Monthly Archives: February, 2024

ಫೆ.8 ರಿಂದ 10 ರವರೆಗೆ ಪುರಂದರ ದಾಸರ ಆರಾಧನಾ ಮಹೋತ್ಸವ

ಶ್ರೀನಿವಾಸ ಉತ್ಸವ ಬಳಗದಿಂದ ಬೆಂಗಳೂರು ಬಸವನಗುಡಿ ಉತ್ತರಾದಿ ಮಠದ ಆವರಣದಲ್ಲಿ ಫೆಬ್ರವರಿ 08 ರಿಂದ 10ರವರೆಗೆ  ಪುರಂದರ ದಾಸರ ಆರಾಧನಾ ಮಹೋತ್ಸವ ಗಾನ- ಜ್ಞಾನ ಯಜ್ಞ;ಖ್ಯಾತ ವಿದ್ವಾಂಸ ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯರವರಿಗೆ ‘ಮಧ್ವ ಪುರಂದರ’ ಪ್ರಶಸ್ತಿ ಮತ್ತು ಖ್ಯಾತ ಹಿಂದೂಸ್ತಾನಿ ಗಾಯಕ ಡಾ. ಪಂ. ನಾಗರಾಜರಾವ್ ಹವಾಲ್ದಾರ್ ಅವರಿಗೆ ‘ಪುರಂದರ ಸಂಗೀತ ರತ್ನ’ ಪ್ರಶಸ್ತಿ...

ಹರಿದಾಸ ಅನುಗ್ರಹಿತ ಪ್ರಶಸ್ತಿ ಪುರಸ್ಕೃತರ ವಿವರ

ಎಸ್.ಕೆ.ಶೇಷಚಂದ್ರಿಕಾ; ನಾಡಿನ ಹಿರಿಯ ಪತ್ರಕರ್ತರು; ಚುನಾವಣೆ-ವಿಶ್ಲೇಷಣಾ ತಜ್ಞರು. ರಾಷ್ಟ್ರದ ಅಭಿವೃದ್ಧಿ ಪ್ರಯೋಗಗಳನ್ನು ದೇಶದ ಉದ್ದಗಲಕ್ಕೆ, ಮುಖ್ಯವಾಗಿ ಕನ್ನಡ ನಾಡಿನ ಲಕ್ಷಾಂತರ ಗ್ರಾಮೀಣ ಜನಸಮೂಹಕ್ಕೆ ಸುಲಭವಾಗಿ ತಿಳಿಯಲು ರೇಡಿಯೋ ಮಾಧ್ಯಮವನ್ನು ಯಶಸ್ವಿಯಾಗಿ ಬಳಕೆ ಮಾಡಿದ್ದು ಇವರ ಹೆಗ್ಗಳಿಕೆ. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಪದವಿಗಳಿಸಿ ಮುಂಬೈನ ಟೈಮ್ಸ್ ಆಫ್ ಇಂಡಿಯಾದಲ್ಲಿ ವೃತ್ತಿ ಆರಂಭ; ನಂತರ ನಾಡಿನ ಪ್ರತಿಷ್ಠಿತ...

ಸರ್ವೋದಯ ಮಂಡಲ ಜಿಲ್ಲಾ ಅಧ್ಯಕ್ಷರ ನಿಯೋಜನೆ

ಕರ್ನಾಟಕ ಸರ್ವೋದಯ ಮಂಡಲ ಪ್ರಸ್ತುತ ರಾಜ್ಯದ  ಬೆಂಗಳೂರು ನಗರ ಹಾಗೂ ಗ್ರಾಮಾಂತರ, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ತುಮಕೂರು, ಹಾಸನ,ಚಿತ್ರದುರ್ಗ, ಕೋಲಾರ, ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಕ್ರಿಯವಾಗಿದ್ದು ಯುವಜನರಲ್ಲಿ ಸರ್ವೋದಯ - ಗಾಂಧೀ ಮೌಲ್ಯಗಳ ಪ್ರಚಾರ ಮಾಡುವ ಉದ್ದೇಶದಿಂದ ನಾಲ್ಕು ಜಿಲ್ಲೆ ಗಳಲ್ಲಿ ಅಧ್ಯಕ್ಷರ  ನಿಯೋಜನೆ ಮಾಡಿ ಆದೇಶ ಹೊರಡಿಸಿದೆ.ಧಾರವಾಡ  ಡಾ. ಚಿದಾನಂದ ಪಿ....

