spot_img
spot_img

ಕವನ

Must Read

- Advertisement -

ಬಿಸಿಲ ಮಳೆ

ಸುರಿಯುತಿದೆ ಪ್ರತಿದಿನ ಬಿಸಿಲಮಳೆ
ಪ್ರಕೃತಿ ತನ್ನ ಕೋಪವ ತೀರಿಸಲೆಂದು
ಹನಿ ಹನಿ ನೀರಿಗೂ ತತ್ವಾರ
ಪ್ರಾಣಿ ಪಕ್ಷಿಗಳಿಗೆ ಜೀವಕಂಟಕ ಈ ಬಿಸಿಲ ಮಳೆ

ಹಸಿರು ಸಿರಿಯ ನಾಶದ ಫಲದಿ
ಕೆರೆ ಕುಂಟೆ ನದಿಗಳ ಅಪಹರಣ ಕಾರಣದಿ
ಕಾನನದ ವಿನಾಶದ ದುಷ್ಪಲವಾಗಿ
ಸುರಿಯುತಿದೆ ಭೂಮಂಡಲಕೆ ಬಿಸಿಲಮಳೆ

- Advertisement -

ಮನುಜ ಮಾಡಿದ ಪರಿಸರ ನಾಶದ ಕುಕೃತ್ಯಕೆ
ಸೇಡು ತೀರಿಸುವ ರೀತಿಯಲಿ
ಹಿಂದೆಂದೂ ಕಾಣದ ರೀತಿಯಲಿ ಬಿಸಿಗಾಳಿಯ ಶಿಕ್ಷೆ (ಕರಿನೀರ ಶಿಕ್ಷೆಯ ತರದಿ) ವಿಧಿಸುತಿದೆ

ಇನ್ನಾದರೂ ಕೃಪೆದೋರು ಓ ವರುಣದೇವ
ಬೆಂದೊಡಲ ಹಸಿಮಾಡಿ
ರವಿಕಿರಣದ ಪೌರುಷ ಕುಗ್ಗಿಸಿ
ತಂಗಾಳಿಯ ಸೂಸು
ಬದುಕು ಹಸನಾಗಿಸು

ಶಿವಕುಮಾರ ಕೋಡಿಹಾಳ,  ಮೂಡಲಗಿ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ

  ಮಂಗದಿಂ ಮಾನವನು ಜನಿಸಿಬಂದೆನ್ನುವರು ಈಗಿರುವ ಮಂಗದಿಂ ಜನಿಸನೇಕೆ ? ಮಂಗ ಮಾನಸದಿಂದ ಮನುಜ‌ ಮಾನಸವೆಂಬ ಸಿದ್ಧಾಂತ ಸರಿಯೇನೋ ! - ಎಮ್ಮೆತಮ್ಮ ಶಬ್ಧಾರ್ಥ ಮಂಗ = ಕೋತಿ. ಮಾನಸ = ಮನ. ಮನುಜ...
- Advertisement -

More Articles Like This

- Advertisement -
close
error: Content is protected !!
Join WhatsApp Group