spot_img
spot_img

ಕರೋನಾ ಚುಟುಕುಗಳು

Must Read

- Advertisement -

ಎಲ್ಲೆಡೆ ಕರೋನ ಭೀತಿ

ಬದುಕಾಗಿದೆ ಬಲು ಫಜೀತಿ
ಮನಸ್ಸಿಗಿಲ್ಲ ಒಂದಷ್ಟು ಶಾಂತಿ
ದಿನ ಬೆಳಗಾದ್ರ ಹಚ್ಚಿದಿ ನೀ ಚಿಂತಿ

***

- Advertisement -

ಕರೋನಾ ಕರೋನಾ
ಜಗದಾಗ ನಿನಗಿಲ್ಲ ಮಾನ
ನಿನ್ನಿಂದ ಲೋಕಕ್ಕೆ ಅವಮಾನ
ನೀ ಆಗಿದಿ ಕೊಬ್ಬಿದ ಕ್ವಾಣ॥

***

ಹಲೋ ಕರೋನ ವೈರಸ್
ನಿಂದು ಭಾರಿ ವರ್ಚಸ್
ಮಾಡಾಕ ಹತ್ತಿದಿ ಸರ್ಕಸಸ್
ಭಾರತದಲ್ಲಿ ಆಗುದಿಲ್ಲ ನೀ
ಸಕ್ಸಸ್॥

- Advertisement -

**

ನಿನ್ನಿಂದ ದುಡಿಯುವ ಕೈಗೆ
ಕೆಲಸವಿಲ್ಲ
ಹೊಟ್ಟೆ ತುಂಬ ಅನ್ನವಿಲ್ಲ
ಕಾಡು—ಮೇಡು ಅಲೆದು
ಊರ ಸೇರಿರಲ್ಲ
ಎಂದು ಅಡಗುವುದು ನಿನ್ನ
ಸೊಲ್ಲ( ಕರೋನಾ)

***

ಕಣ್ಣಿಗೆ ಕಾಣದ ಕೊರೋನಾ
ಜಗತ್ ಆಗಿದೆ ತಲ್ಲಣ
ಚಿಂತೆಯಲ್ಲಿ ಮುಳಗಿದೆ ಜನ
ನಿನ್ನ ನಿರ್ನಾಮ ಮಾಡೋದೆ ನಮ್ಮ ಪಣ॥

****

ಸರಕಾರ ಆದೇಶ ಪಾಲಿಸೋಣ
ಮನಿಯಾಗ ನಾವು ಇರೋಣ
ಮಾಸ್ಕ ನಾವು ಧರಿಸೋಣ
ಕರೋನ ಒದ್ದು ಓಡಿಸೋಣ

***

ಕರೊನಾ ನೀ ಬಲು ಕೊಟ್ಟಿ
ಲೋಕದಾಗ ನೀ ಕೆಟ್ಟಿ
ಒಂದಿನಾ ಹಾಕತ್ತಾರ
ನಿನ್ನ ಕಟ್ಟಿ
ಸಿಕ್ಕರ ಕೊಲ್ಲತ್ತಾರ
ನಿನ್ನ ಕುಟ್ಟಿ॥

*

ಹಾಕಿದಿ ನೀ ಕರೊನಾ ವಂಕಿ
ಜಗದಾಗ ಹತೈತ್ತಿ ನಿನ್ನಿಂದ ಬೆಂಕಿ.
ಎಷ್ಟ ಜನಾ ಸತ್ತಾರ ಸಿಗವಲ್ಲತ್ತು ಅಂಕಿ
ಒಂದಿನಾಕ್ಕಿ ನೀ ಒಣಗಿದ ಕಂಕಿ.

