ವೈ.ಬಿ.ಕಡಕೋಳ ಸಹೃದಯ ಶಿಕ್ಷಕ ಸಾಹಿತಿ.ಕೇವಲ ಒಂದು ವರ್ಷದ ಹಿಂದಿನ ಅವರ ಪರಿಚಯ ನನ್ನಲ್ಲಿನ ಲೇಖಕಿಗೆ ಸಾಕಷ್ಟು ಬರವಣಿಗೆಗೆ ಕಾರಣವಾಯಿತು.ನನ್ನಂತಹ ಅನೇಕ ಬರಹಗಾರರಿಗೆ ಅವರ ಸ್ಪೂರ್ತಿದಾಯಕ ಸಲಹೆಗಳು ಸಾಹಿತ್ಯ ಕ್ಷೇತ್ರಕ್ಕೆ ನಮ್ಮನ್ನು ತೊಡಗಿಸುವಂತಾಗಿವೆ ಎಂದರೆ ಅತಿಶಯೋಕ್ತಿಯಾಗದು.ಇನ್ನೂ ಬರೆಯಬೇಕು ಎನ್ನುವವರಿಗೆ ಅವರ ಮಾರ್ಗದರ್ಶನ ಬಹಳ ಉಪಯುಕ್ತ.ಈ ದಿಸೆಯಲ್ಲಿ ವ್ಯಾಟ್ಸಪ ಮೂಲಕ ಪರಿಚಿತರಾದ ತುಮಕೂರು ಜಿಲ್ಲೆಯ ವೀಣಾ ನಾಗರಾಜು...
ಕರ್ನಾಟಕ ರಾಜ್ಯ ಸಹಕಾರಿ ಹಣಕಾಸು ಸಂಸ್ಥೆಯೊಂದು ನಡೆಸಿರುವ ಬಹು ಕೋಟಿ ರೂಪಾಯಿಗಳ ವಂಚನೆ ಪ್ರಕರಣ ನಡೆದು ಈಗಾಗಲೇ ಏಳು ವರ್ಷಗಳು ಸಂದಿವೆ. ಅತ್ಯಂತ ದೊಡ್ಡ ಬಹು ಕೋಟಿ ವಂಚನೆ ಪ್ರಕರಣವು ಆನಂದ ಅಪ್ಪುಗೋಳ ಇವರ ಮಾಲೀಕತ್ವದ ಬೆಳಗಾವಿಯ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸಿನ ಸಂಸ್ಥೆಯ ಸುಮಾರು 450 ಕೋಟಿ ರೂಪಾಯಿಯ ಹಣದ ಅವ್ಯವಹಾರ ಮತ್ತು...
ಡಾ. ಎಂ. ಎಂ. ಕಲಬುರ್ಗಿ, ಡಾ. ಎಂ. ಚಿದಾನಂದಮೂರ್ತಿ ಅವರಂತಹ ಸಂಶೋಧಕರು ಕಣ್ಮರೆಯಾದ ನಂತರ, ಕನ್ನಡ ಸಂಶೋಧನಾ ವಿದ್ವತ್ ಪರಂಪರೆ ಅನಾಥವಾಯಿತೆಂದು ಕೆಲವರು ಭಾವಿಸಿದರು. ಆದರೆ ಈ ವಿದ್ವಾಂಸರ ವಾರಸುದಾರಿಕೆಯನ್ನು ನಿಜವಾದ ಅರ್ಥದಲ್ಲಿ ಮುಂದುವರಿಸಿ, ಗುರುಕಾಣಿಕೆಯನ್ನು ಅತ್ಯಂತ ವ್ಯವಸ್ಥಿತವಾಗಿ ಸಲ್ಲಿಸಿದ ಹಿರಿಯ ವಿದ್ವಾಂಸರಲ್ಲಿ ಡಾ. ರವೀಂದ್ರನಾಥ ಅವರು ಒಬ್ಬರು ಎಂದು ಹೇಳಲು ಹೆಮ್ಮೆ ಮತ್ತು...
