Homeಸುದ್ದಿಗಳುತಂಬಾಕು ಸೇವನೆ ಮಾಡಿ ಶರೀರ ಹಾಳು ಮಾಡಿಕೊಳ್ಳಬೇಡಿ- ವಿಜಯಲಕ್ಷ್ಮಿ ಮುರನಾಳ

ತಂಬಾಕು ಸೇವನೆ ಮಾಡಿ ಶರೀರ ಹಾಳು ಮಾಡಿಕೊಳ್ಳಬೇಡಿ- ವಿಜಯಲಕ್ಷ್ಮಿ ಮುರನಾಳ

ಹಳ್ಳೂರ- ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ ಸಿ ಟ್ರಸ್ಟ ಪ್ರಾಯೋಜಿತ ಮೂಡಲಗಿ ರೂರಲ್ ವಲಯದ ಹಳ್ಳೂರ ಕಾರ್ಯಕ್ಷೇತ್ರದ ಪ್ರೇರಣ ಜ್ಞಾನವಿಕಾಸ ಕೇಂದ್ರದಡಿಯಲ್ಲಿ ಗ್ರಾಮದ ಶ್ರೀ ದ್ಯಾಮವ್ವ ದೇವಸ್ಥಾನದಲ್ಲಿ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಆಯೋಜನೆ ಮಾಡಲಾಯಿತು.

ಸದರಿ ಕಾರ್ಯಕ್ರಮವನ್ನು ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಕೌಸರ್ ಹಣಗಂಡಿ ಹಾಗೂ ಮೇಲ್ವಿಚಾರಕರಾದ  ರವಿ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆಯನ್ನು ನೀಡಿದರು.

ನಂತರದಲ್ಲಿ ಜ್ಞಾನವಿಕಾಸ ಸಮನ್ವಯಾಧಿಕಾರಿಯದ ಶ್ರೀಮತಿ ವಿಜಯಲಕ್ಷ್ಮಿ ಅವರು ಮಾತನಾಡಿ ತಂಬಾಕು ಸೇವನೆಯಿಂದ ರೋಗಕ್ಕೆ ತುತ್ತಾಗಿ ನಮ್ಮ ಶರೀರವನ್ನು ನಾವೇ ಹಾಳು ಮಾಡಿಕೊಂಡಂತಾಗುತ್ತದೆ ದೂರವಿದ್ದರೆ ಒಳ್ಳೆಯದು.ತಂಬಾಕು ವಿರೋಧಿ ದಿನಾಚರಣೆಯ ಮಹತ್ವ ತಂಬಾಕುವಿನಿಂದ ಸೇವನೆಯಿಂದ ಆಗುವ ದುಷ್ಪರಿಣಾಮಗಳು, ಯುವಜನತೆ ಅದರಿಂದ ದೂರವಿರಲು ಸಲಹೆ ನೀಡಿ ಯಾವ ಕ್ರಮಗಳನ್ನು ಅನುಸರಿಸಬೇಕು ಹಾಗೂ ಸಮುದಾಯದಿಂದ ಅದನ್ನು ಹೋಗಲಾಡಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿ ಮಾರ್ಗದರ್ಶನ ನೀಡಿದರು.

ವಲಯದ ಮೇಲ್ವಿಚಾರಕರಾದ ರವಿ ಅವರು ಮಾತನಾಡಿ ಸ್ವಸಹಾಯ ಸಂಘಗಳ ಗುಣಮಟ್ಟದ ಕಾಪಾಡಿಕೊಳ್ಳುವುದು, ಸದಸ್ಯರ ಆದ್ಯ ಕರ್ತವ್ಯವಾಗಿದೆ. ವಾರದ ಸಭೆಯ ಮಹತ್ವ ಹಾಗೂ ಹಣ ಸಂಗ್ರಹಣೆ ಮತ್ತು ಲೀಡ್ ಆಪ್ ಬಗ್ಗೆ ಮಾಹಿತಿ ನೀಡಿದರು.

ಪ್ರಶ್ನೋತ್ತರಗಳ ಚರ್ಚೆ ನಡೆದು ಕಾರ್ಯಕ್ರಮವನ್ನು ಮುಕ್ತಾಯಗೊಳಿಸಲಾಯಿತು. ಈ ಸಮಯದಲ್ಲಿ ಸೇವಾ ಪ್ರತಿನಿಧಿ ಮಾಲಾ ಮೇತ್ರಿ. ಸೇರಿದಂತೆ ಸಂಘದ ಸರ್ವ ಸದಸ್ಯರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

error: Content is protected !!
Join WhatsApp Group