**

ಕರೊನಾ ನೀ ಬಲು ಕೊಟ್ಟಿ
ತಿಳಿವಲ್ದ ನಿನ್ನ ಗುಟ್ಟ
ಜನರಾಗ್ಯಾರ ನಿನ್ನ ಮ್ಯಾಲ
ಸಿಟ್ಟ
ಒಂದಿನ ಹಾಕತ್ತಾರ ನಿನ್ನ
ಸುಟ್ಟ॥

***

ಕರೊನಾ ಏನಬಂತ ನಿನಗ ಧಾಡಿ
ಜಗದಾಗ ಬಂದಿ ನೀ ಓಡಿ
ಜನರದ ಓಡವಲ್ದ ಗಾಡಿ
ನಿನ್ನ ಹುಗಿತ್ತೀವಿ ತೆಗ್ಗಾ ತೋಡಿ||

**

ಹೊರಗ ಬಂದ್ರ ಲಾಟಿ ಏಟ
ಮನ್ಯಾಗಿದ್ರ ಹೆಂತಿ ಕಾಟ
ನಿನ್ನ ನೆತ್ಯಾಗ ಜಡಿತ್ವಿ ಇಂಗಳ ಗುಟಾ
ಸರಳ ನೀ ಇಲ್ಲಿಂದ ದಾಟ॥

**
ತೊಡಿಸಿದಿ ಕರೊನಾ ಅಂಗಿ
ಜಗದ ಜನರ ಪ್ರಾಣಾ ನುಂಗಿ
ನಿನ್ನ ಹಿಂದ ಬಂದಾಳ ನಿಮ್ಮ ತಂಗಿ
ಇಬ್ಬರೂ ಕೂಡಿ ಊದಾಕ ಹತ್ತಿರಿ ಪುಂಗಿ

*

ಕರೊನಾ ಕಾಡಾಕಹತ್ತೈತಿ ಕರಿಕಟ್ಟಿ
ನಮ್ಮ ಆಶೆ ಆಮಿಷಗಳ ಮೆಟ್ಟಿ
ಜನ ಆಗೈತಿ ನಿನ್ನ ಸಲವಾಗಿ ಗಟ್ಟಿ
ಹಾಕತ್ವಿ ನಿನ್ನ ಒಂದಿನಾ ಕಟ್ಟಿ॥

**

ಕರೊನಾ ಕರುಣೆಯಿಲ್ಲ ನಿನಗ
ಇಲ್ಲಿಂದ ಹೊಕ್ಕಿ ನೀ ಯಾವಾಗ?
ಶಾಂತಿಯಿಲ್ಲ ಜನರ ಮನದಾಗ
ಜನ ನಿತ್ಶ ಶಾಪಾ ಹಾಕತಾರ ನಿನಗ

*
ಮೂತಿಗೆ ಹಾಕಿಸಿದಿ ಬಾಜಾಳಿಗಿ
ಜೀವನ ಆಗವಲ್ಲತ್ತ ಏಳಿಗಿ
ನಿನ್ನ ಬಿಡುದಿಲ್ಲ ಕಟ್ಟಿ ಹಾಕತ್ತಿವಿ ನಾಳಿಗಿ
ಆಮ್ಶಾಲ ಉಂತೀವಿ ಎಲ್ಲಾರು ಹೋಳಿಗಿ.

ಬಸವರಾಜ ಕೋಟಿ, ಕುಲಗೋಡ

- Advertisement -
- Advertisement -

Latest News

ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು- ಸಲೀಂ ನದಾಫ

ಬೆಳಗಾವಿ: "ಎಲ್ಲರಂತೆ ವಿಕಲಚೇತನರು ಬಾಳ್ವೆ ನಡೆಸುವಂತಾಗಬೇಕು.ವಿಕಚೇತನರಿಗೆ ಅನುಕಂಪದ ಬದಲು ಅವಕಾಶ ನೀಡುವ ಅಗತ್ಯವಿದೆ. ಶಾಲಾ ಸಿದ್ಧತಾ ಕೇಂದ್ರಗಳ ಬಲವರ್ಧನೆ ಕೂಡ ಅವಶ್ಯಕ. ಈ ತರಬೇತಿ ಸದುಪಯೋಗ...
- Advertisement -

More Articles Like This

- Advertisement -
close
error: Content is protected !!
Join WhatsApp Group