spot_img
spot_img

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ ; ರಂಗ ರೂಪಾಂತರ ಭಾಗ – ೨

Must Read

spot_img
- Advertisement -

ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ
ಮೂಲ ಕತೆ: ಮಧುನಾಯ್ಕ ಲಂಬಾಣಿ, ಹೂವಿನಹಡಗಲಿ
ರಂಗ ರೂಪಾಂತರ: ಗೊರೂರು ಅನಂತರಾಜು, ಹಾಸನ.

ದೃಶ್ಯ; ೧ (ಊರ ದೇವರ ಗುಡಿ. ಪೂಜಾರಿ ಕಸ ಗುಡಿಸುತ್ತಿರುವನು)
ಹಿನ್ನೆಲೆ ಧ್ವನಿ: ಕೈಯಾಗ ಕಸಬರಗಿ ಹಿಡಕೊಂಡು ಗುಡಿಮುಂದ್ಲ ಕಸ ದೂರಸರಿಸುತ್ತಿದ್ದಾನಲ್ಲ ಈ ಪೂಜಾರಿ ಈತನ್ನೊಳಗಿನ ಕಸ ಮಾತ್ರ ರಾಶಿ ರಾಶಿ ಬಿದ್ದು ಕೊಳಿತಿತ್ತು. ಗುಡಿ ಮುಂದಿರುವ ಕಸ ಒಂದಿನದ್ದು ಆದ್ರೆ ಇವನ ಮನಸ್ಸಿನಲ್ಲಿರುವುದು ಎಷ್ಟೋ ವರ್ಷಗಳ ಕಸ. ಗುಡಿ ಮುಂದಿರುವ ಕಸವನ್ನು ದೂರವಾದ್ರು ಸರಿಸಬಹುದು ಇವನ ಅಂತರಂಗದಲ್ಲಿರುವ ಕಸ ಮಾತ್ರ ಗಬ್ಬುನಾತ..
(ತಂಬಿಗೆಯಲ್ಲಿನ ನೀರನ್ನು ಅಂಗಳಕ್ಕೆ ಚಿಮುಕಿಸುತ್ತಿದ್ದ ಅವನ ಮುಖ ಭಾವದಲ್ಲಿ ಬದಲಾವಣೆಯಾಗುತ್ತಿತ್ತು)
ಪೂಜಾರಿ: ಸುಡುಗಾಡು ಊರ‍್ನಾಗ ಪೂಜಾರಿಕೆ ಮಾಡಿದ ನಾನು ಸಣ್ಣಾಗಿ ಬಿಟ್ಟೆ. ನಾವು ನಮ್ಮಜ್ಜ ಮುತ್ತಜ್ಜರ ಕಾಲದಿಂದ ಈ ದೇವ್ರನ್ನ ಸಾಕಿ ಸಲುಹಿದ್ವಿ. ಹೆತ್ತವರ ಸೇವೆ ಮಾಡಲಿಲ್ಲದ್ಹಾಂಗ ಈ ದೇವ್ರು ಪೂಜೆ ಮಾಡಿದ್ವಿ. ನಮಗೆ ಸಿಕ್ಕಿದ್ದೇನು.. ಯಾವುದಾದರೂ ದೊಡ್ಡ ದೇವಸ್ಥಾನದಾಗ ನಾ ಪೂಜಾರಿ ಆಗಿದ್ರ ದಿನಾ ರೂಪಾಯಿ ನೋಡ್ತಿದ್ದೆ. ಇಲ್ಲೇನೈತಿ ಮಣ್ಣು. ಖರೇವಂದ್ರ ದೇವ್ರಾಗಿದ್ರ ನಮ್ಮ ಸೇವೆ ಅವಕ್ಕ ಗೊತ್ತಾಗ್ತಿದ್ದಿಲ್ಲೇನು. ನಾನು ಪೂಜಾರಿ ಅಂತ ಈ ಮಂದಿ ಎಳ್ಳಷ್ಟು ಗೌರವ ಕೊಡಂಗಿಲ್ಲ. ಮೇಲತ್ತಾಗಿ ಗೇಲಿ ಮಾಡ್ತಾರ. ವರ್ಷದಾಗೊಮ್ಮೆ ಮಾತ್ರ ಜಾತ್ರಿ ಅಂತ ಮಾಡ್ತಿದ್ರು. ಈಗ ಅದೂ ಇಲ್ಲ. ಒಂದಿನ ಕಸ ಅನ್ನಲಿಲ್ಲಾಂದ್ರ ಸಣ್ಣವ್ರು ದೊಡ್ಡಾವ್ರು ಬೈಯ್ತಾರ. ದೊಡ್ಡ ದೇವರು, ದೊಡ್ಡ ದೇವಸ್ಥಾನ, ದೊಡ್ಡೂರು, ಶ್ರೀಮಂತ ಮಂದಿ ಇದ್ರ ಆ ಕಥೀನ ಬೇರೆ. ನನ್ನ ಕೈ ಹಿಡಿಯರ‍್ಯಾರು. ಈಗಾದ್ರು ಏನು ಆಗಿಲ್ಲ. ಇದ ಊರಾಗ ಏನೆಲ್ಲಾ ಮಾಡ್ಬಹುದು. ಈ ಮಂದಿ ಸರಿಯಿಲ್ಲ. ದೇವ್ರು ಮೇಲೆ ಭಕ್ತಿ ಇಲ್ಲ. ಭಕ್ತಿ ಇದ್ದೊರ‍್ನು ಕೆಡಿಸಿಬಿಡ್ತಾರ. ಸುಡುಗಾಡಿನ್ಯಾಗ ದೆವ್ವಗಳು ಮಾತಾಡ್ತಾವಂತ, ನಗತಾವಂತ, ಹಾಡತಾವಂತ, ಕುಣಿತಾವಂತ, ಒಟ್ಟಿಗೆ ಸೇರಿ ತಿರುಗಾಡತಾವಂತ. ಇವಕ್ಕೇನಾಗೈತಿ ಒಂದೂ ಸರಿಯಿಲ್ಲ. ಒಬ್ನ ಮಾರಿ ಒಬ್ರು ನೋಡಂಗಿಲ್ಲ. ನೋಡಿದ್ರು ನುಡಿಯಂಗಿಲ್ಲ. ನುಡಿದ್ರು ನಡೆಯಂಗಿಲ್ಲ. ನಡದ್ರೂ ಏನೂ ಆಗಂಗಿಲ್ಲ. ಇಂಥ ಊರಾಗ ಇರಾಕ ಮನಸ್ಸಿಲ್ಲ. ಸತ್ತೋರಲ್ಲ ಸುಡುಗಾಡಿನ್ಯಾಗ ಚೆಂದ ಆದಾರ. ಶಾಂತವಾಗಿ ಅದಾರ. ಅವ್ರ ಮನಸ್ಸುಗಳು ಸ್ವಚ್ಛ ಅದಾವು. ಅವರೆಲ್ಲಾ ಅರಾಮಾಗಿಬಿಟ್ರು. ಯಾವ ಜಂಜಾಟ ಇಲ್ಲ. ಸಿಟ್ಟಿಲ್ಲ. ಸೆಡುವಿಲ್ಲ, ಆಸಿಲ್ಲ, ಏನಾರ ಅನ್ನು ಸುಡುಗಾಡ ವಾಸಿ.

ಹಿನ್ನೆಲೆ ಧ್ವನಿ: ಪೂಜಾರಿ ಗರ್ಭಗುಡಿಯನ್ನು ತೊಳೆದು ನೀರನ್ನು ತಂದು ಹೊರಗೆ ಚೆಲ್ಲಿದ. ತಾನು ಸ್ನಾನ ಮಾಡಿದ್ನೋ ಇಲ್ಲೋ ಗೊತ್ತಿಲ್ಲ. ಆ ದೇವ್ರಿಗಂತು ನೀರಾಕಿ ತೊಳೆದು ನಂತರ ಹಾಲಿನಿಂದ, ತುಪ್ಪದಿಂದ, ಹಣ್ಣಿನಿಂದ, ತೊಳೆದು ಸ್ನಾನ ಮಾಡಿಸಿದ. ಕೊರಳಿಗೆ ಹೂವಿನ ಹಾರ ಹಾಕಿ ಅಲಂಕಾರ ಮಾಡಿದ.

