ಹಾಯ್ಕುಗಳು
- Advertisement -
ಸ್ವಾತಂತ್ರ್ಯಕ್ಕಾಗಿ
ಪಟ್ಟ ಕಷ್ಟ ಅಷ್ಟಿಷ್ಟೇ
ಜ್ಞಾಪಿಸಿಕೊಳ್ಳಿ..
ದೇಶಕ್ಕೆ ಪ್ರಾಣ
ನೀಡಿ ಮರೆಯಾದರೂ
ಅಮರರಾದ್ರು..
ತರೆಮರೆಯ
ಮಾಣಿಕ್ಯಗಳದೆಷ್ಟೋ
ಲೆಕ್ಕವೇ ಇಲ್ಲ..
- Advertisement -
ನಿಸ್ವಾರ್ಥ ಸೇವೆ
ಆದರ್ಶಜೀವಿಗಳು
ಭಾರತೀಯರು..
ಅವರಲ್ಲಿಲ್ಲ
ಪ್ರಚಾರದ ಬಯಕೆ
ಢಂಬಾಚಾರಿಕೆ..
ಒಂದೇ ಆಶಯ
ಸ್ವಾತಂತ್ರ್ಯದ ದೀವಿಗೆ
ಹಚ್ಚಲೇ ಬೇಕು..
- Advertisement -
ಸ್ವಾತಂತ್ರ್ಯವನ್ನು
ಪಡೆದೇ ತೀರಿದರು
ವೀರ ಪುತ್ರರು..
ದೇಶಕೆ ಇಂದು
ವಜ್ರ ಮಹೋತ್ಸವದ
ಸಡಗರವು…
ಶ್ರೀಮತಿ ಜ್ಯೋತಿ ಕೋಟಗಿ.