ಗುರುಪೂರ್ಣಿಮಾ ವಿಶೇಷ
ಅರಿವಿಗೆ ಅನಂತ ಶಯನನಾಗಿ
ಜ್ಞಾನ ಜ್ಯೋತಿ ಬೆಳಗುತ್ತಿರುವ
ಗುರಿತೋರುವ ನೇತಾರ
ಬದುಕು ಭವಿಷ್ಯದ ಹಾದಿಯ
ದಿಟ್ಟ ಹೆಜ್ಜೆಯಿಡಲು ಗುರಿ
ತೋರುವ ದೈವದ ಗುರಿಕಾರ
ಜ್ಞಾನದ ತೃಷೆಯನ್ನು ತಣಿಸಿದ
ಬದುಕನ್ನು ಹದಗೊಳಿಸುವ
ಗುರುಬಲದ ಶಿಲ್ಪಿಗಾರ
ಸಕಲ ಜ್ಞಾನವಾಹಿನಿ ಜಾಗೃತಿ
ಜಗಕೆ ಬೆಳಕನ್ನು ಪ್ರಜ್ವಲಿಸುವ
ನಭೋಮಂಡಲದ ಸೂರ್ಯ
ಶಾಂತಿ ಶಿಸ್ತು ಸಹನೆ ತಾಳ್ಮೆಗಳ
ಒಳಿತು ಕೆಡುಕುಗಳ ಅರಿವು
ನೀಡುವ ಪರಮ ಗುರುವರ್ಯ
ಕಲ್ಲನ್ನು ಕಡೆದು ಆಕೃತಿ ನೀಡಿ
ತಿದ್ದಿ ತೀಡಿ ಶಿಲ್ಪಿಯ ತೆರದಿ
ರೂಪ ನೀಡುವ ಜ್ಞಾನದಾತ
ಅಕ್ಷರವೆಂಬ ದೀಕ್ಷೆಯ ಪದಗ್ರಹ
ವರವ...
ಕೋಲಶಾಂತಯ್ಯ
ಪಶುಪಾಲನೆ ವೃತ್ತಿಯನ್ನು ಕೈಕೋಂಡಿದ್ದ ಕೋಲ ಶಾಂತಯ್ಯನ ಹೆಸರು ವಚನ ಸಾಹಿತ್ಯ ದಲ್ಲಿ ಪ್ರಸಿದ್ಧ ವಾಗಿದೆ
ಮತ್ತು ಭೈರವೇಶ್ವರ ಕಾವ್ಯದ ಕಥಾಮಣಿಸೂತ್ರ ರತ್ನಾಕರದಲ್ಲಿ ಈತನಿಗೆ ಸಂಬಂಧಿಸಿದ ಕಥೆಗಳು ಇವೆ.
ಕಾಲ.-೧೨ನೆ ಶತಮಾನ
ನಾಮ-ಕೋಲಶಾಂತಯ್ಯ
ಕಸಬು-ಕೋಲನ್ನು ಹಿಡಿದು ಪಶುಗಳನ್ನು ಕಾಯುವ ವೃತ್ತಿಯವನು.ಹಾಗಾಗಿ ಕೋಲಶಾಂತಯ್ಯನೆಂದು ಹೆಸರು ಬಂದಿದೆ. ೧೨ನೇಶತಮಾನದಲ್ಲಿ ಶರಣರ ಕೈಯಲ್ಲಿರುವ ಕೋಲು ಬರಿ ಕೋಲಲ್ಲ ಅದು ಸತ್ಯ ನಿಷ್ಠೆಯ, ಆತ್ಮಸಾಕ್ಷಿಯ ಕೋಲು. ಸತ್ಯ...
ಕನ್ನಡ ಸಾಹಿತ್ಯದಲ್ಲಿ ಎಲೆ ಮರೆಯ ಕಾಯಿಯಂತೆ ಅಮೋಘ ಸೇವೆ ಆರಂಭಿಸಿ ಸ್ವಾತಂತ್ರ್ಯ ಹೋರಾಟದ ಜೊತೆಗೆ ಕನ್ನಡ ಸಾಹಿತ್ಯ ಮಹಿಳಾ ಪರ ಚಿಂತನೆಗೆ ತೊಡಗಿಸಿಕೊಂಡ ಅಪ್ರತಿಮ ಸಾಹಿತಿ ತಿರುಮಲಾಂಬ
ಜನನ
ನಂಜನಗೂಡು ತಿರುಮಲಾಂಬ ಅನ್ನುವ ದಂತ ಕಥೆ ಜೀವಿಸಿದ್ದು 1887 ರಿಂದ 1982 ರವರೆಗೆ. ಜನಿಸಿದ್ದು ಮೈಸೂರಿನ ಸಮೀಪದ ಹಕೀಮ...
