ಕವನ : ಅಕ್ಕ

Must Read

ಅಕ್ಕ

ಅಕ್ಕನೆಂದರೆ ಸಾಕು ನೆನಪಾಗುವದು
ಉಡುತಡಿಯ ಕಿಚ್ಚು
ರೂಪದಲಿ ಹೆಣ್ಣಾದರೂ
ಪುರುಷ ನಾಚುವ ಕಿಚ್ಚು
ರಾಜ ಕೌಶಿಕನ ಧಿಕ್ಕರಿಸಿ
ಒಳಗೆ ಹೊರಗೆ ಬೆತ್ತಲಾದಳು
ನಡೆದಳು ಕಲ್ಯಾಣದೆಡೆಗೆ
ಬರದ ಬಿಸಲಿನ ನಾಡು
ಹುಲಿ ಚಿರತೆ ದಟ್ಟ ಕಾಡು
ಹಕ್ಕಿ ಕಲರವದ ಬೀಡು
ಹೊರಟಳು ಒಬ್ಬಳೇ ಹುಡುಕುತ್ತಾ
ಚೆನ್ನಮಲ್ಲಿಕಾರ್ಜುನನ ಗೂಡು
ಮಳೆ ಮೋಡ ಬಿಸಿಲು ಗಾಳಿ
ಹಸಿವಿಗೆ ಭಿಕ್ಷಾನ್ನ ಕುಡಿಯಲು ಕೆರೆ
ಮಲಗಲು ಹಾಳು ದೇಗುಲಗಳು
ಕಷ್ಟ ಕಾರ್ಪಣ್ಯ ಚಂಡಮಾರುತ ನೋವು
ಕಲ್ಯಾಣಕೆ ಆರು ಹೋಗಬಾರದು
ಕಾಯಕ ದಾಸೋಹವ ಬಿಟ್ಟು
ಕೇಳಲು ಇರಲಿಲ್ಲ ಕಾನನದ ಅಳಲು
ಗೆದ್ದಳು ಕಿನ್ನುರಿಯ ಅಪ್ಪನವರ ಸವಾಲು
ಮುಂದೆ ಇದೆ ನೋಡಾ ಅನುಭವದ ಮಳಲು
ಅಕ್ಕ ಅಲ್ಲಮರ ವಾಗ್ವಾದಕೆ ಕಲ್ಯಾಣವೇ ನಡುಗಿತು
ಎದೆಗುಂದದೆ ಚರ್ಚಿಸಿದಳು ಅಧ್ಯಾತ್ಮದ ಒಲವು
ಶರಣರ ಕಂಕಣವ ಕೈಗಳಿಗೆ ಕಟ್ಟಿ
ಅಡಿಗಡಿಗೆ ವೈದಿಕರ ಶೋಷಣೆಯ ಮೆಟ್ಟಿ
ಬಿತ್ತಿದಳು ಕಾಯಕ ದಾಸೋಹದ ನೀತಿ
ಬೆಳಗುತಿದೆ ಬೆಳಗಲಿ ಉಡುತಡಿಯ ಜ್ಯೋತಿ
ಉರಿಯುಂಡ ಕರ್ಪುರಕೆ ,ಇದ್ದಿಲು ಉಂಟೆ?
ಶಿಶು ಕಂಡ ಕನಸಿಗೆ ಬಯಕೆ ಉಂಟೆ ?
ಕಲ್ಯಾಣದ ಮಗಳಾಗಿ ಲಿಂಗವೇ ತಾನಾಗಿ
ಚೆನ್ನಮಲ್ಲಿಕಾರ್ಜುಣನ ಹಂಗು ತೊರೆದು
ಅಕ್ಕಅರಿವು ಆಚಾರಕ್ಕೆ ಮುಹೂರ್ತವಾದಳು
ಕದಳಿಯ ಕತ್ತಲೆಯಲ್ಲಿ ಬೆಳಕಾದಳು
ಅಕ್ಕ- ಬಸವನ ಮಹಾಮನೆಗೆ ವಿಳಾಸವಾದಳು
————————————————–
ಡಾ ಶಶಿಕಾಂತ ಪಟ್ಟಣ -ಪೂನಾ

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group