ಕವನ

ಕವನ : ಬರಿದಾದ ಒಡಲು

ಬರಿದಾದ ಒಡಲು ‌ಕಿಲಕಿಲ ನಗುವ ಸದ್ದಿಲ್ಲ ಪುಟ್ಟ ಕರಗಳ ಸ್ಪರ್ಶವಿಲ್ಲ ಮಡಿಲಲ್ಲಿ ಕಂದನು ಮಲಗಿಲ್ಲ ಮೈ ಮನಕೆ ಹರ್ಷವಿಲ್ಲ ಬರಿದಾಗಿದೆ ಒಡಲು ಅಂತರಂಗದಿ ಅಳಲುಕೆಮ್ಮಣ್ಣು ತಿನ್ನುವ ಯೋಗವಿಲ್ಲ ಮಾವಿನಕಾಯಿ ಮೆಲ್ಲುವ ಅದೃಷ್ಟವಿಲ್ಲ ದೇಹದಿ ಪರಿವರ್ತನೆ ಇಲ್ಲವೇ ಇಲ್ಲ ಉದರದಿ ಕಂದನ ಒದ್ದಾಟವಿಲ್ಲ ಬರಿದಾಗಿದೆ ಒಡಲು ಅಂತರಂಗದಿ ಅಳಲುಮಗುವಿನ ಅಳುವ ದನಿಯಿಲ್ಲ ತೊದಲು ನುಡಿಗಳ ಆಲಿಸುವ ಭಾಗ್ಯವಿಲ್ಲ ಅಂಬೆಗಾಲಿನ ಗೆಜ್ಜೆನಾದದ ಸಂಗೀತವಿಲ್ಲ ಅಮ್ಮ ಎಂಬ ಅಕ್ಕರೆಯ ಕರೆಯಿಲ್ಲ ಬರಿದಾಗಿದೆ ಒಡಲು ಅಂತರಂಗದಿ ಅಳಲುಅಟ್ಟದಲ್ಲಿ ತೊಟ್ಟಿಲು ಅಣಕಿಸುತ್ತಿತ್ತ ಜನರ ಕುಹಕಗಳಿಗೆ ಮನವು...

ಕವನ : ಶರಣು ನಿನಗೆ ಸದ್ಗುರು

ಶರಣು ನಿನಗೆ ಸದ್ಗುರು ಶಿಸ್ತನು ಕಲಿಸಿ,ಅರಿವನು ತುಂಬಿ ಅರಳಿಸಿ ಮಗುವಲಿ ಪ್ರತಿಭೆಯನು ಕ್ಷಣ ಪ್ರತಿಕ್ಷಣವೂ ಆತ್ಮಸ್ಥೈರ್ಯವ ವಿದ್ಯಾರ್ಥಿಗಳಲಿ ತುಂಬುವರುಕಲಿಸುತಲನುದಿನ ವಿದ್ಯೆಯ ನಮಗೆ ಹರಸುವ ಗುರುವೇ ಹರಿ ಸಮವು ರಚಿಸಲು ಶಿಷ್ಯರ ಭವ್ಯ ಭವಿಷ್ಯವ ಹರ ಸಾಹಸವ ಪಡುವವರುಕ್ಲಿಷ್ಟತೆಯನ್ನು ಸರಳೀಕರಿಸುವ ಚಾಕಚಕ್ಯತೆಯ ಗುಣದಿಂದ ದಿನಚರಿಯಂತೆ ಆಟ ಪಾಠವ ಮಾಡುವ ಕ್ರಮವು ಬಲು ಚೆಂದದುಷ್ಟತೆಯಳಿಸಿ ಶಿಷ್ಟಾಚಾರದ ಅಂಕುರ ಮೂಡಿಸಿ ಸಲಹುವಿರಿ ಅಷ್ಟಭಾವದಲಿ ಸಾಷ್ಟಾಂಗ ನಮನವ...

ಕವನ : ನುಡಿ ನಮನ

      ನುಡಿ ನಮನ ಅಪ್ಪನಿಗಿಂತಲೂ ಮಿಗಿಲು ನಿಮ್ಮ ಪ್ರೀತಿ ಅಮ್ಮನಿಗಿಂತಲೂ ಮೇಲು ನಿಮ್ಮ ಕಾಳಜಿಆಗಲೂ ಈಗಲೂ ಮುಂದೆಯೂ ಎಂದಿಗೂ ಆಗದು ನಿಮ್ಮನ್ನು ಮೀರಿಸಲು ಯಾರಿಗೂಇಹಪರ ಲೋಕದಲಿ ನೀವೇ ಪ್ರಧಾನ ಇರುವರು ಯಾರು ನಿಮಗೆ ಸಮಾನಈಶ್ವರನ ಪ್ರತಿ ರೂಪವು ನೀವೇ ಈಶ್ವರಿಯ ಸ್ವರೂಪವೂ ನೀವೇಉತ್ತುಂಗ ಶಿಖರದಲ್ಲಿದೆ ನಿಮ್ಮ ಸ್ಥಾನಮಾನ ಉಳಿಸಿಕೊಳ್ಳ ಬೇಕಿದೆ ಆ ಅಭಿಮಾನಊರು ಕೇರಿ ಸುತ್ತಿ ಕರೆತರುವಿರಿ ಶಾಲೆಗೆ ಊರುಗೋಲು ನೀವೇ...