ಕವನ: ಕೃಷ್ಣನ ಕುಂಚದಿ ಮಿಂಚಿದ ರಾಧೆ

ಕೃಷ್ಣನ ಕುಂಚದಿ ಮಿಂಚಿದ ರಾಧೆ ರಾಧೆಯನು ಚಿತ್ರಿಸಲು ಮಾಧವನು ಕುಳಿತಿಹನು ಶೋಧಿಸುತ ಅನುರಾಗ ವರ್ಣ ಮೋದದಲಿ ಮೈಮರೆತು ಯಾದವ ಕುಲ ತಿಲಕ ಮಾಧವಿಗು ನೀಲವನೆ ಬಳಿದ ನಾಸಿಕವ ಕುಂಚದಲಿ ಕೇಶವನು ತೀಡುತಲಿ ತೋಷವನು ಮೊಗದಲ್ಲಿ ಬರೆದ ಕುಂಚದ ತುದಿಯಲ್ಲಿ ಮಿಂಚುತಿದೆ ನಿಜದೊಲವು ಸಿಂಚನದಿ ಪ್ರೇಮವನೆ ಸುರಿದ ಇಂಚಿಂಚು ಶೃದ್ಧೆಯಲೆ ಹಂಚುತಲಿ ಚೆಲುವ ಹೊಳೆ ಒಂಚೂರು ವಿಚಲಿಸದೆ ಕೊರೆದ ನೈದಿಲೆಯ ಮೊಗದವಳು ಮೈದಳೆದು ಕಾಗದದೆ ಮೂಡಿಹಳು ಚೆಲುವರಸಿ ರಾಧೆ. ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು.

ಮಕ್ಕಳೇಕೆ ಹೀಗೆ…? ಇಂದಿನ ವ್ಯವಸ್ಥೆಯ ಕುರಿತು ಶಿಕ್ಷಕರೋರ್ವರ ಆತಂಕ

ಇಂದಿನ ಪತ್ರಿಕೆ ತಿರುವುತ್ತಿದ್ದೆ. ಶಾಲೆಯ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕಾರಣ ಪರೀಕ್ಷೆಯಲ್ಲಿ ಚೀಟಿ ಇಟ್ಟಿದ್ದಳೆಂದು ಕ್ಲಾಸ್ ಟೀಚರ್ ಬೈದಿದ್ದರು. ಅವಮಾನ ತಾಳಲಾರದೆ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಳು. ಪೋಷಕರು ಮತ್ತು ಊರವರು ಶಾಲೆಯ ಮುಂದೆ ವಿದ್ಯಾರ್ಥಿನಿಯ ಶವ ಇಟ್ಟು ಧರಣಿ ಕೂತಿದ್ದರು. ಅವರ ಬೇಡಿಕೆ ಸ್ಪಷ್ಟ  "ಹುಡುಗಿಯ ಸಾವಿಗೆ ಟೀಚರೇ ಕಾರಣ, ಅವರನ್ನು ನಮ್ಮ ಕೈಗೆ...

ಜಯವರ್ಮ ಸಿನ್ಹಾ ಹಾಗೂ ಗೌರವ್ ದ್ವಿವೇದಿಯವರನ್ನು ಭೇಟಿಯಾದ ಈರಣ್ಣ ಕಡಾಡಿ

ನವದೆಹಲಿಯಲ್ಲಿ ರೈಲ್ವೆ ಬೋರ್ಡ ಚೇರಮನ್‌ ಜಯಾವರ್ಮ ಸಿನ್ಹಾ ಅವರನ್ನು ಮಂಗಳವಾರ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಭೇಟಿಯಾಗಿ, ಬೆಳಗಾವಿ ಜಿಲ್ಲೆಯ ರೈಲ್ವೆಗೆ  ಸಂಬಂಧಪಟ್ಟಂತಹ ವಿಷಯಗಳ ಕುರಿತು ಅವರೊಂದಿಗೆ ವಿಸ್ತೃತ ಚರ್ಚೆ ನಡೆಸಿದರು.ಜಯಾವರ್ಮ ಸಿನ್ಹಾ ಅವರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರಸ್ತಾವನೆಗಳನ್ನು ಪರಿಶೀಲಿಸಿ, ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದ್ದಾರೆ.ಅನಂತರ ಕೇಂದ್ರ...

ನಿಜಗುಣಯ್ಯ ಅವರಿಗೆ ವಿಶ್ವ ವಿಜ್ಞಾನ ಶ್ರೀ ಪ್ರಶಸ್ತಿ

ಕಸ್ತೂರಿ ಸಿರಿಗನ್ನಡ ವೇದಿಕೆ (ರಿ)ಬೆಳಗಾವಿ ವತಿಯಿಂದ ನೀಡುವ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಗೌರವ ಪುರಸ್ಕಾರ ಪ್ರದಾನ ಸುಸಂದರ್ಭದಲ್ಲಿ ರಾಷ್ಟ್ರಮಟ್ಟದ  ವಿಶ್ವ ಜ್ಞಾನಶ್ರೀ ಪುರಸ್ಕಾರ ಪ್ರಶಸ್ತಿಯನ್ನು ಪ್ರೌಢಶಾಲಾ ಶಿಕ್ಷಕರು ಮತ್ತು ಕವಿ  ಹಾಗೂ ರಾಜ್ಯ ಸಂಪನ್ಮೂಲ ವ್ಯಕ್ತಿ ಎಚ್ ಎಸ್ ನಿಜಗುಣಯ್ಯ ಅವರಿಗೆ ನೀಡಲಾಗಿದೆ.ಸಮಾಜ ಕಲ್ಯಾಣ ಇಲಾಖೆಯ ಡಾ ಬಿ ಆರ್ ಅಂಬೇಡ್ಕರ್ ವಸತಿ...

