Monthly Archives: December, 2021
ಸುದ್ದಿಗಳು
ಮಿಲಿಂದ ಮಣೂರ ನೇಮಕ
ಸಿಂದಗಿ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಒಪ್ಪಿಗೆಯಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಎಸ್.ಸಿ. ಸಮಿತಿಯ ಅಧ್ಯಕ್ಷರ ಅನುಮೋದನೆ ಅನ್ವಯ ಮಿಲಿಂದ ಮನೋಹರ ಮಣೂರ ಇವರನ್ನು ಸಿಂದಗಿ ಕಾಂಗ್ರೆಸ್ ಪರಿಶಿಷ್ಟ ಜಾತಿ ಸಂಘಟನಾ ಕಾರ್ಯದರ್ಶಿನ್ನಾಗಿ ನೇಮಕ ಮಾಡಲಾಗಿದೆ ಎಂದು ಸಮಿತಿಯ ಬ್ಲಾಕ್ ಅಧ್ಯಕ್ಷ ಪರಶುರಾಮ ಕಾಂಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿಗಳು
ನಿಪ್ಪಾಣಿ ಜೊಲ್ಲೆ ಮಹಾವಿದ್ಯಾಲಯದಲ್ಲಿ ವಿಶ್ವ ಮಾನವ ದಿನ ಡಾ ಕುವೆಂಪು ಆಚರಣೆ
ನಿಪ್ಪಾಣಿ - ಗೌರವಾನ್ವಿತ ಜೊಲ್ಲೆ ದಂಪತಿಗಳ ಸಾರಥ್ಯದ ನಿಪ್ಪಾಣಿಯ ಜೊಲ್ಲೆ ಮಹಾವಿದ್ಯಾಲಯದಲ್ಲಿ ಕನ್ನಡನಾಡಿನ ಶ್ರೇಷ್ಠ ಕವಿ ಯುಗದ ಕವಿ ರಾಷ್ಟ್ರಕವಿ ಡಾ. ಕುವೆಂಪು ಜಯಂತಿ ವಿಶ್ವ ಮಾನವ ದಿನ ಆಚರಿಸಲಾಯಿತು ಪ್ರಾಸ್ತಾವಿಕವಾಗಿ ಪ್ರಾಧ್ಯಾಪಕಿ ಸೌ. ಉಜ್ವಲಾ ಸಪ್ತಸಾಗರ ಮಾತನಾಡಿದರು.ಕನ್ನಡದ ಕವಿ ಡಾ. ಕುವೆಂಪು ಅವರ ಮಾನವೀಯ ಸಂದೇಶಗಳ ಕುರಿತು ಉಪನ್ಯಾಸ ಜರುಗಿತು ಈ ಸಂದಭ೯ದಲ್ಲಿ...
ಸುದ್ದಿಗಳು
ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯಿಂದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವ
ಮೈಸೂರು ಜಿಲ್ಲೆ ಕೆ.ಆರ್.ನಗರ ಟೌನ್ ನ ಭಗತ್ ಸಿಂಗ್ ಯೂತ್ ಫೌಂಡೇಶನ್ ವತಿಯಿಂದ ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು.ಸಾಹಿತಿಗಳಾದ ಡಾ.ಹೆಚ್.ಆರ್.ಚಂದ್ರಕಲಾ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ, ವಿಶ್ವಸಾಹಿತ್ಯಕ್ಕೆ ರಾಷ್ಟ್ರ ಕವಿ ಕುವೆಂಪು ಅವರ ಕೊಡುಗೆ ಅಪಾರ.ಅವರು ಎಲ್ಲ ಕಾಲಕ್ಕೂ ಸಲ್ಲುವ ಚೇತನ. ಸಮಸಮಾಜದ ಕಲ್ಪನೆ,ವಿಶ್ವಮಾನವ ಚಿಂತನೆ ಸಮಾಜಕ್ಕೆ ಅವರ ಮಹತ್ವದ ಕೊಡುಗೆಗಳು. ಅವರ...
ಸುದ್ದಿಗಳು
ಮದುವೆಯಾಗಲು ನಿರಾಕರಿಸಿದ ಪ್ರೇಮಿಯ ಮನೆ ಮತ್ತು ಆಟೋಗೆ ಬೆಂಕಿ ಹಚ್ಚಿದ ಪ್ರೇಯಸಿ
ಬೀದರ - ಕೊಟ್ಟ ಮಾತಿನಂತೆ ಮದುವೆಯಾಗಲು ನಿರಾಕರಿಸಿದ ಪ್ರೇಮಿಯ ಮನೆ ಮೇಲೆ ದಾಳಿ ಮಾಡಿದ ಪ್ರೇಯಸಿ ಆತನ ಮನೆ ಹಾಗೂ ಆಟೋಗೆ ಬೆಂಕಿ ಹಚ್ಚಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಾಗ್ ಹಿಪ್ಪರಗಾ ಗ್ರಾಮದಲ್ಲಿ ನಡೆದಿದೆ.ಹಾಗೆ ನೋಡಿದರೆ ಇವರೇನೂ ಹದಿಹರೆಯದ ಪ್ರೇಮಿಗಳಲ್ಲ. ಭೀಮರಾವ್ ಹಾಗೂ ಸುಮಾ ಎಂಬ ಈ ಇಬ್ಬರಿಗೂ ಮದುವೆಯಾಗಿ ಮಕ್ಕಳು...