- Advertisement -

ಪೂಜಾರಿ: ಈ ದೇವರಿಗೇಕೆ ಸ್ನಾನ ಮಾಡಿಸಬೇಕು, ಪೂಜೆ ಮಾಡಬೇಕು, ಭಜನೆ ಮಾಡಬೇಕು. ಏನೆಲ್ಲ ಮಾಡಬೇಕು. ಆದರೆ ಏತಕ್ಕೆಂದರೆ ನಮ್ಮ ನೆಮ್ಮದಿಗಾಗಿ, ಧರ್ಮಕ್ಕಾಗಿ ಎನ್ನುತ್ತಾರೆ ಹಿರಿಯರು. ಆದರೂ ಈ ದೇವರೇನಾದ್ರು ನನಗೊಂದಿಷ್ಟು ದರ್ಶನ ಕೊಟ್ಟು ಪವಾಡ ಮಾಡೋದನ್ನೇನಾದ್ರು ಹೇಳಿಕೊಟ್ರೆ ಸಾಕು ನಮ್ಮನೆತನ ಇಷ್ಟು ವರ್ಷ ಸಲ್ಲಿಸಿದ ಸೇವೆ ಸಾರ್ಥಕವಾಗಿ ಬಿಡುತ್ತೆ. ಮನಿಯೊಳಗಿನ ವಸ್ತುಗಳೆಲ್ಲವನ್ನು ಮಾಯ ಮಾಡುವುದು ಅದು ಇಲ್ಲೆ ಇದೆ ಅಂತ ಹೇಳಿ ನಾನು ಪವಾಡ ಪುರುಷನಾಗುವುದು.. ನನ್ನ ಮೂಲಕನಾದ್ರು ದೇವ್ರು ಇದ್ದಾನೆ ಅನ್ನೋದನ್ನ ಸಾಬೀತುಪಡಿಸಬಹುದಲ್ಲ ಏನೇ ಕೆಲಸ ಮಾಡಿದ್ರು ಅದರಾಗ ಸ್ವಾರ್ಥ ಇರತೈತಿ. ಹಂಗಾದ್ರೆ ನಾ ಮಾಡಿದ್ದೇನು.. ಅದರಿಂದ ಪಡೆದಿದ್ದೇನು.. ಸ್ವಾರ್ಥವಿಲ್ಲದ ಸೇವೆ ಮಾಡಿದ್ರ ಈಗಿನ ಕಾಲ್ದಾಗ ಮಣ್ಣು ತಿನ್ನಬೇಕಾಗತೈತಿ.

ಹಿನ್ನೆಲೆ ಧ್ವನಿ: ಎಡಗೈಯಾಗ ಗಂಟಿ ಹಿಡದಾನ. ಬಲಗೈಯಾಗ ಆರತಿ ಹಿಡದಾನ. ಮಂತ್ರ ಹೇಳ್ತಾನ ಯಾವ ಮಂತ್ರ, ಯಾರ ಮಂತ್ರ ಅನ್ನೋದೇನು ಅವನರಿವಿಗೆ ಬರುತ್ತಿಲ್ಲ. ಸುಮ್ನ ದೇವ್ರಿಗೆ ಗುಡಿ ಬಾಗಿಲಿಗೆ ಬೆಳಗತಾನ.
ಪೂಜಾರಿ: ಇದರಂಗ ಬೇರೆ ಊರಾಗೇನಾದ್ರು ಆರತಿ ತಟ್ಟಿ ಹಿಡದ್ರ ಐವತ್ತು, ನೂರು ರೂಪಾಯಿ ಸಿಗುತ್ತಿದ್ದು. ಇಲ್ಲಿ ಖಾಲಿ ತಟ್ಟೆ. ಖಾಲಿ ಗಂಟೆ. ಖಾಲಿ ದೇವ್ರು. ಖಾಲಿ ಪೂಜೆ, ಖಾಲಿ ಖರ್ಚು ಹಿಂಗಾದ್ರೆ ನಮ್ಮ ಹೊಟ್ಟಿ ಖಾಲಿ ಆಗತೈತಿ. ಸ್ವಲ್ಪ ದಿನ ನೋಡಿ ಈ ಚಾಕ್ರಿ ಬಿಡಬೇಕು.

ಕತ್ತಲು…….  ಕತೆಗಾರ: ಪೂಜಾರಿ ಹಚ್ಚಿದ ಊದಿನಕಡ್ಡಿ ಬಿಟ್ರೆ ಆ ಗುಡಿಗೆ ಯಾರೂ ಕೂಡ ಊದಿನಕಡ್ಡಿ ಹಚ್ಚುವುದಿಲ್ಲ. ಯಾರೂ ಕೂಡ ಈ ದೇವ್ರಿಗೆ ಕೈ ಮುಗಿಯುವುದಿಲ್ಲ. ಈ ಗುಡಿಯ ಹತ್ರನೂ ಸುಳಿಯುವುದಿಲ್ಲ. ಈ ಗುಡಿಗೆ ಸುಣ್ಣ ಬಣ್ಣ ಹಚ್ಚಿ ಹತ್ತು ವರ್ಷಾತು. ತಗಲುವ ಖರ್ಚು ವೆಚ್ಚದ ಲೆಕ್ಕ ಮಾಡೋರಿಲ್ಲ. ಅದನ್ನ ಕೊಡೋರಿಲ್ಲ. ಇನ್ನೇನು ಗುಡಿ ಬೀಳಾಗತೈತಂತ ತಲತಲಾಂತರದಿಂದ ಪೂಜಾರ‍್ಕಿ ಮಾಡ್ಕೊಂದು ಬಂದಿರೋದಕ್ಕ ಈ ಪೂಜಾರಿಗೆ ಬಿಡುಗಡೆ ಇಲ್ಲಾಂತ ಕಸ ಅನ್ನಾಕ ರ‍್ತಾನ ಆತನೂ ಮನಸ್ಸಿನ ತುಂಬಾ ಕಸ ತುಂಬಿಕ್ಕೊಂಡರ‍್ತಾನ. ಇಲ್ಲಿ ಯಾರೂ ಕೂಡ ಮನುಷ್ಯರಾಗಿ ಉಳಿದಿಲ್ಲ. ಎಲ್ಲರೂ ಸುಡುಗಾಡಿನ್ಯಾಗಿರೋ ದೇವ್ರುಗಳಾಗಿ ಬಿಟ್ಟಾರ.

- Advertisement -

ದೃಶ್ಯ-೨

ಊರಗೌಡ: ನನ್ನ ಹೊಲದ ಕಡೆ ಯಾರೂ ಹೆಜ್ಜೆ ಹಾಕಬಾರ‍್ದು. ಹಂಗೇನಾದ್ರು ಮಾಡಿದ್ರ ಈ ಸಾರಿ ಕಡ್ದು ಹಾಕಿ ಜೇಲಿಗೆ ಹೋಗ್ತಿನಿ. ನನ್ನ ಮೇಲೆ ಪೊಲೀಸ್ರಿಗೆ ಜಾಡಿ ಹೇಳಿದವ್ರು ಯಾರಂತ ಇವತ್ತಲ್ಲ ನಾಳೆ ನನಗ ಖಂಡಿತ ತಿಳಿತೈತಿ ಆವಾಗ ಮಾಡ್ತೀನಿ. ಜೈಲಂದ್ರ ನನಗೇನು ಭಯ ಇಲ್ಲ. ನನ್ನ ಹೊಲ ನನ್ನ ಮಾತು
(ಪೂಜಾರಿ ಪೂಜೆ ಮುಗಿಸಿಕೊಂಡು ಬರುತ್ತಾನೆ) ಲೇ ಪೂಜಾರಿ ಬಾ ಇಲ್ಲಿ.

ಪೂಜಾರಿ: (ಸ್ವಗತ) ದುರ್ಮಾರ್ಗ ನಿನ್ನಿಂದ್ಲೆ ಊರು ಹಾಳಾಗಿರೋದು (ಪ್ರಕಟ) ಬಂದೆ ಗೌಡ್ರೆ
ಊರಗೌಡ: ನಾಳೆಯಿಂದ ನೀನು ಪೂಜೆ ಮಾಡಾಕ ಬರಬೇಡ. ಪೂಜರ‍್ಕಿ ಬಿಟ್ಟುಬಿಡು.
ಪೂಜಾರಿ: ಯಾಕ್ರೀ? ಪೂಜಿನಾ ನೀವು ಮಾಡ್ತಿರೇನು.?
ಊರಗೌಡ: ನಾನು ಮಾಡಂಗಿಲ್ಲ. ನೀನು ಮಾಡ್ಬೇಡ. ಆ ಗುಡಿ ಹತ್ರ ಯಾರೂ ಹೋಗುವ ಹಾಗಿಲ್ಲ ತಿಳಿತಾ.
ಪೂಜಾರಿ: ಅಲ್ರಿ ಗೌಡ್ರೆ, ನಮ್ಮ ಅಜ್ಜ ಮುತ್ತಜ್ಜರು ಆ ದೇವ್ರ ಚಾಕ್ರಿ ಮಾಡ್ಕೋತ ಬಂದಾರ. ಈಗ ಬಿಟ್ಟುಬಿಡು ಅಂದ್ರ ಹೇಂಗ ಹೇಳ್ರಿ..

