- Advertisement -
ಹಾಸನ ತಾ. ಗೊರೂರು ಕನಕರಾಜ್ ಇವರು ಹುಟ್ಟು ರಂಗಭೂಮಿ ಕಲಾವಿದರಾಗಿದ್ದು ಚಿಕ್ಕಂದಿನಿಂದಲೂ ಪೌರಾಣಿಕ ನಾಟಕ, ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಮಹಾಭಾರತ ನಾಟಕಗಳಲ್ಲಿ ಶಕುನಿಯ ಪಾತ್ರಕ್ಕೆ ಜನಮನಸೊರೆಗೊಳ್ಳುವಂತೆ ಜೀವ ತುಂಬಿದವರು ಸಮಾಜ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದು ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲಾ ಶಿಕ್ಷಣ ಹಾಗೂ ಪದವಿ ಪೂರ್ವ ಕಾಲೇಜು ಗೊರೂರುನಲ್ಲಿ ಮುಗಿಸಿ ಸ್ವಂತ ವ್ಯವಹಾರ ಪ್ರಾರಂಭಿಸಿ ಹಲವಾರು ಸಂಘಟನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನಡೆಸಿಕೊಂಡು ಬರುತ್ತಿದ್ದಾರೆ .
ಇವರ ಕಲಾಸೇವೆ ಯನ್ನು ಗುರುತಿಸಿ ಇವರಿಗೆ ಗುಬ್ಬಿ ವೀರಣ್ಣ ರಾಜ್ಯ ಪ್ರಶಸ್ತಿಯನ್ನು ಚುಟುಕು ಸಾಹಿತ್ಯ ಪರಿಷತ್ತು ಹಾಸನ ವತಿಯಿಂದ ನೀಡುತ್ತಿದ್ದೇವೆ ಎಂದು ಸುಂದರೇಶ್ ಡಿ ಉಡುವೇರೆ ಸಾಹಿತಿಗಳು ಹಾಗೂ ಅಧ್ಯಕ್ಷರು ಚುಟುಕು ಸಾಹಿತ್ಯ ಪರಿಷತ್ತು ಅರಕಲಗೂಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