ಸುದ್ದಿಗಳು
ರಾಷ್ಟ್ರಕವಿ ಕುವೆಂಪುರವರ ಜನ್ಮದಿನ ಆಚರಣೆ
ಸವದತ್ತಿ: ಸವದತ್ತಿ ಯ ಶಾಂತಿನಗರ ಸರ್ಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ವಿಶ್ವಮಾನವ ಸಂದೇಶ ಸಾರಿದ ರಾಷ್ಟ್ರಕವಿ ಕುವೆಂಪುರವರ ಜನ್ಮದಿನ ಆಚರಿಸಲಾಯಿತು. ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದ ಶಿಕ್ಷಕರಾದ ತಮ್ಮನಗೌಡ ಏಗನಗೌಡ್ರ " ಕುವೆಂಪುರವರು ವಿಶ್ವದ ಜನತೆಗೆ ತಮ್ಮ ಸಾಹಿತ್ಯದ ಮೂಲಕ ವಿಶ್ವಮಾನವ ಸಂದೇಶ ಸಾರಿದ್ದಾರೆ. ಮನುಜಮತ ವಿಶ್ವಪಥ ಎಂಬ ಸಾಲುಗಳ ಮೂಲಕ...
ಸುದ್ದಿಗಳು
ಪ್ರಕೃತಿ ಸೌಂದರ್ಯ ಆರಾಧಕರು ಕುವೆಂಪು – ಡಾ. ಕೆ. ಎನ್. ದೊಡಮನಿ
ಬೆಳಗಾವಿ- ನಿಸರ್ಗ, ಶಾಂತತೆ, ತನ್ಮಯತೆ, ರಸಾನುಭೂತಿಯನ್ನು ಕಾಡಿನಲ್ಲಿ ಮಾತ್ರ ಅನುಭವಿಸಲು ಸಾಧ್ಯ. ಪ್ರಕೃತಿಯಿಂದಲೇ ಮನುಷ್ಯ; ಮನುಷ್ಯನಿಂದ ಪ್ರಕೃತಿಯಲ್ಲ. ಆದ್ದರಿಂದ ಕುವೆಂಪು ಅವರು ಪ್ರಕೃತಿಯನ್ನು ಈಶ್ವರ ಶಕ್ತಿ ರೂಪವಾಗಿ ಆರಾಧಿಸಿದರು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಶಾಸ್ತ್ರೀಯ ಕನ್ನಡ ಭಾಷಾ ಅಧ್ಯಯನ ಸಂಸ್ಥೆಯಲ್ಲಿ ನಡೆದ ರಸ ಋಷಿ ಕುವೆಂಪು ಅವರ ಜನ್ಮದಿನಾಚರಣೆ ಮುಖ್ಯ ಅತಿಥಿಗಳಾಗಿ...
ಲೇಖನ
Kuvempu- ಕುವೆಂಪುರವರ ಬದುಕು ಬರವಣಿಗೆ
1904ರ ಡಿಸೆಂಬರ್ 29 ರಂದು ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಯಲ್ಲಿ ಕುವೆಂಪು ಜನಿಸಿದರು.ತಂದೆ ವೆಂಕಟಪ್ಪ ಗೌಡರು, ತಾಯಿ ಸೀತಮ್ಮ. ತಮ್ಮ ಪ್ರಾಥಮಿಕ ಶಿಕ್ಷಣವನ್ನು ತೀರ್ಥಹಳ್ಳಿ ಯಲ್ಲಿ ಆರಂಭಿಸಿದ ಕುವೆಂಪುರವರು ನಂತರ ಪ್ರೌಢಶಾಲೆಯಿಂದ ಎಂ.ಎ. ಪದವಿಯವರೆಗೂ ಮೈಸೂರಿನಲ್ಲಿ ಓದಿದರು. ನಂತರ 1929ರಲ್ಲಿ ಪ್ರಾಧ್ಯಾಪಕರಾಗಿ ಮೈಸೂರಿನ ‘ಮಹಾರಾಜಾ’ ಕಾಲೇಜನ್ನು ಸೇರಿದ ಇವರು, 1955ರಲ್ಲಿ ಅದೇ...