ಊರಗೌಡ: ನಾನು ಈ ಊರ ಗೌಡ ಹೇಳಿದ್ಹಾಂಗ ಕೇಳು..
ಪೂಜಾರಿ: ಊರಗೌಡ್ರಾಗಿ ಪೂಜಿ ಮಾಡ್ಬೇಡ ಅಂದ್ರ ಹೆಂಗ್ರಿ..
ಊರಗೌಡ: ಮಾಡ್ಬಾರದಂದ್ರ ಮಾಡಬರ‍್ದು. ಗುಡಿ ಹಾಳಾಗಿ ಹೋಗ್ಲಿ. ನಮಗ ದೇವ್ರು ಬೇಡ, ದಿಂಡ್ರು ಬೇಡ. ನಮ್ಮ ಮನಿತನನೂ ಗೌಡ್ಕಿ ಮಾಡ್ಕೊಂಡು ಬಂದೈತಿ. ಗೌಡ್ಕಿ ಮಾಡಿದ ವಂಶಕ್ಕೆ ಈ ಊರ ಜನ ಕೊಟ್ಟ ರ‍್ಯಾದಿ ಏನು? ನನ್ನ ಮೇಲೆ ಚ್ಯಾಡ ಹೇಳ್ಯಾರ, ಜೇಲಿಗೆ ಹಾಕ್ಸಾö್ಯರ. ನನಗಿನ್ನೇನು ಮಾಡ್ಬೇಕಂತಿ. ಇವತ್ತಲ ನಾಳೆ ನಿನಗೂ ಇದೇ ಗತಿ ಬರತೈತಿ. ಅದಕ್ಕ ಸೇವಾ ಮಾಡೋದನ್ನ ನಿಲ್ಸಿಬಿಡು..

ಪೂಜಾರಿ: ಗೌಡ್ರೆ, ದೇವ್ರ ಮೇಲೆ ನಾವು ಕೋಪ ಮಾಡ್ಬರ‍್ದು. ಆತನನ್ನು ನಂಬಬೇಕು. ಆವಾಗ್ಲೆ ನಮಗೆ ಶಾಂತಿ ನೆಮ್ಮದಿ ಸಿಗೋದು..
ಊರಗೌಡ: ನನ್ನೆದುರಿಗೆ ನಿನ್ನ ಪುರಾಣ ಊದಬೇಡ. ನೀನು ಎಂಥಾವ್ನು ಅನ್ನೋದು ನನಗೆ ಚೆನ್ನಾಗಿ ಗೊತ್ತು. ಮನೆ ಮುರುಕ ನೀನು. ಸುಳ್ಳು ಹೇಳಿ ಸಮಾಧಾನ ಆಗೋನು. ಪೂಜೆ ಮಾಡಿ ತೃಪ್ತಿಯಾಗೋನಲ್ಲ ನೀನು. ಸಂಸಾರಗಳನ್ನು ಸರ್ವನಾಶ ಮಾಡಿ ಶಾಂತಿಯಿAದಿರೋನು ನೀನು. ನಿನ್ನ ಬಗ್ಗೆ ನನಗೊತ್ತಿಲ್ಲ ಅಂತ ತಿಳ್ಕೊಂಡಿ ಏನು? ಮೊದ್ಲು ನಾನು ಹೇಳಿದಷ್ಟು ಮಾಡು. ಇಲ್ಲಂದ್ರೆ ನಾ ಮಾಡೋದೆ ಬೇರೆ.. (ನಿರ್ಗಮನ)
ಕತ್ತಲು

ಚಾಮ: ಹಳೇವು ಎರಡು ಕತ್ರಿ, ಇಡೀ ಊರಮಂದಿ ಗಡ್ಡ ಬೋಳ್ಸೋ ಬ್ಲೇಡು. ಸವೆದಿರುವ ಕನ್ನಡಿ. ಈ ಹಳೇಪೆಟ್ಟಿಗೆ ಇಟ್ಟುಕೊಂಡು ಕರೆದಲ್ಲಿಗೆ ಹೋಗಿ ಅವರು ಹೇಳಿದ ದಾಡಿ ತಲೆ ಕೆರೆಯುವುದು ನನ್ನ ಕೆಲಸ.
ಮುದುಕ: ಚಾಮ, ಇದೇ ನನ್ನ ಕಡೆ ಕಟಿಂಗ್ ಅಂತ ಕಾಣ್ಸುತ್ತೆ. ಯಾಕಂದ್ರ ಆರು ತಿಂಗಳಿಗೊಮ್ಮೆ ನನ್ನ ಸರದಿ ಬರುತೈತೆ. ಇನ್ನು ಆರು ತಿಂಗಳಾಗುದ್ರಾಗ ನಾನು ರ‍್ತಿನೋ ಇಲ್ಲೋ ಅನ್ನೋ ಅನುಮಾನ.
ಚಾಮ: (ಸ್ವಗತ) ಇವ್ರ ದಾಡಿ, ಮೀಸೆ ಬೋಳ್ಸಿ ಬೋಳ್ಸಿ ನಾನು ಬೋಳಾಗಿ ಹೋದೆ. ಇದರಿಂದ ಯಾವ ಸುಖಾನೂ ನನಗೆ ಸಿಗಲಿಲ್ಲ. ಒಂದು ರೂಪಾಯಿನೂ ಉಳಿಲಿಲ್ಲ. ವರ್ಷಕ್ಕೊಮ್ಮೆ ಇವ್ರು ಕೊಡೊ ಕಾಳು, ಕಡಿ ನನ್ನ ಸಂಸಾರಕ್ಕ ಸಾಕಾಗುತ್ತಿಲ್ಲ. ಹೆಂಡ್ರು ಮಕ್ಳು ಕೂಲಿಗೆ ಹೋಗ್ಬೇಕು. ಮುಂಜಾನಿಯಿAದ ಸಂಜೆವರೆಗೂ ಕತ್ತರಿಸಿದ್ರು ನೂರು ರೂಪಾಯಿ ಸಿಗಂಗಿಲ್ಲ. ಒಂದಿನಾನು ಪುರುಸೊತ್ತಿಲ್ಲ. ಕಾಯಿಲೆ ಕಸಾಲೆ ಅಂತೇನರ ಮನಿಯಾಗ ಕುಂತ್ರ ಮನೀಗೆ ಬಂದು ಬೈಯ್ದು ಕರಕೊಂಡು ಹೋಗ್ತಾರ.

ಮುದುಕ: ನೀನು ಆರು ತಿಂಗಳಿಗೊಮ್ಮೆ ಬದಲಿ ಮಾಡೋ ಬ್ಲೇಡು. ಸಾಣೆ ಹಿಡಿಯದಿರೋ ಕತ್ತರಿ. ಧೂಳು ತುಂಬಿರೋ ಕಟ್ಟಿಗೆಯ ಸಣ್ಣ ಪೆಟ್ಟಿಗೆ. ಇವೇ ನಿನ್ನ ಬಂಡವಾಳ ಹೌದ..
ಚಾಮ: ಸುಮ್ಮನೆ ಕುಕ್ಕರಬಡಿ ಅಜ್ಜ. ನನಗಿನ್ನ ಬಹಳ ಕೆಲ್ಸ ಐತಿ. ಆ ಊರಗೌಡ ಕಾಯ್ತ ಅವ್ನೆ..
ಕತ್ತಲು
ಚಾಮ: ನಾನು ದೊಡ್ಡ ನಗರದಲ್ಲಿ ಒಂದು ಕಟಿಂಗ್ ಶಾಪ್ ಮಾಡ್ಬೇಕು. ಅಲ್ಲಿ ನಾನೇ ಓನರ್. ನನ್ನ ಕೈಕೆಳಗೆ ಏಳೆಂಟು ಹುಡುಗರು ಬಿಡುವಿಲ್ಲದ ಕೆಲಸ. ಸಾವಿರಾರು ರೂಪಾಯಿ ಸಂಪಾದ್ನೆ. ದೊಡ್ಡ ಮನೆ ಕಟ್ಟಿಸಿಕೊಂಡು ಕಾರು, ಬೈಕು ತೆಗೆದುಕೊಂಡು ರಾಜನ ಹಾಗೆ ಮೆರೆದ್ರೆ ಹೆಂಗಿರುತ್ತೆ..ಇಷ್ಟು ದಿನ ನನ್ನ ಕೈಯಿಂದ ಕೂದಲು ಕತ್ತರಿಸಿಕೊಂಡವರೆಲ್ಲರೂ ನನ್ನ ನೋಡಿ ಬಾಯಿ ಮೇಲೆ ಬೆರಳಿಡುವಂತಾಗುತ್ತದೆ.
ಊರಗೌಡ : ಲೇ ನೀನು ನಾಳೆಯಿಂದ ಚೌರ ಮಾಡ್ಬೇಡ.
ಚಾಮ: ಯಾಕ್ರಿ ಗೌಡ್ರ.. ನಿಮ್ಮ ತಲಿ ಬೋಳ್ಸೋಕೆ ಯಾರಾದ್ರು ಹೊಸಬ್ರು ಬಂದಾರೇನ್ರಿ..