ಕವನ : ಕೂಗಿ ಕರೆಯುತಿದೆ

ಕೂಗಿ ಕರೆಯುತಿದೆ ಯಾವ ಜನುಮದ ಸ್ನೇಹ ಪ್ರೀತಿ ಯಾವ ಜನುಮದ ನಂಟೋ ? ಕೂಗಿ ಕರೆಯುತಿದೆ ಅಂತರಂಗ ನಿತ್ಯ ನಿರಂತರ ಬಾಳು ನಿನ್ನ ಬರುವ ಬಯಕೆ ಭರವಸೆಏನೋ ಗೊತ್ತಿಲ್ಲ ಗೆಳತಿ ನೀನು ಎಂದಾಗಲೆಲ್ಲ ಮನದ ಹಕ್ಕಿಯ ರೆಕ್ಕೆ ಬಿಚ್ಚಿ ಆಗಸಕ್ಕೆ ಹಾರುತ್ತವೆಜೀವಂತವಾಗಿಡಬೇಕು ನನ್ನೊಳಗಿನ ನನ್ನನ್ನು ನಿನ್ನ ನಗೆಯ ಚಿಗುರಿನಲಿ ವಿರಹ ಭಾವದಲಿ ಮಿಂಚಿ ಮರೆಯಾದ ಮೋಡಗಳ ಮಧ್ಯದಲಿ ಭರವಸೆಯ ಪ್ರೀತಿ ಹೊಯ್ಯುವ ಮಳೆ ತಿಂಗಳು ಉರುಳಿದ ಕ್ಷಣ ಹಸಿರಾಯಿತು...

ಕವನ : ಸಾಂಸ್ಕೃತಿಕ ರಾಯಭಾರಿ

ಸಾಂಸ್ಕೃತಿಕ ರಾಯಭಾರಿಬಡವರ ಬಾಳಿನ ವಿದ್ಯಾದಾತರು ಅನಾಥ ಮಕ್ಕಳ ಪಾಲಿನ ಕಲ್ಪವೃಕ್ಷರು ಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರು ಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ಮನುಕುಲೋದ್ಧಾರಕ ಹಿತಚಿಂತಕರು ಶರಣರ ಸಂದೇಶ ಪರಿಪಾಲಕರು ದಯೆ ಮಮತೆ ಕರುಣಾ ಸಾಗರರು ಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/'ಅರಿವೆ ಗುರು' ತತ್ವಾದರ್ಶ ಆರಾಧಕರು ಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರು ಸರಳ ಸಾಮಾಜಿಕ ಅಪೂರ್ವ ಸಾಧಕರು ಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರು ನಿರಾಡಂಬರ ನಿಸ್ವಾರ್ಥಕೆ ದಾರಿದೀಪರು ಮನುಕುಲದ ವೈರತ್ವ ನಿವಾರಿಸಿಹರು ವಿದೇಶಗಳಲ್ಲಿ ಸಾಂಸ್ಕೃತಿಕ...

ಕವನ : ಶರಣು ಬೆನಕನೆ ಶತ ಶತ ವಂದನೆ

ಶರಣು ಬೆನಕನೆ ಶತಶತ ವಂದನೆಪಾರ್ವತಿ ನಂದನ ಮೂಷಕ ವಾಹನ ಸಿದ್ಧಿ ವಿನಾಯಕ ವಿದ್ಯಾ ಪ್ರದಾಯಕ ವಿಘ್ನ ನಿವಾರಕ ಸಂಕಷ್ಟ ಹಾರಕ ಸಾಧು ವಂದಿತ ತ್ರಿಜಗ ಪೂಜಿತಮೊರದಗಲದ ಕಿವಿಯವನೆ ಭಕ್ತರ ಪೊರೆವನೆ ಪ್ರಣವಸ್ವರೂಪನೆ ಮುನಿಜನ ಪ್ರಿಯನೆ ಅನುದಿನವು ನಿನ್ನ ಸ್ಮರಣೆ ಭಕ್ತಿಯ ಆರಾಧನೆ ಆದಿಯಲಿ ನಿನ್ನ ಅರ್ಚನೆ ಸಕಲ ಸುರರಿಂಗೆ ಮಾಧವನೆಕರುಣಾಸಾಗರ ಲಂಬೋದರ ಲಕುಮಿಕರ ಪಾಶಾಂಕುಶಧರ ನಿನ್ನಯ ಶಕ್ತಿ ಅಪಾರ ಮಂಗಳ ಮೂರುತಿ ವಿದ್ಯಾ ಅಧಿಪತಿ ತ್ರಿಲೋಕದಲಿ ತುಂಬಿದೆ...

