ಕವನ ; ಕೆನೆಯಾದ ಭಾವ

Must Read

ಕೆನೆಯಾದ ಭಾವ

ಹಾಲು ಹೃದಯದ ತುಂಬ
ಹರಿದ ನಿನ್ನ ಪ್ರೀತಿಯ
ಸ್ನೇಹ ಪರಿಮಳ ಭಾವವು…
ಸವಿ ಸಕ್ಕರೆಯಾಗಿ ಮನ
ಅಕ್ಕರೆಯಲಿ ಕರಗಿ
ಒಂದಾಗಿ ಮಧುರ ಜೀವವು…

ಎದೆ ಕಡಲಲಿ ಹೊಮ್ಮಿ
ಹಾಡುವ ನೀನು ಬರೆದ
ನೂರು ಕವನದಲೆಗಳು..
ಮೌನವಾಗಿ ಮಾತು ಮರೆತು
ಹೆಪ್ಪುಗಟ್ಟಿವೆ ಉಪ್ಪು ನೀರ
ನೋವ ಒಡಲಲಿ ಒಲವದು…

ಸಾವಿರ ಮಾತಿನ ಬಾಣ
ತೂರಿ ಹೃದಯ ಗಾಯ
ಕುದಿವ ಕಡಲ ಆಗರ…
ಮುಚ್ಚಿದೆದೆಯ ಕದವ
ತೆರೆಯದ ಕಲ್ಲು ಹೃದಯ
ನಡುಗಿತು ಭಾವ ಸಾಗರ.

ಬಿತ್ತಿದ ಭಾವ ಬೀಜ
ಮೊಳೆತು ಚಿಗುರು ಪರಿಮಳ..
ಕುದಿದು ಮರಳಿ ಹೊರಳಿ
ಶಶಿಕಿರಣ ಬೆಳಕ ಬೆರಗು
ಪದರ ಸವಿಯ ಕವಿ ಜೀವ
ಕೆನೆಗಟ್ಟಿದ ಭಾವ ಸೆರಗು….

ಇಂದಿರಾ ಮೋಟೆಬೆನ್ನೂರ. ಬೆಳಗಾವಿ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group