ಊರಗೌಡ: ಅದೆಲ್ಲ ಏನಿಲ್ಲ. ನೀನು ಮಾತ್ರ ಯಾರ ತಲಿ ಬೋಳಿಸಬೇಕಾಗಿಲ್ಲ..
ಚಾಮ: ಮತ್ತ ನಾ ಏನ್ ಮಾಡ್ಲಿ..
ಊರಗೌಡ: ಚೌರ ಮಾಡೋದ್ನ ಬಿಟ್ಟು ಕೂಲಿ ಮಾಡು. ನಾ ಈ ಊರ ಗೌಡ ಹೇಳ್ತೀನಿ ನಾಳೆಯಿಂದ ಬಂದ್ ಮಾಡಿಬಿಡು ತಿಳಿತಾ..
ಚಾಮ: ನಾ ಚೌರ ಮಾಡ್ಲಿಲ್ಲ ಅಂದ್ರ ನಡಿಯೋದಿಲ್ರಿ. ಅದನ್ನ ಬಿಟ್ರೆ ನನಗೆ ಬೇರೆ ಕೆಲ್ಸ ಏನೂ ಬರಂಗಿಲ್ಲ. ನಾ ಹೆಂಗ್ ಮಾಡ್ಲಿ..
ಊರಗೌಡ: ನನಗೂ ಅಷ್ಟ ಊರ ಗೌಡ್ಕಿ ಮಾಡೋದು ಬಿಟ್ಟು ಬೇರೆ ಏನೂ ಬರಂಗಿಲ್ಲ. ಆದ್ರ ನಾನು ಈ ಊರ ಗೌಡ ಅದೀನಂತ ನನಗೆ ಈ ಊರ ಜನ ಕೊಟ್ಟ ರ‍್ಯಾದಿ ಏನು. ನನಗೇನು ಸಿಕ್ತು. ಜೈಲಿಗೆ ಹೋದೆ. ನನ್ನ ಮಾನ ಹೋತು. ಇನ್ನೇನು ಆಗ್ಬೇಕು. ಊರ ಸೇವೆ ಮಾಡಿದ್ರ ಹಿಂಗ ಆಗೋದು. ಅದಕ್ಕ ನೀನು ಈ ಊರು ಸೇವೆ ಮಾಡ್ಬೇಡ. ನಿನಗೂ ಮುಂದ ಹಿಂಗಾಗತೈತಿ. ಈ ಊರ ಜನ ಸರಿ ಇಲ್ಲ ಬಿಟ್ಟುಬಿಡು.
ಚಾಮ: ಆತ್ರಿ ಗೌಡ್ರೆ..
ಕತ್ತಲು

ನಿರೂಪಕ-೧: ಊರಗೌಡ ತನಗಾದ ಅವಮಾನ ತಡೆಯಲಿಕ್ಕಾಗದೇ ಬಡಬಡಿಸುತ್ತಿದ್ದ. ಊರ ತುಂಬಾ ಗೌಡನ ಸುದ್ದಿ. ಗೌಡ ಹಿಂಗAದ ಹೀಂಗ ಬೈದ. ಹಿಂಗ ಮಾಡ್ತಾನಂತ, ಹೊಡಿತಾನಂತ.. ಇವೇ ಸುದ್ಧಿಯಿಂದ ಊರು ಮತ್ತಷ್ಟು ನಲುಗಿಹೋತು. ಆ ಊರಿಗೆ ಯಾವ ಬೀಗರು ಬರುತ್ತಿರಲಿಲ್ಲ. ಇತ್ತೀಚಿಗೆ ಆ ಊರಾಗ ಹೆಣ್ಣು ಕೊಡೊರಿಲ್ಲ. ತಗೋರಿಲ್ಲ. ಹೆಣ್ಣು ಯಾಕ ಕೊಡ್ತಿದ್ದಿಲ್ಲ ಅಂದ್ರ ಈ ಊರಾಗ ಸುಡುಗಾಡಿಲ್ಲ. ತಗೋತಿದ್ದಿಲ್ಲ ಅಂದ್ರ ಇಲ್ಲಿ ಇರೋರು ಯಾರೂ ಒಬ್ಬರಿಗೊಬ್ಬರು ಸಂಬAಧವಿಲ್ಲದAತಿರುತ್ತಿದ್ದರು. ಹೆಣ್ಣು ಮಕ್ಕಳು ಹಂಗ ಉಳದ್ರು. ಗಂಡು ಹುಡುಗ್ರು ಹಂಗ ಉಳದ್ರು. ಮದುವಿಕಾಲ ಬಂದ್ರೂ ಮದುವಿ ಆಗಲಿಲ್ಲ. ಹೆತ್ತವರು ದು:ಖದಲ್ಲಿ ಮುಳುಗಿದರು. ವಯಸ್ಸಿಗೆ ಬಂದ ಗಂಡು ಹೆಣ್ಣು ತಮಗೆ ತಿಳಿದವ್ರ ಜೋಡಿ ಓಡಿ ಹೊಗಾಕ ಶುರು ಮಾಡಿದ್ರು. ಅವತ್ತು ಅವ್ರು ಹೋದ್ರು. ನಿನ್ನೆ ಇವ್ರು ಹೋದ್ರು ಅನ್ನೋದು ದಿನಂಪ್ರತಿ ಸುದ್ಧಿಯಾಗುತ್ತಿತ್ತು. ಒಬ್ರು ಹೋಗಿದ್ನ ನೋಡಿ ಇನ್ನೊಬ್ರು ಹೋದ್ರು. ಅವ್ರು ಹೋದ್ರಂತ ಇನ್ನಿಬ್ರು ಹೋದ್ರು. ಹಿಂಗಾ ಯುವಕ ಯುವತಿಯರು ತಮಗೆ ಬೇಕಾದವ್ರನ್ನ ಕರಕೊಂಡು ಹೊರಟುಹೋಗುತ್ತಿದ್ರು. ಓಡಿಹೋದವರು ತಾಳಿಕಟ್ಟಿಕೊಂಡು ಮತ್ತೆ ಬರುತ್ತಿದ್ದರು. ಕೆಲವು ಅಲ್ಲೇ ಉಳಿದುಬಿಡುತ್ತಿದ್ರು. ಇಲ್ಲಿ ಜಗಳ ಮಾಡಿದ್ರ ಬಿಡಿಸೋರಿಲ್ಲಂತ ಜಗಳಾಡಂಗಿಲ್ಲ.
ನಿರೂಪಕ-೨: ಈ ಉರಾಗ ಜಗಳಾನ ಇಲ್ಲ. ಯಾಕಂದ್ರ ಒಬ್ಬರ ತಂಟೆಗೆ ಒಬ್ರು ಹೋಗಂಗಿಲ್ಲ. ಒಬ್ಬರನ್ನೊಬ್ಬರು ಮಾತಾಡಸಂಗಿಲ್ಲ. ಅಂದ ಮೇಲೆ ಜಗಳ ಎಲ್ಲಿಂದ ಬರುತ್ತೆ. ಈ ಊರನ್ನೆ ಬಿಟ್ಟು ಹೋಗಬೇಕು ಅಂದ್ರ ತಮಗಿರುವ ಆಸ್ತಿಗೋಸ್ಕರ ಮತ್ತೆ ಇಲ್ಲೆ ಇರತೊಡಗುತ್ತಿದ್ದರು. ಆಸ್ತಿ ಇಲ್ಲದವರಂತೂ ಯಾರು ಇಲ್ಲಿ ಇರುತ್ತಿಲ್ಲ. ಮನೆಗೆ ಬೀಗ ಹಾಕಿ ಊರು ಬಿಟ್ಟುಹೋಗತೊಡಗಿದರು. ಊರು ಸ್ಮಶಾನ ಮೌನ ತಾಳಿತ್ತು. ಕೆಲವೊಂದಿಷ್ಟು ಜನ ಮಾತ್ರ ವಾಸವಾಗಿದ್ದು ಬಹಳಷ್ಟು ಮನೆಗಳಿಗೆ ಬೀಗ ಹಾಕಲಾಗಿತ್ತು. ಹಗಲು ಹೊತ್ತು ಕೂಡ ಊರಾಗ ತಿರುಗಾಡಲಿಕ್ಕೆ ಭಯ ಆಗುತ್ತಿತ್ತು.
ದೃಶ್ಯ-೩

