Times of ಕರ್ನಾಟಕ
ಸುದ್ದಿಗಳು
ಕನ್ನಡ ಭಾಷೆಗೆ ವಿಶ್ವದಲ್ಲಿಯೇ ಅಗ್ರ ಸ್ಥಾನವಿದೆ – ತಹಶೀಲ್ದಾರ ದಾಸರ
ಸಿಂದಗಿ: ಕನ್ನಡವೆಂಬುದು ಬರೀ ಭಾಷೆಯಲ್ಲ ಅದು ನಮ್ಮ ಸಂಸ್ಕೃತಿ, ಕನ್ನಡ ಭಾಷೆಗೆ ವಿಶ್ವದಲ್ಲಿಯೆ ಅಗ್ರ ಸ್ಥಾನವಿದೆ ಕನ್ನಡ ಸಂಸ್ಕೃತಿ ನಮ್ಮೆಲ್ಲರ ಬದುಕಿನ ಸಂಸ್ಕೃತಿಯಾಗಬೇಕು ಎಂದು ತಹಶೀಲ್ದಾರ ಸಂಜೀವಕುಮಾರ ದಾಸರ ಹೇಳಿದರು.ತಹಸೀಲ್ದಾರ ಕಛೇರಿಯಲ್ಲಿ ಭುವನೇಶ್ವರಿಯ ಭಾವಚಿತ್ರಕ್ಕೆ ಹಾಗೂ ವಿಜಯಪುರ ರಸ್ತೆಯಲ್ಲಿರುವ ಭುವನೇಶ್ವರಿ ವೃತ್ತಕ್ಕೆ ಪೂಜೆ ಸಲ್ಲಿಸಿ ನಂತರ ಕನ್ನಡದ ಕಟ್ಟಾಳು ಚಿತ್ರನಟ ದಿ. ಪುನೀತಕುಮಾರ ಅವರಿಗೆ...
ಸುದ್ದಿಗಳು
ಪ್ರೊ.ಜ್ಯೋತಿ ಹೊಸೂರ ನಿಧನ
ಬೆಳಗಾವಿ - ಖ್ಯಾತ ಸಾಹಿತಿಗಳು ಹಾಗೂ ಜಾನಪದ ಸಂಶೋಧಕರು ಆದ ಪ್ರೋ. ಜ್ಯೋತಿ ಹೊಸೂರ ಅವರು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 85 ವರ್ಷ ವಯಸ್ಸಾಗಿತ್ತು. ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು 'ಗಾದೆ, ಒಡಪು, ಗ್ರಾಮದೇವತೆ 'ಅವರು ಮಾಡಿದ ಸಂಶೋಧನೆಗಳು ವಿದ್ವತ್ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು.ರಾಯಭಾಗನಂತಹ ಸಣ್ಣ...
ಸುದ್ದಿಗಳು
ಸಮಷ್ಟಿಗಾಗಿ ಸರ್ವಸ್ವ ಸಮರ್ಪಿಸಿದ ಅಕ್ಷರ ತಾಯಿ ಲೂಸಿ ಸಾಲ್ಡಾನಾ – ಶ್ರೀ ಕುಮಾರ ವಿರೂಪಾಕ್ಷ ಸ್ವಾಮೀಜಿ
ಸವದತ್ತಿ: “ಬದುಕಿನ ನಾಳೆಗಳಿಗಾಗಿ ಏನನ್ನೂ ಇಟ್ಟುಕೊಳ್ಳದೇ ಸರ್ವವನ್ನೂ ಸಮಷ್ಟಿಗಾಗಿ ಸಮರ್ಪಿಸಿದ ಅಕ್ಷರತಾಯಿ ಲೂಸಿ ಸಾಲ್ಡಾನಾ ಆದರ್ಶ ಮಾತೆಯಾಗಿ ಎಲ್ಲರ ಗೌರವಕ್ಕೆ ಪಾತ್ರರಾಗಿದ್ದಾರೆ.ವೈ.ಬಿ.ಕಡಕೋಳ ಗುರುಗಳು ತಮ್ಮ ಸಂಪಾದಕತ್ವದಲ್ಲಿ ಲೂಸಿ ಸಾಲ್ಡಾನಾ ಬದುಕು ಬರಹ ಮತ್ತು ಅಡುಗೆ ವೈವಿಧ್ಯ ಕೃತಿಗಳನ್ನು ಗುರುಮಾತೆಗೆ ಸಮರ್ಪಿಸುವ ಜೊತೆಗೆ ತಮ್ಮ ಮಕ್ಕಳ ಕಥಾಸಂಕಲನ ಸ್ವರ್ಗ ನರಕ, ಲೇಖನಗಳ ಸಂಕಲನ ತುಂಬಿದ ಹೊಳೆ,...
