spot_img
spot_img

ಲೊಯೋಲ ಶಾಲೆಯಲ್ಲಿ ಗಾಳಿಪಟ ಉತ್ಸವ

Must Read

- Advertisement -

ಸಿಂದಗಿ: ಆಗಸದಲ್ಲಿ ಹಾರಾಡುತ್ತಾ ಬಾನಂಗಳದಲ್ಲಿ ಕಿಲಾಡಿಗಳು  ತೇಲಾಡಿದ ಬಣ್ಣ ಬಣ್ಣದ ಪಟಗಳು ಪಟಗಳೊಂದಿಗೆ ತಾವೇ ಹಾರಾಡಿದಷ್ಟು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಸಂಭ್ರಮಿಸಿದ ಸಾಕ್ಷಿಯಾಗಿದ್ದು ಸಿಂದಗಿಯ ಲೊಯೋಲ ಶಾಲೆ.

ಪ್ರತಿ ವರ್ಷದಂತೆ ಈ ವರ್ಷವೂ ಸಿಂದಗಿಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಲೊಯೋಲ ಶಾಲೆಯಲ್ಲಿ ಗಾಳಿಪಟ ಹಬ್ಬವನ್ನು ಆಚರಿಸಲಾಯಿತು.

ಸಮಾರಂಭವನ್ನು ಉದ್ಘಾಟಿಸಿದ ಡಾ. ವಿನಯಾ ಅರವಿಂದ್ ಹೂಗಾರ ಮಾತನಾಡಿ,  ಗಾಳಿಪಟದಂತೆ ಮಕ್ಕಳ ಬೌದ್ದಿಕ ಮಟ್ಟ ಹಾಗೂ ಅಭಿವೃದ್ಧಿ  ವರ್ಷದಿಂದ ವರ್ಷಕ್ಕೆ ಎತ್ತರಕ್ಕೇರಿ ಸಾಧಿಸುವ ಹಂಬಲ ಹೆಚ್ಚಾಗಲಿ.ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ತೋರಲಿ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿ ಭವಿಷ್ಯವನ್ನು ಉಜ್ವಲವಾಗಿ ರೂಪಿಸಿ ಕೊಳ್ಳಬೇಕು ಎಂದು ಹೇಳಿದರು.

- Advertisement -

ಅಧ್ಯಕ್ಷತೆ ವಹಿಸಿದ ಫಾದರ್ ಆಲ್ವಿನ್ ಡಿಸೋಜ ರವರು ಮಾತನಾಡಿ, ಮಕ್ಕಳೆ ಸ್ವಯಂ ಪ್ರೇರಿತವಾಗಿ ಜೀವನದಲ್ಲಿ ಮುಂದೆ ಸಾಗಬೇಕು. ಆಗಸದಲ್ಲಿ ಗಾಳಿಪಟಗಳು ಹಾರಾಡುವ ರೀತಿ ಮುಕ್ತ ಮನಸ್ಸಿನಿಂದ ಇರಬೇಕು. ಅವರಲ್ಲಿ ಯಾವುದೇ ರೀತಿಯ ಗೊಂದಲಗಳು ಇರಬಾರದು ಎಂಬ ದೃಷ್ಟಿಯಿಂದ ಪ್ರತಿ  ವರ್ಷ ನಮ್ಮ ಶಾಲೆಯಲ್ಲಿ ಈ ಗಾಳಿಪಟ ಹಬ್ಬ ಆಚರಿಸಿಕೊಂಡು ಬರುತ್ತಿದ್ದೇವೆ ಎಂದು ತಿಳಿಸಿದರು.

ಶಾಲೆಯ ಪ್ರಾಂಶುಪಾಲ ಫಾದರ್ ಲ್ಯಾನ್ಸಿ ಫರ್ನಾಂಡಿಸ್  ಗಾಳಿಪಟ ಹಬ್ಬದ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು.  ಕಾರ್ಯಕ್ರಮದ ವೇದಿಕೆಯ ಮೇಲೆ  ಅತಿಥಿಗಳಾದ  ಸಿಸ್ಟರ್ ಮೇರಿ ರೀಟಾ ಹಾಗೂ ಶಾಲೆಯ ಉಪ ಪ್ರಾಂಶುಪಾಲೆಯರಾದ ಸಿಸ್ಟರ್ ಗ್ರೇಸಿ ಉಪಸ್ಥಿತರಿದ್ದರು.

- Advertisement -

ವಿದ್ಯಾರ್ಥಿನಿ ದೀಕ್ಷಾ ಕಾರ್ಯಕ್ರಮ ನಿರೂಪಿಸಿದಳು. ಉಮರ್ ಸ್ವಾಗತಿಸಿದರು. ಮುಸ್ತಾಕೀಮ್ ವಂದಿಸಿದರು. ಗಾಳಿಪಟ ಸ್ಪರ್ಧೆಯಲ್ಲಿ ವಿಜೇತರಾದ  ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group