ಹನುಮಂತ: ಊರೈತಿ ಅಂದ್ಮೇಕೆ ಸುಡುಗಾಡು ಇರಾಕಬೇಕು. ಹಗಲಿಗೆ ರಾತ್ರಿ ಬೆಳಕಿಗೆ ಕತ್ಲು ಇದ್ದಾಂಗೆ. ಇಲ್ಲಾಂದ್ರೆ ಊರೇ ಸುಡುಗಾಡು ಆಗುತೈತೆ. ಆಮೇಕೆ ನಾವೇ ಬೇರೊಂದು ಊರು ಮಾಡ್ಬೇಕಾಗತೈತೆ..
ಮಲ್ಲಪ್ಪ: ಸತ್ತರ‍್ನ ಸುಟ್ರೆ ಜಾಗ ಬೇಕಾಗಿಲ್ಲ. ಕಾಡ ಹತ್ರ ಯಾವುದಾನ ಹಳ್ಳದಾಗ ಸುಟ್ಟು ಬರಬಹುದು. ಆದ್ರ ಮಣ್ಣಾಗ ಹಂಗ ಹೂಳಿದ್ರೆ ಜಾಗ ಬೇಕಾಯಿತೈತೆ..
ಹನುಮಂತ: ನಿನ್ನ ಪ್ರಕಾರ ಹೆಣನ ಸುಟ್ರ ಸರಿನೋ? ಹೂಳಿದ್ರೆ ಸರಿನೋ?

ಮಲ್ಲಪ್ಪ: ಸತ್ತ ಮ್ಯಾಲೆ ಏನ್ ಮಾಡಿದ್ರೆ ಏನ್ ಪ್ರಯೋಜನ. ನನ್ನ ವಿಚಾರದಾಗ ಎಲ್ಡು ಸರಿನೇ. ಅದ್ಹೆಂಗಂದ್ರ ಸಾವು ಅನ್ನೋದು ಬಂದ ಮ್ಯಾಕೆ ಅದು ಅವನ ಕೊನೆ ಕಾಲ. ಹುಟ್ಟಿದ ಕಾಲಕ್ಕೆ ಊರು ಬೇಕು. ಸತ್ತ ಕಾಲಕ್ಕೆ ಸುಡುಗಾಡು ಬೇಕು. ಸುಡುಗಾಡು ಅಂದ್ರೆ ಏನು ಗೊತ್ತ ಸುಡುವ ಜಾಗ ಅಥವಾ ಕಾಡು ಅಂತ. ಹೆಣಕ್ಕೇನೂ ಗೊತ್ತಾಗಲ್ಲ. ನನ್ನ ಸುಡತಾರೋ..ಹೂಳತಾರೋ ಅಂತ. ಅದು ಹೇಳಂಗಿಲ್ಲ ಕೇಳಂಗಿಲ್ಲ. ಅದಕ್ಕ ನನ್ನ ವಿಚಾರದಾಗ ಸುಟ್ರ ಜಾಗ ಬಾಳ ಬೇಕಿಲ್ಲ. ಹೂಳಿದ್ರೆ ಜಾಗ ಬೇಕು. ನಮ್ಮ ಜನಾ ಕೆಲವೊಬ್ರು ಸುಡತಾರ, ಕೆಲವೊಬ್ರು ಹೂಳತಾರ. ಸುಟ್ರ ಸುಡಗಾಡು. ಹೂಳಿದ್ರ ರುದ್ರಭೂಮಿ, ಸ್ಮಶಾನ ಅಂತಾರ..

ಹನುಮಂತ: ನೀನ್ಹೇಳದು ಸರಿನೇ ಅಂದ್ರೆ ನಮ್ಮೂರಿಗೆ ಒಂದು ಸುಡುಗಾಡು, ಒಂದು ರುದ್ರಭೂಮಿ ಬೇಕಾತು ಅಂತ ಏನು?
ಮಲ್ಲಪ್ಪ: ನಾನು ಹೇಳಿದ್ದು ಹಂಗಲ್ಲ. ಕೆಲವೊಬ್ರು ಸುಡತಾರ, ಇನ್ನ ಕೆಲವ್ರು ಹೂಳತಾರೆ ಅಂತ. ಸುಟ್ರೆ ಅದು ಸುಡುಗಾಡು. ಹೂಳಿದ್ರೆ ಅದು ರುದ್ರಭೂಮಿ ಆಗತೈತಿ. ಸುಟ್ಟುಬಿಟ್ರೆ ಆತನ ನೆನಪು ಮತ್ತ ಬರಂಗಿಲ್ಲ, ಬರಬಾರದು ಹೂಳಿದ್ರೆ ಜಾಗ ನೋಡಿ ನೆನಪಾಗಿ ಇದ್ದವ್ರು ದುಃಖ ಪಡತಾರ..
ಹನುಮಂತ: ಎಷ್ಟೋ ಜನ ಬರಬಾರದ ಸಾವನ್ನ, ಬರಬಾರದ ವಯಸ್ಸನಾಗೆ ಬರಬಾರದ ರೀತಿಯೊಳಗೆ ಬರಸ್ಕೊಂಡು ಸುಡಾಕೂ ಬಾರದ್ಹಾಂಗ ಹೂಳಕೂ ಬಾರದ್ಹಾಂಗ ಹೆಣ ಆಗ್ತಾರ. ತೆಲಿ ಎಲ್ಲೋ ಬಿದ್ದು ನರ‍್ತಿರ್ ತೈತಿ. ಮುಂಡ ಅಷ್ಟಕ್ಕ ಹೂವಿನ ಹಾರಹಾಕಿ ಹೂಳತಾರೆ. ಇಲ್ಲ ತೆಲಿ ಅಷ್ಟ ಸಿಕ್ಕಿರತೈತಿ. ಮುಂಡಾನ ನಾಯಿನರಿ ಹದ್ದು ಎಳ್ಕೊಂಡು ಹೋಗಿರ್‌ತಾವ. ಅಂಥವ್ಕ ಸುಟ್ರೇನು..ಹೂಳಿದ್ರೇನು..ಅಂತ ನನಗ ಅನ್ಸತೈತಿ.
ಮಲ್ಲಪ್ಪ: ಲೋ ಹನುಮಾ, ಸಾವು ಯಾರಿಗೆ ಯಾವಾಗ ಹೇಂಗೆ ಬರತೈತಿ ಅಂತ ಗೊತ್ತಿಲ್ಲ. ಹುಟ್ಟುವಾಗ ವಿಧಿ ವಿಧಾನ ಆಚರಣೆ ಮಾಡಿದ ರೀತಿ ಸತ್ತಾಗ ಬೇರೆ ವಿಧಿ ವಿಧಾನ ರ‍್ತಾವ. ಅವನ್ನ ಮಾಡ್ಲೇಬೇಕು. ಅದ ನಮ್ಮ ಧರ್ಮ ಕಣ್ಲ.
ಹನುಮಂತ: ಈಗ ರುದ್ರಭೂಮಿ ಅಂದ್ರೆ ಏನ್ಲಾ..
ಮಲ್ಲಪ್ಪ: ರುದ್ರಭೂಮಿ ಅಂದ್ರೆ, ರುದ್ರ ಅಂದ್ರೆ ಶಿವ, ಭೂಮಿ ಅಂದ್ರೆ ಜಾಗ, ಶಿವನ ಜಾಗ ಅಂತ..