ಪ್ರಬಂಧ
ಕರ್ನಾಟಕ ರಾಜ್ಯೋತ್ಸವ
1956 ನೇ ಇಸ್ವಿ ನವ್ಹೆಂಬರ 1 ರಂದು ಆಂಧ್ರ, ತಮಿಳುನಾಡು, ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಹಂಚಿ ಹೋಗಿದ್ದ ಬಹುತೇಕ ಕನ್ನಡ ಪ್ರದೇಶಗಳು ಒಂದುಗೂಡಿ ವಿಶಾಲ ಮೈಸೂರು ಆಗಿ ರೂಪಗೊಂಡು ಕರ್ನಾಟಕ ಏಕೀಕರಣ ಕನಸು ನನಸಾದ ದಿನ. ವಿಶಾಲ ಮೈಸೂರು ಎಂದೇ ಆರಂಭಗೊಂಡ ಈ ಪ್ರದೇಶ ಕರ್ನಾಟಕ ಎಂಬ ಮೂಲ ನಾಮವನ್ನು ಪಡೆಯಲು ಒಂದು...
ಲೇಖನ
ಬಾರಿಸು ಕನ್ನಡದ ಡಿಂಡಿಮವ ತಲೆ ಎತ್ತಿ ಹಾರಿಸು ಕನ್ನಡದ ಬಾವುಟವ
ಕಪ್ಪು ಮಣ್ಣಿನ ಫಲವತ್ತತೆಯ ನಾಡು , ನೂರಾರು ರಾಜ್ಯ ವಂಶ ಪರಂಪರೆ ಆಳ್ವಿಕೆಯ ಬೀಡು,ಬೆಲ್ಲದ ಸಿಹಿಯ ಹೂರಣದ ಕರುನಾಡು, ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ನಾಡು, ಲಕ್ಷಾಂತರ ಕವಿ ಸಾಹಿತಿಗಳ ಪದಪುಂಜಗಳಲ್ಲಿ ಕಲೆ , ಸಂಸ್ಕೃತಿ , ವೈಭವದ ಚಿತ್ತಾರವನ್ನು ವರ್ಣಿಸಿದ ನಾಡು, ಕೋಟ್ಯಂತರ ಜನರ ಪ್ರೀತಿ ಅಭಿಮಾನ ಗೌರವದ ನಾಡು, ಪುಣ್ಯ...
ಕವನ
ಕವನ: ಹೆಮ್ಮೆಯ ಕರುನಾಡು
ಹೆಮ್ಮೆಯ ಕರುನಾಡು
ಕರುನಾಡು ಕರುನಾಡು
ಹೆಮ್ಮೆಯ ಸಿರಿನಾಡು
ಗಿರಿ ಗಂಧದ ಹಸಿರುಸಿರಲಿ
ಮೆರೆಯುವ ಸಿರಿನಾಡು //ಪ//
ನದಿ ಪರ್ವತ ಝರಿ ತೊರೆಗಳು ಹರಿಯುವಾ
ಸುಂದರ ಬೆಟ್ಟ-ಗುಡ್ಡಗಳ ಎಲ್ಲೆಲ್ಲೂ ಹಸಿರು
ಹೊತ್ತು ಮೆರೆಯುವ ಗಂಧದಾ ನಾಡು
ಉಸಿರ ನೀಡುವಾ ನಾಡಿದು ನಮ್ಮದು//
ಕೃಷ್ಣದೇವರಾಯ ಪುಲಿಕೇಶಿ ವಿಷ್ಣುವರ್ಧನ
ಮಯೂರರಂತ ಶೂರ ಧೀರರಾಳಿದ ನಾಡು
ಸಂಪದ್ಭರಿತ ಮುತ್ತುರತ್ನ ಅಳೆದ ಸಿರಿನಾಡು
ಯುಗ ಯುಗದಲ್ಲೂ ಮೆರೆದ ಕನ್ನಡ ನಾಡು//
ಶ್ರೀಗಂಧ ತೇಗು ಹೊನ್ನೆ ಬೀಟೆ
ನೀಲಗಿರಿ ಬೆಟ್ಟಗಳ ಪರಿಮಳ ಹರಡುತ
ಎಲ್ಲರ...