ಸುದ್ದಿಗಳು
ಬೀದರ: ನೈಟ್ ಕರ್ಫ್ಯೂ ಜಾರಿ
ಬೀದರ - ರಾಜ್ಯ ಸರ್ಕಾರ ಓಮಿಕ್ರಾನ್ ವೈರಸ್ ತಡೆಗಟ್ಟಲು ನೈಟ್ ಕರ್ಪ್ಯೂ ಆದೇಶ ಮಾಡಿರುವ ಹಿನ್ನಲೆಯಲ್ಲಿ ಬೀದರ್ ಪೊಲೀಸರು ರಾತ್ರಿ ಪ್ರತಿಯೊಂದು ಕಾರು ಬೈಕ್ ಪರಿಶೀಲನೆ ಮಾಡಿದರು.ಐಡಿ ಕಾರ್ಡ್ ಹೊಂದಿರುವ ಜನರಿಗೆ ಮಾತ್ರ ರಸ್ತೆ ಮೇಲೆ ಓಡಾಡುವ ಅವಕಾಶ ನೀಡಿದ್ದು, ಬೀದರ್ ಡಿವೈಎಸ್ ಪಿ ಸತೀಶ್ ಅವರ ನೇತೃತ್ವದಲ್ಲಿ ನಗರದಲ್ಲಿ ಪುಲ್ ಟೈಟ್ ನಾಕಾಬಂದಿ...
ಜೋತಿಷ್ಯ
ದಿನ ಭವಿಷ್ಯ ಬುಧವಾರ (29/12/2021)
ಓಂ ಶ್ರೀ ಗುರು ವಿಶ್ವಕರ್ಮ ಪರಬ್ರಹ್ಮಣೇ ನಮಃ
ಮೇಷ ರಾಶಿ:
ವಿದ್ಯಾರ್ಥಿಗಳು ಮತ್ತು ಯುವಕರು ತಮ್ಮ ಯಾವುದೇ ಕೆಲಸದಲ್ಲಿ ಬರುವ ಅಡೆತಡೆಗಳಿಗೆ ಪರಿಹಾರವನ್ನು ಪಡೆಯುತ್ತಾರೆ. ಕುಟುಂಬದೊಂದಿಗೆ ಕಳೆಯುವ ಸಮಯವನ್ನು ನೀವು ಆನಂದಿಸುವಿರಿ. ಹಲವು ದಿನಗಳಿಂದ ಕುಟುಂಬ ಸದಸ್ಯರೊಂದಿಗೆ ಚರ್ಚಿಸಲು ಸಾಧ್ಯವಾಗದ ವಿಷಯಗಳನ್ನು ಚರ್ಚಿಸಲು ಸಾಧ್ಯವಾಗಬಹುದು. ಕುಟುಂಬಕ್ಕಾಗಿ ದೊಡ್ಡ ಖರೀದಿಯನ್ನು ಮಾಡಲು ನೀವು ಪರಿಗಣಿಸಬಹುದು.
ವೃಷಭ ರಾಶಿ:
ನಿಮ್ಮ ಯೋಜನೆಯು ಸರಿಯಾದ...
ಸುದ್ದಿಗಳು
ಬುಧವಾರ ಅಯ್ಯಪ್ಪಸ್ವಾಮಿ ಮಹಾಪೂಜೆ ಮತ್ತು ಅನ್ನ ಸಂತರ್ಪಣೆ
ಮುನವಳ್ಳಿ: ಸಮೀಪದ ಸಿಂದೋಗಿ ಗ್ರಾಮದಲ್ಲಿ ಬುಧವಾರ ೨೯ ರಂದು ಮಧ್ಯಾಹ್ನ ೨ ಗಂಟೆಗೆ ಅಯ್ಯಪ್ಪಸ್ವಾಮಿ ಜ್ಯೋತಿ ಮೆರವಣಿಗೆಯು ಭಕ್ತರ ಸಮೂಹದಲ್ಲಿ ಮಲಪ್ರಭಾ ನದಿಯಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ವಿಜೃಂಭಣೆಯಿಂದ ಸಾಗುವ ಮೂಲಕ ಸಂಜೆ ೬ ಗಂಟೆಗೆ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅಮ್ಮಿನಬಾವಿಯ ನಾರಾಯಣ ಗುರುಸ್ವಾಮಿಗಳ ನೇತೃತ್ವದಲ್ಲಿ ಮುನವಳ್ಳಿ, ಚುಂಚನೂರ, ತೋರಣಗಟ್ಟಿ, ಉಜ್ಜಿನಕೊಪ್ಪ, ಕಟಕೋಳ,...
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