ಹನುಮಂತ: ಊರಾಗರ‍್ಬೇಕಾದ ದೇವ್ರು ಸ್ಮಶಾನ ಅಲ್ಲಿ ಯಾಕ ರ‍್ತಾನ..
ಮಲ್ಲಪ್ಪ: ತಪಸ್ಸಿಗೆ ಒಳ್ಳೆಯ ಜಾಗ ಅಂದ್ರೆ ಅದೆ. ಅಲ್ಲಿ ಶಾಂತವಾಗಿ ರ‍್ತೇತಿ. ಯಾವ ಗಲಾಟಿನೂ ಇರಂಗಿಲ್ಲ ಅಂತ ಶಿವ ತಪಸ್ಸಿಗೆ ಅಲ್ಲೇ ಕೂರೋದು.
ಹನುಮಂತ: ಹುಟ್ಟಿದಾಗ ಇರುವ ಜಾತಿ ಮತ್ತು ಧರ್ಮ ಸತ್ತ ಮೇಲೂ ಇದ್ರೆ ಏನೂ ಪ್ರಯೋಜನ..
ಮಲ್ಲಪ್ಪ: ಯಾವುದೆ ಒಂದು ಜಾತಿ ಧರ್ಮ ಏಳೇಳು ಜನ್ಮದವರೆಗೂ ಅವನ ಜೊತೆಗೆ ಇರುತ್ತೆ ಹನುಮಂತ.

ಹನುಮಂತ: ಇರ‍್ಲಿ ಬಿಡಪ್ಪ, ಅವರವರ ಜಾತಿ ಧರ್ಮ ಅವ್ರಿಗೆ ಇರ‍್ಲಿ. ಈಗ ಊರಿಗೂ ಸ್ಮಶಾನಕ್ಕೂ ಏನು ವ್ಯತ್ಯಾಸ ಅಂತಿಯಾ.
ಮಲ್ಲಪ್ಪ: ಊರಲ್ಲಿ ಒಂದು ಕುಟುಂಬಕ್ಕೆ ಜಾಗ ಇರುತ್ತೆ. ಸ್ಮಶಾನದಲ್ಲಿ ಪ್ರತಿ ಒಬ್ಬರಿಗೆ ಜಾಗ ಇರುತ್ತೆ. ಊರಲ್ಲಿ ಜನ ಉಸಿರಾಡ್ತಾರೆ. ಮಾತಾಡ್ತಾರೆ. ಸ್ಮಶಾನದಲ್ಲಿ ಉಸಿರಾಡಲ್ಲ, ಮಾತಾಡಲ್ಲ. ಊರಲ್ಲಿ ಜನರಿಗೆ ಹಸಿವು, ಬಾಯಾರಿಕೆ ನಿದ್ರೆ ಇರುತ್ತೆ. ಅಲ್ಲಿ ಯಾವುದೂ ಇರಲ್ಲ. ಊರಲ್ಲಿನ ಜನಕ್ಕೆ ಕಾಮ, ಕ್ರೋದ, ಮದ, ಮೋಹ, ಮತ್ಸರ ಇರುತ್ತೆ. ಅಲ್ಲಿಯವರಿಗೆ ಏನೂ ಇರಲ್ಲ. ಊರಲ್ಲಿ ಹೊಡೆದಾಟ ಬಡಿದಾಟ ಇರುತ್ತೆ ಅಲ್ಲಿ ಇರಲ್ಲ.. ಹನುಮಂತ: ಅಂದ್ರೆ ಇದೆ ಅನ್ನೋದೆಲ್ಲ ಇಲ್ಲಿ. ಇಲ್ಲ ಅನ್ನೋದೆಲ್ಲಾ ಅಲ್ಲಿ ಅಂತಿಯಾ
ಮಲ್ಲಪ್ಪ: ಆದ್ರೆ ಇಲ್ಲಿ ವಯಸ್ಸಾದಂತೆಲ್ಲಾ ದೇಹ ಕೃಶವಾಗುತ್ತಾ ಹೋಗುತ್ತದೆ. ಅಲ್ಲಿ ಕಾಲ ಕಳೆದಂತಲ್ಲಾ ದೇಹ ಮಣ್ಣಲ್ಲಿ ಮಣ್ಣಾಗುತ್ತಾ ಹೋಗುತೈತಿ. ಇಲ್ಲಿ ಸಂಬAಧಗಳು ಬೆಳೆಯುತ್ತಾ ಹೋಗುತ್ತವೆ. ಸತ್ತಮೇಲೆ ಕಾಲಕ್ರಮೇಣ ಸಂಬಂಧಗಳು ದೂರಾಗ್ತಾ ಹೋಗುವವು. ಇದೇ ಬದುಕು. ಇದೇ ನಮ್ಮ ಜೀವನ.

ಹನುಮಂತ: ನಿಜ ಬದುಕು ಇಷ್ಟೆ ಇರುವಾಗ ಒಳ್ಳೆಯ ರೀತಿಯಿಂದ ಬದುಕಬೇಕು. ಚಿಂತಿಯಾಗ್ಲಿ ಸಾವಿನ ಚಿಂತೆಯಾಗ್ಲಿ ಮಾಡ್ಲೇಬಾರದು. ಹಂಗAತ ಸತ್ತ ನಮ್ಮವರನ್ನ ಸುಮ್ನೆ ಬಿಡಬರ‍್ದು. ಅವ್ರಿಗೆ ಒಂದು ಗತಿ ಕಾಣಿಸ್ಲೆಬೇಕು. ಇದ್ದಾಗ ತೋರಿಸದೇ ಇರೋ ಪ್ರೀತಿನಾ ಸತ್ತ ಮೇಲೆ ವ್ಯಕ್ತಪಡಿಸೋರು ಎಷ್ಟು ಜನ ಇಲ್ಲ ಹೇಳು. ಸರಿಯಾಗಿ ಮಾತಾಡಿಸೋದಿಲ್ಲ. ನಮಗೆ ಬೇಕಾದುದೇನು ಅಂತ ಕೇಳೋರಿಲ್ಲ ಅಂದ ಮೇಲೆ ಸತ್ತಾಗ ಮೆರವಣಿಗೆ ಮಾಡಿ ಸ್ಮಶಾನದಲ್ಲಿ ಸಮಾಧಿ ಕಟ್ಟಿ ಆಗೊಮ್ಮೆ ಈಗೊಮ್ಮೆ ಡಂಬಾಚಾರಕ್ಕೆ ಪೂಜೆ ಮಾಡುವ ನೆಪ ಮಾಡಿದ್ರೇನು ಫಲ. ಆಗ ಮಾಡುವ ಖರ್ಚು ಇದ್ದಾಗಲೇ ಮಾಡಿ ಋಣ ತೀರಿಸಿಕೊಳ್ಳದವರೆಷ್ಟು ಜನ ಇಲ್ಲ.. ಬದುಕಿರುವಾಗಲೇ ಸಂತೋಷಪಡಿಸದೇ ಮರಣೋತ್ತರವಾಗಿ ಸಂತಸಪಡಿಸುವ ನೆಪದಲ್ಲಿ ಸಂಭ್ರಮಪಟ್ಟರೇನು ಫಲ. ಬದುಕಿರುವಾಗಿನ ಬೆಲೆ ವಯಸ್ಸಾದಂತೆಲ್ಲಾ ಕಡಿಮೆಯಾಗುತ್ತದೆಯೇ? ನಾ ಮಾಡಿದ ಸಹಕಾರ, ತೋರಿದ ಪ್ರೀತಿ, ನಾ ಪಟ್ಟ ಕಷ್ಟ ಇವು ಯಾವವು ಈ ಸಮಯದಾಗ ನನ್ನ ನೆರವಿಗೆ ಬರುವುದಿಲ್ಲವೇ.. ಕಾಲ ಉರುಳಿದಂತೆಲ್ಲಾ ಸಂಬಂಧಿಕರು ದೂರಾಗ್ತಾ ಹೋಗ್ತಾರ. ಸಂಬಂಧಗಳು ಹಳಸಿ ಹೋಗ್ಯಾವು. ನನ್ನದೆಂತಾ ದೊಡ್ಡ ಕುಟುಂಬ. ಈಗ ಮನಿಯ್ಯಾಗ ಯಾರೂ ಇಲ್ಲ. ಈ ಮನೆಯಲ್ಲಿ ನಾನೊಬ್ಬನೇ. ಆಗ ಏನು ಖುಷಿ. ಮನೆ ತುಂಬ ಜನ. ಸಂಭ್ರಮವೋ ಸಂಭ್ರಮ. ಮಕ್ಕಳು ದೂರ ದೂರ ಹೊರಟುಹೋದ್ರು. ಹೆಣ್ಣು ಮಕ್ಕಳೆಲ್ಲಾ ನಾ ಕಾಣದ ಊರಲ್ಲಿ ವಾಸವಾದ್ರು. ಹೆಂಡತಿ ಈ ಬಾಳ ಪಯಣದ ಅರ್ಧದಾಗ ಮರೆಯಾದ್ಲು. ನಡೆಯಲು ಶಕ್ತಿ ಇಲ್ಲ. ಮಾತನಾಡಲು ಯಾರು ಇಲ್ಲ. ಕೊನೆಗೆ ಮತ್ತೆ ಬಂದೆ ನೀನು. ಅದನ್ನು ಬಿಟ್ರೆ ನನ್ನದೇನು ಇಲ್ಲ. ಕೊನೆಯವರೆಗೂ ನೀನು ನನ್ನ ಜೊತೆಗೆ ರ‍್ತಿಯಾ ಅಂತನಾ ಅಂದುಕೊAಡಿಲ್ಲ. ಯಾಕೆಂದ್ರೆ ಬದುಕು ಇಷ್ಟೆ.