ಕವನ
ಕನ್ನಡ ಕವನ
ಕನ್ನಡ ಕವನ
ಕೈ ಹಿಡಿದ್ ಕರಕೊಂಡ್ ಹೋಗತೈತಿ
ಕನ್ನಡದ ಕವನ |ಎಲ್ಲಿಗಿ ಅಂತೀರಿ |
ವರ್ಣಮಾಲೆ ವ್ಯಾಕರಣ ಪದಸಂಪತ್ತಿನಿಂದ ವೈಭೋವೊಪೇತದೆಡೆಗೆ |
ವೇದಾಂತ ಉಪನಿಷತ್ತಿನ ಹೊಸತನದ ಅರುಣೋದಯದೆಡೆಗೆ
ಕಾಯಕದಿಂದ ಕೈಲಾಸದೆಡೆಗೆ
ಕನವರಿಕೆಯಿಂದ ಕಮಾಯಿವರೆಗೆ |
ಸೃಜನದಿಂದ ಸ್ವೋಪಜ್ಞತೆಯೆಡೆಗೆ
ವಿವೇಕದಿಂದ ವೈಚಾರಿಕತೆಯೆಡೆಗೆ ||
ಕೈಹಿಡಿದ್ ಕರಕೊಂಡ ಹೋಗತೈತಿ
ಕನ್ನಡ ಕವನ ಎಲ್ಲಿಗಿ ಅಂತೀರಿ|
ಕವಿರಾಜಮಾರ್ಗದ ಕಾವೇರಿಯಿಂದ
ಗೋದಾವರಿಯ ವಿಸ್ತಾರದೆಡೆಗೆ
ಶರಣ ಚಳವಳಿಯ ವಚನ ಸಾಹಿತ್ಯದಿಂದ ಮೌಢ್ಯ,ಮೂಢನಂಬಿಕೆಯ ಬದಲಾವಣೆಯದೆಡೆಗೆ ||
ಕೈಹಿಡಿದ್ ಕರಕೊಂಡ್ ಹೋಗತೈತಿ ಕನ್ನಡ ಕವನ...
ಲೇಖನ
ಕರ್ನಾಟಕ ರಾಜ್ಯೋತ್ಸವ ಒಂದು ನೆನಪು; ಕನ್ನಡ ತಾಯಿ ಭುವನೇಶ್ವರಿಯ ಅವತಾರಗಳು
ಕರ್ನಾಟಕ ಏಕೀಕರಣಕ್ಕಾಗಿ ಅಹರ್ನಿಶಿ ಶ್ರಮಿಸಿದ ಕಟ್ಟಾ ಕನ್ನಡಿಗ,ತಮ್ಮ ಜೀವಮಾನದಲ್ಲಿ ಕನ್ನಡ ಯುವಕರಿಗೆ ಸೆಲೆಯಾಗಿದ್ದ ಅಂದಾನಪ್ಪ ದೊಡ್ಡ ಮೇಟಿಯವರು ರಚಿಸಿದ ಕರ್ನಾಟಕ ಮಹಿಮ್ನಃ ಸ್ತೋತ್ರ ಗ್ರಂಥದಿಂದ ಆಯ್ದ ಭಾಗಗಳು.ಖ್ಯಾತ ಸಾಹಿತಿ ಅನಕೃ ಅವರು ಮುನ್ನುಡಿ ಬರೆದ ಈ ಗ್ರಂಥದಲ್ಲಿ ಕನ್ನಡ ನಾಡ ತಾಯಿ ಭುವನೇಶ್ವರಿ ಶ್ರೀದೇವಿ ಬೇರೆ ಬೇರೆ ರೂಪಗಳಲ್ಲಿ ರಾಜ್ಯಾದ್ಯಂತ ಪ್ರಕಟವಾಗಿದ್ದಾಳೆಂಬುದನ್ನು ತುಂಬ ಮಾರ್ಮಿಕವಾಗಿ...
