ಕವನ

Must Read

ಬಿಸಿಲ ಮಳೆ

ಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ

ಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ

ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ) ವಿಧಿಸುತಿದೆ

ಇನ್ನಾದರೂ ಕೃಪೆದೋರು ಓ ವರುಣದೇವ
ಬೆಂದೊಡಲ ಹಸಿಮಾಡಿ
ರವಿಕಿರಣದ ಪೌರುಷ ಕುಗ್ಗಿಸಿ
ತಂಗಾಳಿಯ ಸೂಸು
ಬದುಕು ಹಸನಾಗಿಸು

ಶಿವಕುಮಾರ ಕೋಡಿಹಾಳ,  ಮೂಡಲಗಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group