ಮಲ್ಲಪ್ಪ: ನನಗೂ ಅಷ್ಟೆ ಹನುಮಂತ, ನಮ್ಮದು ಶ್ರೀಮಂತ ಕುಟುಂಬ ನಾನು ಚಿಕ್ಕವನಿದ್ದಾಗಲೇ ನಿನ್ನ ಗೆಳೆತನ ಮಾಡಿದ್ದೆ. ನೀನು ಬಡವ, ನಾನು ಶ್ರೀಮಂತ ಅಂತ ನನಗೆ ಅನ್ನಿಸ್ಲೇ ಇಲ್ಲ. ಇಬ್ರೂ ಅನ್ಯೋನ್ಯವಾಗರ‍್ತಿದ್ವಿ. ನನಗಿರುವ ಶ್ರೀಮಂತಿಕೆಗೆ ನನ್ನ ಸುತ್ತಲೂ ಕೆಲವರು ಗಿರಕಿ ಹೊಡಿತಾರೆ. ಇದು ಎಷ್ಟು ದಿನ. ಈ ಹಣಕ್ಕಾಗಿ ನನ್ನ ಸಾಯಿಸಿದರೂ ಆಶ್ಚರ್ಯ ಇಲ್ಲ. ನನಗೆ ಯಾವ ಹಣನೂ ಬೇಡ. ಈ ಶ್ರೀಮಂತಿಕೆ ಬೇಡ ಅನ್ನಿಸ್ತಾ ಇದೆ. ನನ್ನವಳಿಗೆ ನೋಡಿದ್ರೆ ದು:ಖ ಆಗುತ್ತೆ. ಸೊಸೆಗೂ ಆಕೆಗೂ ಯಾವಾಗ್ಲೂ ಜಗಳ. ಮಗ ಹೆಂಡತಿ ಮಾತು ಕೇಳಿ ಇಬ್ಬರಿಗು ಬೈಯುತ್ತಿರುತ್ತಾನೆ. ಸರಿಯಾದ ಸಮಯಕ್ಕೆ ಊಟ ಸ್ನಾನ ಸಿಗದೇ ಆಕೆನೂ ದು:ಖ ಪಡ್ತಾಳೆ. ಒಬ್ಬರನ್ನೊಬ್ಬರು ಮುಖ ನೋಡಿ ದು:ಖಿಸುವುದಷ್ಟೆ ಭಾಗ್ಯ. ನಾ ಮೊದಲು ಸತ್ತರೆ ಆಕೆಗೆ ಮತ್ತಷ್ಟು ನೋವು. ಆಕೆ ಮೊದಲು ಹೋದರೂ ನನಗೆ ಇನ್ನಷ್ಟೂ ನೋವು. ಹೀಗಾಗಿ ಇಬ್ಬರೂ ಒಂದೇ ಬಾರಿ ಹೋಗಿಬಿಟ್ಟರೆ ಸರಿ ಎಂದು ಒಮ್ಮೊಮ್ಮೆ ಅನ್ನಿಸುತ್ತದೆ..
ಕತ್ತಲು (ದೃಶ್ಯ-೪)
ಕೆಂಚ: ಮಗನೇ ನಾ ಸತ್ರ ನನ್ನ ಎಲ್ಲಿ ಸುಡ್ತಿಯೋ..
ಮಗ: ಅಪ್ಪ, ಅದಕ್ಯಾಕ ಚಿಂತಿ ಮಾಡ್ತಿ. ನಾ ಎಲ್ಲ ವ್ಯವಸ್ಥೆ ಮಾಡ್ತೀನಿ. ನೀ ಸುಮ್ನ ಮಲಗು.

ಕತೆಗಾರ:(ಪ್ರವೇಶಿಸಿ) ಮಗನಿಗೂ ಅಪ್ಪನ ಹೆಣ ಎಲ್ಲಿ ಸುಡಬೇಕು. ಎಲ್ಲಿ ಹೂಳಬೇಕು ಅನ್ನೋದೆ ಚಿಂತೆಯಾಯ್ತು. ಯಾರಿಗೂ ಅಪ್ಪಗ ಆರಾಮಿಲ್ಲ ಅನ್ನುವಂಗಿಲ್ಲ. ಆರಾಮಿಲ್ಲ ಅಂದ ಕೂಡ್ಲೆ ಅತ ಸತ್ರೆ ಎಲ್ಲಿ ಹೆಣ ನಮ್ಮ ಹೊಲಕ್ಕ ತಂದುಬಿಡ್ತಾರೋ ಅನ್ನೋ ಭಯಕ್ಕೆ ಆಗ್ಲೆ ಕಾವಲು ಸುರುವಾಗಿ ಬಿಡ್ತಿತ್ತು. ಹಂಗಾಗಿ ಮಗನಾದವನೂ ತನ್ನ ಅಕ್ಕಪಕ್ಕದವರಿಗೆ ಈ ವಿಷಯ ಹೇಳ್ತಾನೆ ಇಲ್ಲ. (ನಿರ್ಗಮನ)
ಮಗ: ಅಪ್ಪ ಏನಾರ ರಾತ್ರಿ ಸತ್ರೆ, ಯಾರಿಗೂ ಗೊತ್ತಾಗದ್ಹಂಗ ಇಲ್ಲೆ ಪಕ್ಕದ ಹೊಲ್ದಾಗ ಹೂಳಿಬಿಡಬಹುದು. ಆದ್ರೆ ಅಕ್ಕಂದಿರಿಗೆ, ದೂರ ದೂರನ್ಯಾಗಿರೋ ತಮ್ಮಗ ಈ ವಿಷಯ ತಿಳ್ಸಿಬೇಕಲ್ಲ. ಅವ್ರು ಕಡೇ ಸಾರಿ ಅಪ್ಪನ ಮುಖ ನೋಡ್ಬೇಕಲ್ಲ ಹೆಂಗ್ಮಾಡ್ಲಿ. ಅಪ್ಪನ್ನ ಹೂಳಿದ ಮೇಲೆ ಇದ್ದ ವಿಷ್ಯ ಬಿಡ್ಸಿ ಹೇಳಿದ್ರಾತು