ಮಕ್ಕಳ ಕವಿತೆ : ಗಣಪನ ಹಾಡು

ಗಣಪನ ಹಾಡು ಚಿಕ್ಕ ಕಣ್ಣು ದೊಡ್ಡ ಕಿವಿಯ ಏಕದಂತನೆ ಡೊಳ್ಳು ಹೊಟ್ಟೆ ಆನೆ ಮುಖದ ಅಭಯ ಹಸ್ತನೆವಿದ್ಯೆ ಬುಧ್ಧಿ ನೀಡಿ ಪೊರೆವ ವಿಶ್ವವಂದ್ಯನೆ ವಿಘ್ನಹರನೆ ಶಾಂತಿದೂತನೆ ನಮಿಪೆ ಗಣಪನೆ ಭಾದ್ರಪದ ಚೌತಿದಿನ ಮನೆಗೆ ನಿನ್ನ ತರುವರು ಸಿಂಗರಿಸಿದ ಮಂಟಪದಲಿ ಇಟ್ಟು ಸಂತಸ ಪಡುವರು ಕೆಲವು ದಿನ ಭಕ್ತಿಯಿಂದ ನಿನ್ನ ಪೂಜೆಗೖವರು ವಿಘ್ನಗಳನು ದೂರ ಮಾಡು ಎಂದು ಬೇಡಿಕೊಂಬರು ಸಿಹಿ ತಿನಿಸಿ ಪಟಾಕಿ ಸಿಡಿಸಿ ಹರುಷದಿಂದ ನಲಿವರು ಕೊನೆಗೆ ನಿನ್ನನು ಬಾವಿಗೆಸೆದು ಕೇಕೆ ಹಾಕಿ ಕುಣಿವರು ಆರ್. ಎಸ್. ಚಾಪಗಾವಿ ವಾಣಿ... 8317404648...

ಕವನ : ಸ್ತಬ್ಧವಾದ ಮಳೆಯ ಅಬ್ಬರ

ಸ್ತಬ್ಧವಾದ ಮಳೆಯ ಅಬ್ಬರಸ್ತಬ್ಧವಾಯಿತು ಮಳೆರಾಯನ ಅಬ್ಬರ ಮರೆಯಾಯಿತು ಮೋಡಗಳ ರಾಶಿ ಮತ್ತೆ ಮೂಡಣದಿ ಕಂಡ ನೇಸರ ಹೊಂಬಣ್ಣದ ಕಿರಣಂಗಳ ಸೂಸಿಗೂಡು ಸೇರಿದ್ದ ವಿವಿಧ ಪಕ್ಷಿ ಕಾಶಿ ಹೊರಬಂದು ಹಾರಿತು ಪಕ್ಕ ಬೀಸಿ ಹೂ ಬಿಸಿಲಿಗೆ ಮೈ ಕೆದರಿ ಹೊರಡಿಸಿತು ಕಿಲಿಬಿಲಿ ಕೇಳಿಕಾರ್ಮೋಡದ ಕರಿ ಕತ್ತಲೆಯಲಿ ಕಳೆದು ಹೋಗಿದ್ದ ತಾರಾವಳಿ ಮತ್ತೆ ಮಿನುಗುತಿದೆ ನೋಡಿ ಹೊಸ ಉತ್ಸಾಹ ತಾಳಿಭೂ ತಾಯಿ ಹಸಿರು ಉಡುಗೆಯನುಟ್ಟು ಶೋಭಿಸುತಿಹಳು ಹರುಷ ಪಟ್ಟು ತೂಗಿ ತೊನೆಯಿತು ಹೊಲದಲ್ಲಿ ಬೆಳೆ ರೈತನ ಮೊಗದಲಿ ಮೂಡಿತು ಹೊಸ ಕಳೆಮಳೆಯೊಂದು ಸಲ ಬಿಸಿಲೊಂದು ಸಲ ಇದು ನಿತ್ಯ...

