ಇದೇ ದಿ. 9 ರಂದು ಗುರುವಾರ ಮಧ್ಯಾಹ್ನ 3 ಗಂಟೆಗೆ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಬೆಳಗಾವಿ ಜಿಲ್ಲಾ ಲೇಖಕಿಯರ ವತಿಯಿಂದ ಶ್ರೀಮತಿ ಸುಮಿತ್ರಾ ಚರಂತಿಮಠ,ದಿ. ಸರಸ್ವತಿ ದೇಸಾಯಿ, ದಿ. ಬಿ.ಬಿ. ಮೇಳೆದ, ದಿ. ಶಂಕರ ಪಾನಶೆಟ್ಟಿ, ದಿ. ಮಲ್ಲಪ್ಪ ಚೌಗುಲೆ ಇವರ ಹೆಸರಿನಲ್ಲಿ ಇಡಲಾಗಿರುವ ದತ್ತಿ ನಿಧಿಯ ಪ್ರಯುಕ್ತ ‘ದತ್ತಿ ಕಾರ್ಯಕ್ರಮ’ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೊನೋಳ್ಳಿ ವಹಿಸಲಿದ್ದು, ಸಾಹಿತಿ ಆಶಾ ಕಡಪಟ್ಟಿ, ಹಮೀದಾ ಬೇಗಂ ದೇಸಾಯಿ,ಇಂದಿರಾ ಮೋಟೆಬೆನ್ನೂರ ಅತಿಥಿಗಳಾಗಿ ಭಾಗವಹಿಸುವರು. ಕಾರ್ಯಕ್ರಮದಲ್ಲಿ ವಿವಿಧ ದತ್ತಿನಿಧಿಯ ಪೋಷಕರು ಮತ್ತು ಪಾಲಕರು ಭಾಗವಹಿಸುವರು.
‘ಸ್ವರಚಿತ ಕವನ ವಾಚನ ಕಾರ್ಯಕ್ರಮ’ ಸೇರಿದಂತೆ ‘ದತ್ತಿನಿಧಿ ಹಿರಿಯರ ಸ್ಮರಣೆ ‘ಮತ್ತು ಇನ್ನಿತರ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ . ಸಾಹಿತ್ಯಾಸಕ್ತರು ಸೇರಿದಂತೆ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಘದ ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.