ಅಧಿಕಾರಿಗಳು ಕುಡಿಯುವ ನೀರಿನ ಬವಣೆ ತಪ್ಪಿಸಲು ಶಾಸಕರ ಸೂಚನೆ

ಮೂಡಲಗಿ, ಗೋಕಾಕ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಗೋಕಾಕ: ಕುಡಿಯುವ ನೀರಿನ ಹಾಹಾಕಾರ ತಪ್ಪಿಸಲು ಸ್ಥಳೀಯ ಪಿಡಿಓ, ವಿಎ ಮತ್ತು ಆರ್‍ಡಿಪಿಆರ್ ಇಂಜನೀಯರ್‍ಗಳು ಸಮನ್ವತೆಯಿಂದ ಕಾರ್ಯನಿರ್ವಹಿಸಿ ಸಾರ್ವಜನಿಕರಿಗೆ ಅಗತ್ಯವಿರುವ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿಕೊಡುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.ಮಂಗಳವಾರದಂದು ನಗರದ ತಾಲೂಕಾ ಪಂಚಾಯತ ಸಭಾ...

ರಾಜಗಾಂಭಿರ್ಯದ ಹೆಜ್ಜೆಗಳು…

ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿರುವ ತಾಲೂಕಾ ಕೇಂದ್ರ ಹುಕ್ಕೇರಿಗೂ‌ ನನಗೂ‌ ಭಾವನಾತ್ಮಕವಾದ ಸಂಬಂಧ‌ ಇದೆ. ನನ್ನ ತಾಯಿಯೂರು ಇದೇ ಹುಕ್ಕೇರಿ ತಾಲೂಕಿನ ಯಮಕನಮರಡಿ.‌ ಸಹಜವಾಗಿಯೇ ಮಾತೃತ್ವದ ಪರಿಛಾಯೆಗೆ ನನ್ನ ಮನಸ್ಸು ಒಳಪಡುವದು ಅಚ್ಚರಿಯೇನಲ್ಲ. ಇದರ ಜೊತೆಗೆ ಹುಕ್ಕೇರಿಯಲ್ಲಿ ನೆಲೆಸಿರುವ ದೇಶಪಾಂಡೆ ಕುಟುಂಬದ ನಂಟು ಅಷ್ಟೇ ಆತ್ಮೀಯಪೂರ್ಣವಾಗಿದೆ. ನೂರಾರು ವರ್ಷಗಳ ಇತಿಹಾಸವಿರುವ ಆ ಕುಟುಂಬದ ಧೀಮಂತ ವ್ಯಕ್ತಿತ್ವದ...

ಜಿಲ್ಲೆಯ 3806 ಹೆ. ಪ್ರದೇಶ ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ – ಈರಣ್ಣ ಕಡಾಡಿ ಮಾಹಿತಿ

ಬೆಳಗಾವಿ: ಕೃಷಿಯಲ್ಲಿ ಅಂತರ್ಜಲ ಬಳಕೆಯ ದಕ್ಷತೆಯನ್ನು ಸುಧಾರಿಸುವ ಸಲುವಾಗಿ ಅಟಲ್ ಭೂ ಜಲ್ ಯೋಜನೆಯಡಿ ಬೆಳಗಾವಿ ಲೋಕಸಭಾ ಕ್ಷೇತ್ರದ ರಾಮದುರ್ಗ ತಾಲೂಕಿನ 26 ಗ್ರಾಮ ಪಂಚಾಯಿತಿಗಳ ಸುಮಾರು 3806 ಹೆಕ್ಟೇರ್ ಪ್ರದೇಶವನ್ನು ಸೂಕ್ಷ್ಮ ನೀರಾವರಿ ವ್ಯಾಪ್ತಿಗೆ ತರಲಾಗಿದೆ ಎಂದು ಕೇಂದ್ರ ಜಲಶಕ್ತಿ ಖಾತೆ ರಾಜ್ಯ ಸಚಿವ ಬಿಶ್ವೇಶ್ವರ ಟುಡು ಅವರು ಲಿಖಿತ ಉತ್ತರದಲ್ಲಿ ಮಾಹಿತಿ...
- Advertisement -spot_img

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...
- Advertisement -spot_img
error: Content is protected !!
Join WhatsApp Group