Homeಲೇಖನನಾಗ ಸಂಪಿಗೆ

ನಾಗ ಸಂಪಿಗೆ

ನಾಗಕೇಸರ ಅಥವಾ ಚಿತ್ತೆ ಬೀಜ.ಶಾಲೆಯ ರಜಾದಿನಗಳಲ್ಲಿ ಪಿರಿಯಡ್ ಗ್ಯಾಪ್ ಅಲ್ಲಿ ನಮ್ಮ ಆಟ ಗಳ ಸಾಲಿನಲ್ಲಿ ಚಿತ್ತೆ ಯಾಗಿ ,ಗೋಲಿ ಯಾಗಿ ,ಹುಲಿಹಸುವಿನ ದಾಳಗಳಾಗಿ,ಪಗಡೆಯ ಕವಡೆಯಾಗಿ ನಮ್ಮ ಆಟದ ಪರಿಕರ ಗಳಲ್ಲಿ  ಒಂದು. ನಾಗ ಬನ ಗಳಂತಹ ದೇವರ ಸಾನಿಧ್ಯದಲ್ಲಿ ಈ ಮರಗಳ ಆಯ್ಕೆ ಹೆಚ್ಚು. ಮಲೆನಾಡಿನ ಮರದ ಹಲಗೆಯ ಚಾವಣಿಗೆ ಇದರ ಎಲೆ ಹಾಕಿ ಮಣ್ಣು ಹಾಕಿ ನೆಲಮಾಡಿದರೆ ಗೆದ್ದಲು ಭಯ ಇರುವುದಿಲ್ಲ. ಈಗಲೂ ಹಳೆಯ ಕಾಲದ ಮನೆ ಕೆಡವಿದಾಗ ಈ ಎಲೆಗಳ ಪಳೆಯುಳಿಕೆ ಹಾಗೆ ಇರುವುದು ಕಾಣಬಹುದು. ಇದರ ಎಣ್ಣೆ ಸವರಿದ ಮರದ ಫೀಟೋಪಕರ್ಣ ಹಾಳಾಗುವುದಿಲ್ಲ.

ಇದರ ಕಾಯಿ, ಹೂವಿನ ಕುಸುಮ, ಎಲೆಗಳನ್ನು ಮೆಡಿಸಿನ್ ಗೆ ಉಪಯೋಗಿಸುತ್ತಾರೆ.


  1. ಹೂವಿನ ಕುಸುಮ ವನ್ನು ಬೆಣ್ಣೆ ಸೇರಿಸಿ ಸೇವಿಸಿದರೆ ರಕ್ತ ಮೂಲವ್ಯಾಧಿ ಗುಣವಾಗುತ್ತದೆ.
  2. ಕುಸುಮದ ಪುಡಿಯನ್ನು ಕಲ್ಲು ಸಕ್ಕರೆ ಸೇರಿಸಿ ಸೇವಿಸಿದರೆ ಬಿಕ್ಕಳಿಕೆ ನಿಲ್ಲುತ್ತದೆ.
  3. ಕೇಸರವನ್ನು ತುಪ್ಪ ಸೇರಿಸಿ ಸೇವಿಸಿದರೆ ಬಿಳಿಮುಟ್ಟು ಗುಣವಾಗಿ ದೇಹ ಪುಷ್ಟಿ ಆಗುತ್ತದೆ.
  4. ಅಂಗಾಲು ಅಂಗೈ ಉರಿಗೆ ನಾಗಸಂಪಿಗೆ ತುಪ್ಪವನ್ನು ಸವರಿ ಕೆಂಡದಲ್ಲಿ ಕಾಯಿಸಿದರೆ ಗುಣವಾಗುತ್ತದೆ.
  5. ನಾಗಸಂಪಿಗೆ ತುಪ್ಪವನ್ನು ಜಾಯಿಕಾಯಿ ಪುಡಿಸೇರಿಸಿ ಸೇವಿಸಿದರೆ ಬೇದಿ ನಿಲ್ಲುತ್ತದೆ.
  6. ಇದರ ತುಪ್ಪದ ದೀಪ ಬಾಳಂತಿ ಕೋಣೆಯಲ್ಲಿ  ಬೆಳಗಿಸಿ ದರೆ ವಿಷ ಜಂತು ಭಯವಿಲ್ಲ ಮತ್ತು ಶಿಶು ಬಾಳಂತಿಗೆ ಧನುರ್ವಾತ ಬರುವುದಿಲ್ಲ.
  7. ವಾತರೋಗಕ್ಕೆ ಹೊರಗಡೆ ಹಚ್ಚಿದರೆ ನೋವು ಶಮನವಾಗುತ್ತದೆ.
  8. ಹೂವಿನ ಕುಸುಮ ವನ್ನು  ತುಪ್ಪ ದಲ್ಲಿ ಹುರಿದು ಅನೇಕ ಗಿಡಮೂಲಿಕೆ ಉಪಯೋಗಿಸಿ ನಾನು ತಯಾರಿಸುವ ಔಷಧಿ ವೀರ್ಯ ವೃದ್ಧಿ ಗೆ ಬರುತ್ತದೆ.

ಸುಮನಾ ಮಳಲಗದ್ದೆ.9980182883.

RELATED ARTICLES

Most Popular

close
error: Content is protected !!
Join WhatsApp Group