿದ್ದಾಗ ಈ ಹಾಡು ಕೇಳಿ ಮಜಾ ಪಡೆಯದವರೇ ಇಲ್ಲ. ಈಗ ಅದನ್ನು ಭ್ರಷ್ಟಾಚಾರಿ ರಾಜಕಾರಣಿಗೆ ಹೋಲಿಸಿ ಬರೆಯಲಾಗಿದೆ. ಭ್ರಷ್ಟಾಚಾರಿ ಬುಚಿ೯ ಬುಚಿ೯ ಎಲ್ಲಾಡಿ ಬಂದಿ ಖುಚಿ೯ಗಾಗಿ ಸುತ್ತಾಡಿ ಬಂದಿ ಹಳ್ಳಾ ಕೊಳ್ಳಾ ಮಾರಿ ತಿಂದಿ ಮೆಂಬರ ಆಗಿ ಮೆರದಾಡಿ ಬಂದಿ. ಹುಯ್ಯೋ ಹುಯ್ಯೋ ಮಳೆರಾಯ ಅಂದಿ. ರೊಕ್ಕದ ಮಳೆಯು ಬರಲಿ...

ಕವನ: ನಾನು-ನಾನೆಂಬ ಅಹಮಿಕೆ ಬೇಕೇ?

ತಿನ್ನುವ ಹಿಡಿ ಅನ್ನಕೆ, ಸೂರ್ಯ ನೀಡುವ ಬೆಳಕಿಗೆ, ಹಸಿರು ವೃಕ್ಷಗಳು ಪಸರಿಸುವ ತಂಗಾಳಿಗೆ , ಪ್ರಕೃತಿ ನೀಡುವ ಹನಿ-ಹನಿ ಜಲಕೆ , ಜೀವಮಾನ ಸವೆಸುವ ಓ ಮಾನವ , 'ನಾನು,ನಾನು! 'ಎಂಬ ಅಹಮಿಕೆ ಬೇಕೇ ??? ಇನಿದನಿಯಲಿ ಹಾಡುವ ಕೋಗಿಲೆಗೆ, ಸುಂದರ ದನಿ ನೀಡಿದ್ದು ನೀನೇನಾ ? ಮುಗಿಲೆತ್ತರಕೆ ಹಾರುವ ಹಕ್ಕಿಗೆ, ಹಾರುವುದ ಕಲಿಸಿದ್ದು ನೀನೇನಾ ? ನೀರಲಿ ಸ್ವಚ್ಛಂದವಾಗಿ ಈಜುವ ಮೀನಿಗೆ ಈಜು ಕಲಿಸಿದ್ದು ನೀನೇನಾ ??? ನಾನು, ನಾನೆಂದು...

ಗಜಲ್ ಗಳು

ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ ಬದುಕು ಅತಂತ್ರಾಗಿ ಎದ್ದು ಬಿದ್ದು ಇನ ಪಾಜಿಗಟ್ಟಿ ಮುಟ್ಟುದೈತಿ ಕತ್ತು ಹಿಡದು ಬೀದಿಗಿ ನೂಕಿದಮ್ಯಾಲ ಬದುಕಾಕೆಲ್ಲೈತಿ ಜಾಗ ಬದುಕಿನ ಆಟಕ್ಕ ತೆರಿ ಬೀಳುತನಕ ಬಣ್ಣ ಹಚ್ಚಿ ಜೀವ ತುಂಬುತೀನಿ...

ರವಿವಾರದ ಕವನಗಳು

ನಮ್ಮೂರು ಬದಲಾಗಿದೆ ಟಿವಿಗಳು ಬಂದ ಮೇಲೆ ಹಂತಿಪದ ಬೀಸುವಪದ ಡಪ್ಪಿನಾಟ ಬಯಲಾಟ ಕೋಲಾಟ ಡೊಳ್ಳಿನಪದ ಪುರಾಣ ಕೀರ್ತನ ಭಜನೆ ಕೇಳದಂತಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಟ್ರಾಕ್ಟರ್ ಬಂದಮೇಲೆ ಜೋಡೆತ್ತುಗಳಿಗೆ ಗೆಜ್ಜೆ ಗಗ್ಗರಿ ಕೋಡಣಸು ಜೂಲ ಹಾಕಿ ಸವಾರಿ ಬಂಡಿಯಲಿ ಜಾತ್ರೆಗೆ ಹೋಗುವ ಮಜಾ ಮಾಯವಾಗಿದೆ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕಾನ್ವೆಂಟ ಶಾಲೆಗಳು ತೆರೆದ ಮೇಲೆ ಹಿರೀಕರು ಹೇಳುತಿದ್ದ ಗಾದೆ ಒಡಪು ಒಡವು ಬಾಯಿಲೆಕ್ಕ ಸಮಸ್ಯಾಗಣಿತ ಜಾನಪದಕಥೆಗಳನ್ನು ಹೇಳುವರಿಲ್ಲ ಕೇಳುವರಿಲ್ಲ ಆಗಿನಂತಿಲ್ಲ ಈಗ ನಮ್ಮೂರು ಬದಲಾಗಿದೆ ಕ್ರಿಕೆಟ್ ಬಂದ ಮೇಲೆ ಹುಲಿಮನೆ ಚವ್ವ ಗೋಟುಗುಣಿ ಬಗರಿ ಕುಂಟೆಬಿಲ್ಲೆ ಚಿಣಿದಾಂಡು ಮರಕೋತಿ ಗೋಲಿಗುಂಡು ಆಟಗಳು ಬಂಧಾಗಿವೆ ಆಗಿನಂತಿಲ್ಲ ಈಗ ನಮ್ಮೂರು...

ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ

ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ. ಕಂಪನಿಯ 43 ನೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದ್ದು ಜಿಯೋದಿಂದ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಗೊಳಿಸಲಾಗಿದೆ. ಮುಂದಿನ ವರ್ಷ ಇದನ್ನು ಆರಂಭಿಸುವುದರ...
- Advertisement -spot_img

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -spot_img
close
error: Content is protected !!
Join WhatsApp Group