Homeಸುದ್ದಿಗಳುದೇಶಭಕ್ತಿ ಗೀತೆ ಸ್ಪರ್ಧೆಗೆ ಗೀತೆಗಳ ಆಹ್ವಾನ

ದೇಶಭಕ್ತಿ ಗೀತೆ ಸ್ಪರ್ಧೆಗೆ ಗೀತೆಗಳ ಆಹ್ವಾನ

ಬಿಜೆಪಿ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಯುವ ಮೋರ್ಚಾ ವತಿಯಿಂದ ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ಸ್ಮರಣಾರ್ಥ ದೇಶಭಕ್ತಿ ಗೀತೆ ಸ್ಪರ್ಧೆಯ ಪೋಸ್ಟರ್ ಅನ್ನು ಬಿಜೆಪಿ ಮೈಸೂರು ನಗರ ಅಧ್ಯಕ್ಷರಾದ ಟಿ ಎಸ್ ಶ್ರೀವತ್ಸ ಹಾಗೂ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಡಾ॥ ಸಂದೀಪ್ ಕುಮಾರ್ ರವರು ಬಿಡುಗಡೆಗೊಳಿಸಿದರು ಇದೇ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾದ ಡಾ॥ ಸಂದೀಪ್ ಕುಮಾರ್ ರವರು, ಭಗತ್ ಸಿಂಗ್ ಹಾಗೂ ಸ್ವಾಮಿ ವಿವೇಕಾನಂದರ ಸಾಧನೆ ಹಾಗೂ ಅವರು ನಡೆದು ಬಂದಿರುವ ಹಾದಿಯನ್ನು ಇವತ್ತಿನ ಯುವ ಪೀಳಿಗೆಗೆ ತಿಳಿಸಿಕೊಡಲು ಹಾಗೂ ಜಾಗೃತಿ ಮೂಡಿಸಲು ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಇವತ್ತಿನ ಯುವ ಪೀಳಿಗೆಗೆ ಜಾಗೃತಿ ಮೂಡಿಸಲು ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಹಮ್ಮಿಕೊಂಡಿದೆ ಹಾಗು ದೇಶಭಕ್ತಿಯ ಹಾಡುಗಳು ಯಾವಾಗಲೂ ನಮ್ಮ ನೈತಿಕತೆಯನ್ನು ಹೆಚ್ಚಿಸುವಲ್ಲಿ ಮತ್ತು ರಾಷ್ಟ್ರದ ಕಡೆಗೆ ಪ್ರೀತಿಯ ಮನೋಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ರಾಷ್ಟ್ರೀಯ ಉದ್ದೇಶಕ್ಕಾಗಿ ಒಗ್ಗೂಡಲು ಕರೆ ನೀಡಿದಾಗಲೆಲ್ಲಾ ಇದು ನಮ್ಮ ಶಕ್ತಿಯಾಗಿರುವ ಸಂಪ್ರದಾಯವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ, ಹೊಸ ಭಾರತವು ಉದಯವಾಗುತ್ತಿದೆ – ಇದು ನಮ್ಮ ರಾಷ್ಟ್ರದ ಅನೇಕ ಸಾಧನೆಗಳು ಮತ್ತು ಅದರ ಮಿತಿಯಿಲ್ಲದ ವೈವಿಧ್ಯತೆಯ ಬಗ್ಗೆ ಹೆಮ್ಮೆಪಡುತ್ತದೆ. ನಾವು ಹೆಚ್ಚು ಜಾಗೃತರಾಗುತ್ತಿದ್ದೇವೆ ಮಾತ್ರವಲ್ಲದೆ, ನಮ್ಮ ಐತಿಹಾಸಿಕ ಹೆಗ್ಗುರುತುಗಳು ಮತ್ತು ನಮ್ಮ ಇಂದಿನ ಸಾಧನೆಗಳ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಿದ್ದೇವೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಮಜನ್ಮಭೂಮಿಯ ಟ್ರಸ್ಟಿನ ರಾಜ್ಯಾಧ್ಯಕ್ಷರಾದ ವೆಂಕಟ ರಾಮರವರು, ರಾಜ್ಯ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷರುಗಳಾದ ಧೀರಜ್ ಪ್ರಸಾದ್, ಜಯಶಂಕರ್, ಮೈಸೂರು ನಗರ ಯುವಮೋರ್ಚಾ ಅಧ್ಯಕ್ಷರಾದ ಕಿರಣ್ ಗೌಡ, ಉಪಾಧ್ಯಕ್ಷರಾದ ಕೆಎಂ ನಿಶಾಂತ್, ನರಸಿಂಹರಾಜ ಕ್ಷೇತ್ರದ ಯುವ ಮೋರ್ಚಾ ಅಧ್ಯಕ್ಷ ಡಿ ಲೋಹಿತ್, ಪ್ರಧಾನ ಕಾರ್ಯದರ್ಶಿಗಳಾದ ಧನರಾಜ್, ಹಾಗೂ ನವೀನ್ ಶೆಟ್ಟಿ, ಮುಖಂಡರಾದ ರಾಜು, ಮಧುರಾಜ್, ಶ್ರೀಕಂಠ, ಸಚಿನ್, ಮಧು, ಮುಂತಾದವರು ಉಪಸ್ಥಿತರಿದ್ದರು.

ಸ್ಪರ್ಧೆಯಲ್ಲಿ 18 ವರ್ಷದ ಒಳಪಟ್ಟ ಮಕ್ಕಳಿಗೆ ಸ್ಪರ್ಧೆ ಆಯೋಜಿಸಿದ್ದು ಭಾಗವಹಿಸಿ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನವನ್ನು

  • ಪ್ರಥಮ: 3000
  • ದ್ವಿತೀಯ: 2000
  • ತೃತೀಯ: 1000

ಹಾಗೂ ಭಾಗವಹಿಸಿದ ಪ್ರತಿಯೊಬ್ಬರಿಗೂ ನೆನಪಿನ ಕಾಣಿಕೆ ಮತ್ತು ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ದೇಶಭಕ್ತಿ ಗೀತೆಯ ಈ ಹಾಡನ್ನು 3 ನಿಮಿಷದ ತುಣುಕುಗಳನ್ನು ಸಂಖ್ಯೆಗೆ 8105078070 ಕಳುಹಿಸಬೇಕು ಎಂದು ಕೋರಲಾಗಿದೆ.

RELATED ARTICLES

Most Popular

error: Content is protected !!
Join WhatsApp Group