ಸುದ್ದಿಗಳು
ಶೋಕಸಾಗರದಲ್ಲಿ ಕರುನಾಡು ಆದರೆ ನೃತ್ಯದಲ್ಲಿ ಸಚಿವರು
ಬೀದರ: ಕನ್ನಡಿಗರ ಪ್ರೀತಿಯ ಅಪ್ಪು ಕಣ್ಮರೆಯಾಗಿ ಇಡೀ ರಾಜ್ಯವೇ ಶೋಕ ಸಾಗರದಲ್ಲಿ ಮುಳುಗಿದ್ದರೆ ಬೀದರ ಜಿಲ್ಲಾ ಉಸ್ತುವಾರಿ ಸಚಿವರು ಮಾತ್ರ ಜಾನಪದ ನೃತ್ಯದಲ್ಲಿ ಬಿಜಿಯಾಗಿದ್ದರು.ರಾಷ್ಟ್ರ ಪ್ರಶಸ್ತಿ ವಿಜೇತ ಪುನೀತ್ ರಾಜ್ಕುಮಾರ್ ರವರನ್ನು ಕಳೆದುಕೊಂಡ ಕರ್ನಾಟಕದ ಶೋಕದಲ್ಲಿ ಮುಳುಗಿದೆ. ಎರಡು ದಿನಗಳಿಂದ ಕಂಠೀರವ ಸ್ಟೇಡಿಯಂ ನಲ್ಲಿ ಸಾರ್ವಜನಿಕರಿಗೆ ಪುನೀತ್ ರಾಜ್ಕುಮಾರ್ ನೋಡಲು ಅವಕಾಶ ನೀಡಿದೆ. ರಾಜ್ಯದ...
ಕವನ
ಕವನ: ಮುನ್ನ ಮುನ್ನ
ಮುನ್ನ ಮುನ್ನ
ಆಯ್ಕೆಗಳಿಲ್ಲ ಸಾವು ಬಂದಾಗ
ಮನಸ್ಸಿರಲಿ ಶಿವ ಧ್ಶಾನದಾಗ
ಇರಬೇಕ್ಶಾಕ ಖಾಲಿ ವ್ಶಸನದಾಗ
ನಿತ್ಶ ನಡೀಬೇಕು ಮನುಷ್ಶರಾಂಗ
ಸರಳತೆ ಇರಲಿ ಜೀವನದಾಗ
ನಗು ಇರಲಿ ಆಗಾಗ
ಸೇವಾ ಮನಸ್ಸು ಬೇಕು, ಇದ್ದಾಗ
ಹೋದ್ ಗಳಿಗೆ ಹುಗೀತ್ಶಾರ ಮಣ್ಣಾಗ
ಸದ್ಗುಣಗಳು ಮರಿತೀ ಯಾಕ
ತಪ್ಪು ಒಪ್ಪು, ಇದ್ರ ಹೇಳಿಬಿಡಬೇಕಽ
ಒಳ್ಳೆಯದು ಮಾಡಿ ಹೋಗಬೇಕು ಮ್ಶಾಕ
ಇಲ್ಲಾಂದ್ರ ದೇವ್ರು ಕಳಸ್ತಾನ ಮತ್ತೆ ತೆಳಾಕ
ಮತ್ತೆ ಮತ್ತೆ ಸುತ್ತ ಬೇಕಂತಿಯಾ
ಇಲ್ಲೆ ಗುಂಗಿ ಹುಳದಂಗ
ಒಮ್ಮೆ ಹೋಗಿಬಿಡು ಕೈಲಾಸದಾಗ
ನಡೆಯೋದಿಲ್ಲ...
About Me
12281 POSTS
1 COMMENTS
Latest News
ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು
ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...



