spot_img
spot_img

ಜಾನಪದದಲ್ಲಿ ಬಸವಣ್ಣ

Must Read

- Advertisement -

ಜಾನಪದದಲ್ಲಿ ಬಸವಣ್ಣ

ಹಡದವ್ವ ಮಾದವ್ವ ಹಡದಪ್ಪ ಮಾದರಸು
ಪಡೆದವ್ವ ಅಕ್ಕನಾಗಾಯಿ|
ಬಸವನಿಗೆ
ಬಿಡದೆ ಸಲುಹಿದನು ವರಸಂಗ||

ವೇದ ವೇದದ ವಾದ ಭೇದ ಹುಟ್ಟಿಸಿ ಜಗಕೆ
ದಾದು ಯಾರಿಲ್ಲ ಹೇಳುವುದಕ್ಕೆ|
ಬಸವಣ್ಣ
ಭೇದ ಅಳುಕಿಸಿದ ಕುಲ ಕುಲಕೆ.

ದಾಸೋಹಿ ಬಸವಣ್ಣ ದಾಸೋಹ ಕಲಿಸಿದನು
ದೇಶ ದೇಶೆಲ್ಲ ಕೇಳುತಲಿ|
ಹೊಸಮಾತ ಮಾಸಿದವು
ವೇದ ಹುಸಿಯೆಂದು.

- Advertisement -

ಹೊಲೆಯ ಮಾದಿಗರೆಂಬ ಬಲೆಯಾತ ಕಿತ್ತೊಗೆದ
ಭಲರೆ ಬಸವಯ್ಶಾ ಬಸವರಸ|
ನಿನ್ನುಸುರು
ನೆಲೆಯಾತು ನಿತ್ಶ ಜನಪದಕೆ

ಓದಿದನು ಬಸವಯ್ಶ ವೇದದೊಳಗಿನ ಹುಸಿಯ
ಭೇದ ಭೇದವನೆ ಬಿಚ್ಚಿಟ್ಟ|
ಜನಪದಕೆ
ತೇದುಂಡ ಜೀವಿ ಬಸವಣ್ಣ||

ಸಾಧು ಸಾಧಲೆ ಬಸವ ಓದು ಕಲಿಯಿತು ಜನವು
ಹೋದ ಹೋದಲ್ಲಿ ಹೊಸ ಮಾತು|ಕೇಳಿದವು
ಮೇದಿನಿಗೆ ಬಂತು ಹೊಸ ಬೆಳಕು||

- Advertisement -

ಹುಟ್ಟಿ ಬಂದನು ಬಸವ ಕಟ್ಟುದಕ ಕಲ್ಶಾಣ
ಬಿಟ್ಟು ಬಾಗೋಡಿ ನಾಗಾಯಿ|
ಯೊಡಗೂಡಿ
ಮೆಟ್ಟ ಮಾಡಿದನು ಸಂಗಮಕೆ

ಬಸವ ಸಾಲಿಯ ಕಲಿತ ಎಸೆವ ಸಂಗಮದೊಳಗೆ
ಹೆಸರುಜಾನಪದದಲ್ಲಿ ಬಸವಣ್ಣ ಪಡಕೊಂಡ ಜಗದೊಳಗೆ| ವರಸಂಗ
ಹಸು ಮಗನ ಹರಸಿ ಸಲಹಿದನು||

ಬಸವರಾಜ ಕೋಟಿ
ಶಿಕ್ಷಕರು, ಕುಲಗೋಡ

ಹುಸಿ ವೇದ ಹಾರವರು ಹಸಗೆಟ್ಟ ಲೋಕದಲಿ
ಗುಸುಮುಸಿಯು ನಡೆಯೆ ಬಸವನಿಗೆ| ವರಸಂಗ
ಹೊಸತು ಊದಿದನು ಕಿವಿ ಮಾತ||

🌹🙏ಜೈ ಬಸವಣ್ಣ🌹🙏

- Advertisement -
- Advertisement -

Latest News

ಕವನ : ಗೊಂಬೆಗಳ ಕಣ್ಣೀರು

ಗೊಂಬೆಗಳ ಕಣ್ಣೀರು ಅಂದು ನಾವು ಅಪ್ಪ ಅವ್ವನನ್ನು ಕಾಡಿ ಬೇಡಿ ಗೊಂಬೆಗಳಿಗಾಗಿ ಅಳುತ್ತಿದ್ದೆವು ಜಾತ್ರೆ ಉತ್ಸವದಲ್ಲಿ ಹಿರಿಯರಿಗೆ ದೇವರ ಮೇಲಿನ ಭಕ್ತಿ ನಮಗೋ ಬಣ್ಣ ಬಣ್ಣದ ಗೊಂಬೆಗಳ ಮೇಲೆ ಆಸಕ್ತಿ ಅವ್ವ ಹೇಗೋ ಮಾಡಿ ಅಪ್ಪನ ತುಡುಗಿನಲಿ ತನ್ನಲಿದ್ದ ದುಡ್ಡು ಕೊಟ್ಟು ತಂದಳು ಗೊಂಬೆಗಳ ಮಿತಿ ಇರಲಿಲ್ಲ...
- Advertisement -

More Articles Like This

- Advertisement -
close
error: Content is protected !!
Join WhatsApp Group