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹಾಗೂ ದೈತ್ಯ ವಿಮಾನ ತಯಾರಿಕಾ ಸಂಸ್ಥೆಯಾದ ಬೋಯಿಂಗ್ ಸಂಸ್ಥೆಗಳ ಜಂಟಿ ಸಹಯೋಗದೊಂದಿಗೆ ಭಾರತೀಯ ಮೂಲದ ಖ್ಯಾತ ಖಗೋಳವಿಜ್ಞಾನಿ ಸುನಿತಾ ವಿಲಯಮ್ಸ್ ಹಾಗೂ ಬುಚ್ ವಿಲ್ಮೋರ್ ಖಗೋಳ ವಿಜ್ಞಾನಿಗಳು ಜೂ. 5 ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿದ್ದರು. ಪೂರ್ವ ಯೋಜನೆಯಂತೆ ಅವರು ಜೂ. 14 ರಂದೇ ಭೂಮಿಗೆ ಹಿಂದಿರುಗಬೇಕಿತ್ತು....
ಕೆಂಬಾವಿ ಭೋಗಣ್ಣ
ವಚನ ಸಾಹಿತ್ಯದ ಮಾತು ಬಂದ ತಕ್ಷಣವೇ ನಮ್ಮಲ್ಲಿ ಬಸವಾದಿ ಶರಣರ ಆಲೋಚನೆಗಳು ಸುಳಿದಾಡುತ್ತವೆ. ವಚನ ಸಾಹಿತ್ಯದ ಮೇಲೆ ಸಾಕಷ್ಟು ಸಂಶೋಧನೆಗಳು ನಡೆದಿದೆ ನಡೆಯತ್ತಲೇ ಇದೆ. ವಚನ ಸಾಹಿತ್ಯವನ್ನು ಅಧ್ಯಯನದ ದೃಷ್ಟಿಯಿಂದ ಬಸವಪೂರ್ವ ಯುಗ (11ನೇ ಶತಮಾನ), ಬಸವ ಯುಗ (12-13ನೇ ಶತಮಾನ), ಬಸವೋತ್ತರ ಯುಗ (15-19ನೇ ಶತಮಾನ) ಹಾಗೂ ಆಧುನಿಕ ಯುಗ (20ನೇ...
ಬಿಜೆಪಿ ಮತ್ತು ಜೆಡಿಎಸ್ ಆಡಳಿತದಲ್ಲಿನ ನಿಗಮ ಮಂಡಳಿ ಹಗರಣಗಳ ಬಗ್ಗೆ ಕೆಲ ಪತ್ರಿಕೆಗಳು ಹೇಳಿವೆ. ಇದು ಕಾಂಗ್ರೆಸ್ ಹಗರಣವನ್ನು ಗೌಣ ಮಾಡುವ ಉದ್ದೇಶವೆ ಅಥವಾ ಅವರೂ ಭ್ರಷ್ಟರು ಇವರೂ ಭ್ರಷ್ಟರು ಎಂದು ಭ್ರಷ್ಟರನ್ನು ಸಮರ್ಥಿಸಿ ಕೊಳ್ಳುವ ಉದ್ದೇಶವೆ ಹೇಗೆ ?
ಭ್ರಷ್ಟಾಚಾರ ಹಗರಣಗಳು ಸಾರ್ವಜನಿಕ ಜೀವನದಲ್ಲಿ ವ್ಯಾಧಿ ಎನಿಸಿವೆ. ಎಲ್ಲಾ ಹಂತದಲ್ಲಿ ಇಂದು ಭ್ರಷ್ಟತೆ ತುಂಬಿ...