ಕತೆಗಾರ:(ಪ್ರವೇಶಿಸಿ) ರಾತ್ರಿ ಎಂಟು ಗಂಟೆಗೆ ಅಪ್ಪನ್ನ ಎಬ್ಸಿ ಊಟ ಮಾಡ್ಸಬೇಕಂತ ಮಗ ಹೊರಟ. ಆದ್ರೆ ಅಪ್ಪ ಏಳಲೇ ಇಲ್ಲ. ಅಮ್ಮ ಹೆಂಡ್ತಿ ಮಕ್ಳು ಯಾರೂ ಬಾಯಿಬಿಡಲಿಲ್ಲ. ಕಣ್ಣೀರು ಮಾತ್ರ ಸುರಿತಿದ್ವು.
ಕೆಂಚನ ಹೆಂಡತಿ: ಅಯ್ಯೋ ಸುಡುಗಾಡು ಇದ್ದಿದ್ರೆ ನನ್ನ ಮಗ, ಮಗಳು ನಿನ್ನ ಮಾರಿ ನೋಡಿ ಆನಂದದಿAದ ಸುಟ್ಟು ರ‍್ತಿದ್ರು. ಎಂಥಾ ಕರ್ಮ ನಮ್ದು. ಎಲ್ಲಿ ಸುಡಬೇಕು. ಎಲ್ಲಿ ಹೂಳಬೇಕು. ಯರ‍್ನ ಕರಕೋಬೇಕು. ಯಾರಿಗೆ ಹೇಳ್ಬೇಕು ಅನ್ನೋದು ಗೊತ್ತಾಗವಲ್ದು. (ಕತ್ತಲು)
ಕತೆಗಾರ: ಮನೆ ಮಂದಿಯೆಲ್ಲಾ ದು:ಖದಿಂದ ನಲುಗಿಹೋಗಿದ್ರು. ಮೊಮ್ಮಕ್ಕಳು ಯಾರು ಕೂಡ ಹೊರಗೆ ಹೋಗಲಿಲ್ಲ. ಅವರೆಲ್ಲರನ್ನ ಬೈಯ್ದು ಉಣಿಸಿ ಮಲಗಿಸಿ ಬಿಟ್ರು. ಮಗ ಯಾರಿಗೂ ಗೊತ್ತಾಗದ್ಹಾಂಗ ಗುದ್ಲಿ ಸಲಿಕಿ ಪುಟ್ಟಿ ತಗೊಂಡ. ಆಗ್ಲೆ ಊರು ಮಲಗಿ ಗೊರಕೆ ಹೊಡಿತ್ತಿತ್ತು. ತಂದೆಯನ್ನು ಹೆಗಲಿಗೆ ಹಾಕಿಕೊಂಡು ಮೆಲ್ಲಗೆ ಹೆಜ್ಜೆ ಇಡಗೊಡಗಿದ. ಒಂದು ವೇಳೆ ನಾಯಿಗಳು ಬೊಗಳಿದ್ರೆ, ಯಾರದ್ರು ಎದ್ದುಬಿಟ್ರೆ.. ಎನ್ನುವ ಭಯ. ಆದ್ರೂ ಅನಿವಾರ್ಯ ನಡೆಯುತ್ತಿದ್ದ. ದೂರದಾಗೆಲ್ಲೋ ನರಿಗಳ ಕೂಗು ಒಮ್ಮೆ ಭಯ ಪಟ್ಟು ಮುನ್ನಡೆದ. ಊರಿ ದಾಟಿದ ಮೇಲೆ ಕತ್ತಲಲ್ಲಿ ಮಾಯವಾದವನು ತಾನು ತೋಡಿದ ಗುಂಡಿಯ ಬಳಿಬಂದು ತಂದೆಯ ಹೆಣವನ್ನು ಮೆಲ್ಲಗೆ ಕೆಳಗಿಳಿಸಲು ಹೋದಾಗ ತಂದೆ ಮಗನ ಕೈಯನ್ನ ಹಿಡಿದಂತಾಗಿ ಆಶ್ಚರ್ಯ! ಭಯದಿಂದ ತಂದೆಯನ್ನ ಮಾತಾಡಿಸ್ತಾನೆ. ಎದೆ ಮುಟ್ಟಿ ನೋಡ್ತಾನೆ. ಉಸಿರಾಟ ಇದೆ. ಆದ್ರೆ ತಂದೆ ಮಾತಾಡ್ತಾ ಇಲ್ಲ. ಧೈರ್ಯ ಮಾಡಿಕೊಂಡು ತಂದೆಯ ಮುಖವನ್ನು ನೋಡ್ತಾನೆ. ಮುಖದ ಮೇಲೆ ಕೈಯಾಡಿಸುತ್ತಾನೆ. ಕಣ್ಣೆಲ್ಲಾ ತೇವ. ಕಣ್ಣೀರು ಸುರೀತಾ ಇದೆ.
(ಕತ್ತಲು) (ಕಾಡು ದೃಶ್ಯ)

ಮಗ: ಅಪ್ಪಾ.. ಅಪ್ಪಾ
ಕೆಂಚ: ಮಗನೇ ಬಾಳ ಹೊತ್ತು ಮಾಡ್ಬೇಡಪ್ಪ, ನನ್ನ ಮುಚ್ಚಿಬಿಡು. ನಾನ್ಹೇಗಿದ್ರು ಸಾಯೋನು. ಇವತ್ತಲದಿದ್ರು ನಾಳೆ, ನಾಳೆ ಅಲ್ಲದಿದ್ರು ನಾಡಿದ್ದು. ನೀನ್ಯಾಕೆ ಯೋಚ್ನೆ ಮಾಡ್ತಿ ನನ್ನ ಮುಚ್ಚೋಕೆ ಒಳ್ಳೆಯ ಸಮಯ ಮುಚ್ಚಿಬಿಡು ಬೇಗ
ಮಗ: ಬೇಡಪ್ಪ ಏನು ಬೇಕಾದ್ರಾಗಲಿ ನಿನ್ನ ಮನಿಗೆ ಒಯಿತೀನಿ. (ಕತ್ತಲು)
ಕತೆಗಾರ: ಅಂದರೂ ಅಪ್ಪ ಹಟಮಾಡಿದ. ಮಾತನಾಡುತ್ತಿದ್ದಂತೆಯೇ ಅಪ್ಪ ಕೊನೆ ಉಸಿರೆಳೆದ. ಬಾಳ ಹೊತ್ತು ಮಗ ಅತ್ತು ಅತ್ತು ತಂದೆನ ಮುಚ್ಚಿ ಬಂದ. ಮನೆಗೆ ಬಂದವ್ನೆ ಯಾವ ವಿಷಯವನ್ನು ತನ್ನ ತಾಯಿ, ಹಂಡ್ತಿಗೆ ಹೇಳದೇನೆ ಮುಸುಗು ಹಾಕಿಕೊಂಡು ಮಲಗಿ ಅಳುತಿದ್ದ. ಮಗ ಯಾಕೋ ಬಾಳ ಅಳ್ತಾವ್ನೆ ಅಂತ ತಾಯಿ ಎಬ್ಸಿದ್ಲು. (ಕತ್ತಲು)
ಅವ್ವ: ಮಗ ಸುಮ್ನಿರಪ್ಪ. ಅವರ ಜೊತೆಗೆ ನನ್ನೂ ಮುಚ್ಚಿಬಿಟ್ಟಿದ್ರೆ ಚಲೋ ಇತ್ತು. ನಾನೂ ಇವತ್ತಲ್ಲ ನಾಳೆ ಹೋಗಾಕಿನೇ. ಇಬ್ರೂ ಜತಿಗೆ ಹೋಗಿದ್ರೆ ಅವ್ರಿಗೂ ಸಮಾಧಾನ ಆಗ್ತಿತ್ತು. ನೆಮ್ಮದಿಯಿಂದ ಮಣ್ಣಾಗ ಉಸುರು ಬಿಡ್ತಿದ್ರು..
ಮಗ: ಯಾಕವ್ವ ಹಿಂಗAತಿ ಮಣ್ಣಾಗ ಉಸ್ರು ಬಿಡ್ತಿದ್ರು ಅಂದ್ರ..
ಅವ್ವ: ಹೌದಪ್ಪ, ನಿಮ್ಮಪ್ಪ ಸತ್ತಿದಿಲ್ಲ. ನನಗೆ ಅವರೆಲ್ಲಾ ಹೇಳಿದ್ರು. ಇಬ್ರೂ ಜತೀಗೆ ಸತ್ರ ಮಗನಿಗೆ ನಮ್ಮನ್ನು ಹೂಳೋದು ಬಹಳ ತ್ರಾಸಾಗತೈತಿ. ಅದಕ್ಕ ನಾನಾ ಮೊದ್ಲು ಹೋಗ್ತೀನಿ ಅಂದಿದ್ರು..

ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯.
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.

 

 

- Advertisement -

LEAVE A REPLY

Please enter your comment!
Please enter your name here

- Advertisement -

Latest News

ನಾಗೂರಲ್ಲಿ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ

ಹುನಗುಂದ: ತಾಲೂಕಿನ ನಾಗೂರ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಎಫ್ಎಲ್ಎನ್ ಮಕ್ಕಳ ಕಲಿಕಾ ಹಬ್ಬ ನಡೆಯಿತು. ಕ್ಲಸ್ಟರಿನ ಹನ್ನೆರಡು ಶಾಲೆಗಳಿಂದ ಆಗಮಿಸಿದ 100ಕ್ಕೂ...
- Advertisement -

More Articles Like This

- Advertisement -
close
error: Content is protected !!
Join WhatsApp Group