ಕವನ : ಚೆಂದುಳ್ಳಿ ಮಿಂಚುಳ್ಳಿ

ಚೆಂದುಳ್ಳಿ ಮಿಂಚುಳ್ಳಿ  ಬೆಳ್ಳಿಯ ಬಣ್ಣದವಳು ಮೊಗ್ಗಿನ ಜಡೆಯವಳು ಅಲ್ಲೂ ಇಲ್ಲೂ ಎಲ್ಲೂ ಎಲ್ಲೆಲ್ಲೂ ಕಾಣುತಿರುವೆ ಒಳಗೂ ಹೊರಗೂ ಒಳಗೊಳಗೂ ಕಾಡುತಿರುವೆ ಮನದರಸಿಯೆ ಪಟ್ಟದರಸಿಯೆ ಕಾಣುತಿರುವೆ ಕಾಡುತಿರುವೆಬಾಗಿ ಬಳುಕಿ ತುಂಬಿ ತುಳುಕಿ ಜಗದಗಲಕೆ ಪ್ರೀತಿ ಹಬ್ಬಿಸಿ ಮಿರಿ ಮಿರಿ ಮಿನುಗುವ ನಗುವ ಚೆಲ್ಲಿ ಕ್ಷಣ ಕ್ಷಣ ಅನುಕ್ಷಣ ಹಾಕಿ ಅನುರಾಗದ ರಂಗವಲ್ಲಿ ರೆಕ್ಕೆ ಬಿಚ್ಚಿ ಹಾರಿತು ಉಲ್ಲಾಸದಿ ಉಕ್ಕಿತು ಹರೆಯ ಅಲ್ಲಿಬಾಗಿಲ ಬಳಿ ಬಂದು ನಿಂದು ಮಂದಾರ‌ ಗಂಧ ತಂದು ಕತ್ತಲನು ದೂರ ಸರಿಸಿ ಎದೆಯೊಳಗೆ ಹೃದಯದೊಳಗೆ ಚೆಲ್ಲಿದೆ...

ಕವನ : ಬದುಕಬೇಕು

ಬದುಕಬೇಕು ಏನೂಂತ ತಿಳಿಯಲಿ ಕೈಕಾಲು ಚಳಿಗೆ ಸೋತುಬಂದವು ಸ್ವಲ್ಪ ಮಟ್ಟಿಗೆ ಮಲಗಿ ನಿದ್ರೆಗೆ ಜಾರಿತು ಮನಎಚ್ಚರವಾದಾಗ ಕೈ ಕಾಲು ಸ್ವಾಧೀನ ಕಳೆದುಕೊಂಡಿವೆ ತನ್ನರಿವು ಗೊತ್ತಾಗದಂತೆ ವಕ್ಕರಿಸಿತ್ತು ಪಾರ್ಶ್ವವಾಯುಮನದಲ್ಲಿ ಆತಂಕ ಏನೋ ನೋವು ಕಾಣೆಯಾದ ದಾರಿ ಯಾರಾದರೂ ಸಲಹೆ ನೀಡುತ್ತಾರೆ ಎನ್ನಲು ವೈದ್ಯಕೀಯ ಚಿಕಿತ್ಸೆ ಸಲಹೆಅಯ್ಯೋ ನಿನಗೆ ಹೀಗಾಯಿತಲ್ಲ ಎನ್ನುವ ಮನಸುಗಳಿಗೆ ಕೊರತೆಯಿರಲಿಲ್ಲ ಆದರೂ ನಡೆಯುವ ಕುಳಿತುಕೊಳ್ಳುವ ಭಾಗಗಳಲ್ಲಿ ಸ್ವಾಧೀನತೆ ಇಲ್ಲರೋಗ ಒಂದು ಕಗ್ಗಂಟು ಮನೋಸ್ಥೈರ್ಯ ಒಂದೇ ಆಶಾಕಿರಣ ಎಲ್ಲರೂ ಸಾಂತ್ವನ ಹೇಳುವರು ದೈರ್ಯ ಕಳೆದುಕೊಳ್ಳ ಬೇಡ ಎಂದುಚಿಕಿತ್ಸೆ...
- Advertisement -spot_img

Latest News

ಬಿಹಾರದಲ್ಲಿ ಇಂಡಿ ಮೈತ್ರಿ ಕೂಟಕ್ಕೆ ಅಧಿಕಾರ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು : ಬಿಹಾರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಆರ್ ಜೆಡಿ‌ ಮೈತ್ರಿಕೂಟ ಇಂಡಿ ಅಧಿಕಾರಕ್ಕೆ ಬರಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ‌ಸಚಿವರಾದ...
- Advertisement -spot_img
error: Content is protected !!
Join WhatsApp Group